*#ಝಿಯಾರತ್_ಕೇಂದ್ರ*
7⃣0⃣
➖➖➖➖➖➖➖➖
*ವಲಿಯ್ಯುಲ್ಲಾಹಿ ವಡಗರ ಮುಹಮ್ಮದ್ ಹಾಜಿ ತಂಙಳ್ (ಖ.ಸಿ.) ಚೆರುವಣ್ಣೂರ್, ಪೇರಾಂಬ್ರ*
👉🏼 *ಭಾಗ - 01*
***********************
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
☪☪☪☪☪☪☪☪
✍ ಗಫೂರ್ ಬಾಯಾರ್
***********************
ಸೃಷ್ಟಿಕರ್ತನಾದ ಅಲ್ಲಾಹನ ಕೋಟ್ಯನುಕೋಟಿ ಸೃಷ್ಟಿಗಳಲ್ಲೊಂದಾದ ಮಾನವ ಸಮೂಹವು ಇಬ್ಲೀಸ್ ಮತ್ತು ಅವನ ಸಂತತಿಗಳಾದ ಪಿಶಾಚಿಗಳ ಪ್ರೇರಣೆಯಿಂದ ಶಿರ್ಕ್'ಗಳ ಮೊರೆ ಹೇೂದಾಗ ಮನುಷ್ಯ ಸಮೂಹವನ್ನು ಮತ್ತೆ ಸನ್ಮಾರ್ಗದ ಹಾದಿಗೆ ತಂದು ಈ ಲೇೂಕದಲ್ಲಿ ತೌಹೀದನ್ನು ನೆಲೆನಿಲ್ಲಿಸುವ ಸಲುವಾಗಿ ಅಲ್ಲಾಹನು ಹಂತ ಹಂತವಾಗಿ ಲಕ್ಷಾಂತರ ಪ್ರವಾದಿಗಳನ್ನು ನಿಯೇೂಜಿಸಿದನು.
ಆದಿಪಿತ ಆದಂ ನೆಬಿ ಅಲೈಹಿಸ್ಸಲಾಮರಿಂದ ಆರಂಭವಾದ ಈ ಪ್ರವಾದಿ ಪರಂಪರೆಯು ಸಯ್ಯಿದುನಾ ಮುತ್ತು ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರೊಂದಿಗೆ ಕೊನೆಯಾಯಿತು. ಪ್ರವಾದಿ ಪರಂಪರೆ ಕೊನೆಯಾದರೂ ಜನಸಮೂಹವನ್ನು ಸನ್ಮಾರ್ಗದ ಹಾದಿಯತ್ತ ಆಹ್ವಾನಿಸುವ ದೌತ್ಯ ಅಂತ್ಯದಿನದ ತನಕ ಮುಂದುವರಿಯಬೇಕು ತಾನೇ? ಆ ಪವಿತ್ರ ದೌತ್ಯವನ್ನು ಅಲ್ಲಾಹನು ತನ್ನ ಇಷ್ಟದಾಸರಾದ ಸತ್ಪುರುಷರಿಗೆ ವಹಿಸಿಕೊಟ್ಟಿದ್ದಾನೆ. ಅವರೇ ಸಂತಶ್ರೇಷ್ಠರಾದ ಔಲಿಯಾಗಳು.
ಪ್ರವಾದಿಗಳಿಗೆ ಮುಅ್'ಜಿಝತ್ ಎಂಬ ಹೆಸರಿನಲ್ಲಿ ನಮ್ಮ ಕಲ್ಪನೆಗೂ ನಿಲುಕದ ಅತಿಮಾನುಷಿಕ ಶಕ್ತಿಯನ್ನು ಸೃಷ್ಟಿಕರ್ತನಾದ ಅಲ್ಲಾಹನು ನೀಡಿದ್ದಾನೆ. ಅದೇ ರೀತಿ ಔಲಿಯಾಗಳಿಗೂ ಸಹ ಕರಾಮತ್ ಎಂಬ ಹೆಸರಿನ ಪವಾಡಗಳನ್ನು ದಯಪಾಲಿಸಿದ್ದಾನೆ.
ನಮ್ಮ ನೆರೆಯ ಕೇರಳವು ಹಲವಾರು ಔಲಿಯಾ ಮಹಾತ್ಮರಿಗೆ ಜನ್ಮ ನೀಡಿದ ನಾಡಾಗಿದೆ. ಅಂತಹ ಔಲಿಯಾಗಳಲ್ಲೊಬ್ಬರಾಗಿದ್ದಾರೆ ವಲಿಯುಲ್ಲಾಹಿ ವಡಗರ ಮುಹಮ್ಮದ್ ಹಾಜಿ ತಂಙಳ್ (ಖ.ಸಿ).
ಕೇರಳದ ಕಲ್ಲಿಕೇೂಟೆ ಜಿಲ್ಲೆಯ ವಡಗರ ಸಮೀಪದ ಚೆರುವಣ್ಣೂರ್ ಗ್ರಾಮದ ಕಂಡಿಯಿಲ್ ಮನೆತನದ ತುರುವೆ ಮುಸ್ಲಿಯಾರ್ ಮತ್ತು ಫಾತಿಮಾ ದಂಪತಿಗಳ ಮಗನಾಗಿ ಜನಿಸಿದ ವಡಗರ ಮುಹಮ್ಮದ್ ಹಾಜಿ ತಂಙಳ್ (ಖ.ಸಿ.)ರವರ ನಾಲ್ಕನೇ ವಯಸ್ಸಿನಲ್ಲೇ ತಾಯಿ ಇಹಲೇೂಕ ತ್ಯಜಿಸಿದರು. ನಂತರ ತಂದೆ ತುರುವೆ ಮುಸ್ಲಿಯಾರರ ಸಂರಕ್ಷಣೆಯಲ್ಲಿ ಬೆಳೆದ ಮಹಾನರು ಪ್ರಾಥಮಿಕ ವಿದ್ಯೆಯನ್ನು ತಮ್ಮ ತಂದೆಯಿಂದಲೇ ಅಭ್ಯಸಿಸಿದರು. ಕುರ್ಆನ್ ಪಾರಾಯಣ ಕರಗತವಾದ ನಂತರ ವಲಿಯುಲ್ಲಾಹಿ ಕಮ್ಮಣ್ಣಿ ಮುಸ್ಲಿಯಾರ್ ಕುಟ್ಟೂರ್ (ಖ.ಸಿ), ಇಬ್ರಾಹಿಂ ಮುಸ್ಲಿಯಾರ್ ಅಯನಿಕ್ಕಾಡ್ (ಖ.ಸಿ), ವಡಗರ ಬಾವ ಮುಸ್ಲಿಯಾರ್'ರಂತಹ ವಿದ್ವಾಂಸರಿಂದ ವಿದ್ಯಾರ್ಜನೆಗೈದರು. ನಂತರ ಉನ್ನತ ವ್ಯಾಸಂಗಕ್ಕಾಗಿ ವೆಲ್ಲೂರು ಬಾಖಿಯಾತ್ ಸ್ವಾಲಿಹಾತ್'ಗೆ ತೆರಳಿ ಶೈಖ್ ಆದಂ ಹಝ್ರತ್ (ರ)ರವರ ಶಿಷ್ಯತ್ವ ಸ್ವೀಕರಿಸಿದರು.
ಹಲವಾರು ತ್ವರೀಖತ್'ಗಳ ಶೈಖ್ ಹಾಗೂ ಆಧ್ಯಾತ್ಮಿಕ ಚೈತನ್ಯದ ತರಂಗವನ್ನೇ ಎಬ್ಬಿಸಿದ ಶಾದುಲಿ ಹಳ್ರಗಳ ಪ್ರಚಾರಕರೂ ಆಗಿದ್ದ ಮಹಾನರು ಪೊನ್ನಾನಿಯ ಅಬ್ದುಲ್ಲ ಎಂಬುವವರ ಮಗಳಾದ ಝೈನಬಾರನ್ನು ವಿವಾಹವಾಗಿದ್ದರು. ನಂತರ ತಮ್ಮ ಎಂಬತ್ತನೇ ವಯಸ್ಸಿನಲ್ಲಿ ವಾಣಿಯನ್ನೂರು ನಿವಾಸಿಯಾದ ತಿತ್ತಾಚ್ಚುಮ್ಮರನ್ನು ಎರಡನೆ ವಿವಾಹವಾದರು. ಝೈನಬಾರವರಲ್ಲಿ ನಾಲ್ಕು ಪುತ್ರಿಯರು ಮತ್ತು ತಿತ್ತಾಚ್ಚುಮ್ಮರಲ್ಲಿ ನಾಲ್ಕು ಪುತ್ರರು ಜನಿಸಿದ್ದು ಮಹಾನರ ನೂರನೇ ವಯಸ್ಸಿನಲ್ಲಿ ಕೊನೆಯ ಮಗ ಖಮರ್ ಜನಿಸಿದರು.
ಬಾಲ್ಯವನ್ನು ಇಲಾಹೀ ಸ್ಮರಣೆಯಿಂದಲೇ ಆರಂಭಿಸಿದ ಮಹಾನರು ತಮ್ಮ ಯೌವನವನ್ನು ಸಂಪೂರ್ಣವಾಗಿ ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದಲ್ಲದೆ ಒಂದಿಡೀ ಶತಮಾನ ಕಾಲದ ತಮ್ಮ ಬದುಕಿಗೆ ಪ್ರವಾದಿ ಸ್ನೇಹದ ಸಿಂಚನ ನೀಡಿ ಕಠಿಣ ಪರಿಶ್ರಮದಿಂದ ಅಲ್ಲಾಹನ ಸಂಪ್ರೀತಿಗೆ ಪಾತ್ರರಾಗಿ ಮಾದರೀಯೇೂಗ್ಯವಾದ ಜೀವನ ನಡೆಸಿದರು. ಹಾಗೆ ತಮ್ಮ ಇಡೀ ಬದುಕನ್ನೇ ಇಲಾಹೀ ಸ್ಮರಣೆಗೆ ಮೀಸಲಿಟ್ಟಿದ್ದರಿಂದ ಮಹಾನರ ಬದುಕಿನಲ್ಲಿ ಕರಾಮತ್'ಗಳು ಪ್ರಕಟವಾಗಲಾರಂಭಿತು.
ಶೈಖುನಾ ಮುಹಮ್ಮದ್ ಹಾಜಿ ತಂಙಳ್ (ಖ.ಸಿ)ರವರು ಮೊದಲ ಬಾರಿಗೆ ಕೈಗೊಂಡ ಹಜ್ ಯಾತ್ರೆಯು ಅವರ ಬದುಕಿನ ಇಲಾಹೀ ಚಿಂತನೆ ಮತ್ತು ಆಧ್ಯಾತ್ಮಿಕವಾದ ಪರಿಶ್ರಮಕ್ಕೆ ಮಿಂಚಿನ ವೇಗವನ್ನೇ ನೀಡಿತು.
ಮೊದಲ ಬಾರಿಗೆ ಹಜ್ ಯಾತ್ರೆ ಕೈಗೊಂಡಾಗ ತಮ್ಮ ತಂದೆಯವರು ಕೊಟ್ಟ ಐವತ್ತು ರೂಪಾಯಿಗಳು ಮಾತ್ರವಾಗಿತ್ತು ಮಹಾನರ ಕೈಲಿದ್ದುದು. ಪ್ರವಾದಿ ಪ್ರೇಮದಿಂದ ಪುಳಕಿತರಾಗಿ ಮೈಮರೆಯುತ್ತಿದ್ದ ಮಹಾನರು ವ್ಯಾಸಂಗ ಮುಗಿಸಿ ವೆಲ್ಲೂರಿನಿಂದ ಹಿಂದಿರುಗುವ ಸಮಯದಲ್ಲಿ ತಾವು ತಮ್ಮ ಜೀವಕ್ಕಿಂತಲೂ ಮಿಗಿಲಾಗಿ ಪ್ರೀತಿಸುವ, ಮದೀನದ ಸ್ವರ್ಗೋದ್ಯಾನದಲ್ಲಿ ವಿಶ್ರಮಿಸುತ್ತಿರುವ ಪ್ರವಾದಿವರೇಣ್ಯ ﷺ ರೌಳಾ ಶರೀಫ್ ಕಾಣಬೇಕೆಂಬ ಉತ್ಕಟವಾದ ಆಕಾಂಕ್ಷೆಯನ್ನು ಹತ್ತಿಕ್ಕಲಾಗದೆ ಇಂದಿನಷ್ಟು ಸುಗಮವಾದ ಯಾತ್ರಾ ಸೌಕರ್ಯವಿಲ್ಲದ ಆ ಕಾಲದಲ್ಲಿ ಮದೀನಾವನ್ನು ಗುರಿಯಾಗಿಸಿ ಕಾಲ್ನಡಿಗೆಯಲ್ಲೇ ಯಾತ್ರೆ ಹೊರಟು ಮುಂಬೈ ತಲುಪಿದ ಮಹಾನರಿಗೆ ಅಲ್ಲಿ ಇರಾನಿ ಪ್ರಜೆಯೊಬ್ಬರ ಗೆಳೆತನ ಬೆಳೆಯಿತು. ನಂತರ ಆ ಇರಾನಿ ಪ್ರಜೆಯೊಂದಿಗೆ ಹಾಯಿ ಹಡಗಿನಲ್ಲಿ ಯಾತ್ರೆ ಮುಂದುವರಿಸಿ ಇರಾಕಿನ ಎದನ್'ಗೆ ತಲುಪಿದರು.
ನಂತರ ಅಲ್ಲಿಂದ ಮರುಭೂಮಿಯ ಬಿಸಿಲಿನ ತಾಪ ಸಹಿಸುತ್ತಾ ಕಾಲ್ನಡಿಗೆಯಲ್ಲೇ ಮಕ್ಕಾ ತಲುಪಿದರು. ಹಜ್ ಮತ್ತು ಉಮ್ರಾ ಕರ್ಮ ನಿರ್ವಹಿಸಿದ ನಂತರ ಮದೀನಾಕ್ಕೆ ತೆರಳಿದವರು ಕೆಲ ವರ್ಷಗಳ ಕಾಲ ಮದೀನಾ ಝಿಯಾರತ್'ನಲ್ಲೇ ತಲ್ಲೀನರಾಗಿ ಬಳಿಕ ಊರಿಗೆ ಮರಳಿದಾಗ ಶೈಖುನಾರಲ್ಲಿ ಹಲವು ಬದಲಾವಣೆಯಾಗಿ ಪವಾಡ ಪ್ರಕಟವಾಗತೊಡಗಿದ್ದರಿಂದ ಬದುಕಿನ ಜಂಜಾಟದಲ್ಲಿ ಬಳಲಿ ಬೆಂಡಾದ ಜನ ಸಮುದಾಯ ಸಾಂತ್ವನವನ್ನರಸುತ್ತಾ ಪ್ರವಾಹದಂತೆ ಮಹಾನರ ಬಳಿ ಬರಲಾಂಭಿಸಿದರು.
*ಮುಂದುವರಿಯುವುದು*
🌱🌱🌱🌱🌱🌱🌱🌱
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Subscribe to:
Post Comments (Atom)

No comments:
Post a Comment