Sunday, September 22, 2019

*ಇಹಪರ ವಿಜಯಕ್ಕಾಗಿ SSF ಸದಸ್ಯರಾಗೋಣ..!*

ಪ್ರಿಯ ಸಹೋದರರೆ,  ಇದೀಗ ನಮ್ಮ ಮುಂದೆ ಮತ್ತೊಮ್ಮೆ ಬರುತ್ತಿದೆ SSF ಸದಸ್ಯತ್ವ ಅಭಿಯಾನ. ಇದುವರೆಗೆ SSF ಸದಸ್ಯರಾಗಿದ್ದವರು ತಮ್ಮ ಸದಸ್ಯತ್ವವನ್ನು ನವೀಕರಿಸುವುದರೊಂದಿಗೆ ಹೊಸಬರು SSF ಸೇರಲು ಒಂದು ಉತ್ತಮ ಅವಕಾಶ.....

🌴 *SSF ನಮಗೆ ಯಾಕೆ ಬೇಕು?*

👉 ತಾತ್ಕಾಲಿಕವಾದ ಈ ಭೂಲೋಕದ ಜೀವನಕ್ಕೆ ಕೊನೆ ಎಂಬುದಿದೆ. ಇಂದಲ್ಲಾ ನಾಳೆ ನಾವು ಮರಣಹೊಂದಲೇಬೇಕು. ಆ   ಮರಣಾನಂತರ ಜೀವನವೊಂದಿದೆ, ಅದುವೇ ಪರಲೋಕ ಜೀವನ. ಅದು ನಮಗೆ ಶಾಶ್ವತ.  ಅದಕ್ಕೆ ಕೊನೆ ಎಂಬುದಿಲ್ಲ...
ತಾತ್ಕಾಲಿಕವಾದ ಈ ಭೂಲೋಕದ  ಜೀವನದಲ್ಲಿ ನಮಗೆ ಎಷ್ಟೇ ಕಷ್ಟಗಳು ,ನಷ್ಟಗಳು ಬಂದರೂ, ಶಾಶ್ವತವಾದ ನಮ್ಮ ಪರಲೋಕದ ಜೀವನ ಪರಾಜಿತವಾಗಬಾರದು. ಅಲ್ಲಿನ ನಮ್ಮ ಜೀವನ ಸುಖಕರವಾಗಬೇಕು. 
ನಮ್ಮ ಪರಲೋಕ ಜೀವನ ಸುಖಕರವಾಗಬೇಕು,  ಸ್ವರ್ಗ ಪ್ರವೇಶಿಸಬೇಕೆಂದಾದರೆ ನಾವು ನಮಗಿಷ್ಡ ಬಂದಂತೆ ಜೀವಿಸಿದರೆ ಸಾಲದು...
ಇಸ್ಲಾಮಿನ ಹೆಸರಲ್ಲಿ ಹೊಸ-ಹೊಸ ವಾದಗಳೊಂದಿಗೆ ಪ್ರತ್ಯಕ್ಷವಾದ ಪ್ರಸ್ತಾನಗಳಿಗೆ, ಸಂಘಟನೆಗಳಿಗೆ ಮಾರುಹೋಗದೆ
  ನಾವು ಅಹ್ಲುಸ್ಸುನ್ನತಿ ವಲ್ ಜಮಾಹತಿನ ವಕ್ತಾರರಾಗಿ ಬದುಕಬೇಕು.
ಸುನ್ನತ್ ಜಮಾಹತ್ ಅಲ್ಲದ ಮುಸ್ಲಿಮರು ಸ್ವರ್ಗಪ್ರವೇಶಿಸಲಾರರು ಎಂದು ಪ್ರವಾದಿ (ಸ-ಅ) ರು ಹೇಳಿದ್ದಾರೆ.
'ನನ್ನ ಸಮುದಾಯವು 73 ವಿಭಾಗಗಳಾಗಿ ವಿಂಗಡಣೆಯಾಗಲಿದ್ದು ಅದರಲ್ಲಿ 72 ವಿಭಾಗಗಳು ನರಕಕ್ಕೆ, 1 ವಿಭಾಗಮಾತ್ರ ಸ್ವರ್ಗ ಪ್ರವೇಶಿಸಲಿದೆ' ಅದುವೇ ಅಹ್ಲುಸ್ಸುನ್ನತೀ ಅಲ್-ಜಮಾಹತ್ (ಸುನ್ನಿಗಲು) ಹದೀಸ್.
ನಮ್ಮ ಪರಲೋಕ ವಿಜಯಕ್ಕೆ ನಾವು ಸುನ್ನತ್ ಜಮಾಹತ್ ಪ್ರಸ್ತಾನದಲ್ಲಿ ನೆಲೆಯೂರಿನಿಂತು, ಸುನ್ನತ್ ಜಮಾಹತಿಗೆ ಬೇಕಾಗಿ  ಕಾರ್ಯಾಚರಿಸುವುದು ಅವಶ್ಯಕ. ಇದಕ್ಕೆಲ್ಲಾ ಒಂದು ಉತ್ತಮ ಅವಕಾಶವೆಂಬಂತೆ ನಾವು ಎಸ್ ಎಸ್ ಎಫ್ ಎಂಬ ಸುನ್ನತ್ ಜಮಾಹತ್ ಸಂಘಟನೆಯಲ್ಲಿ ಸದಸ್ಯರಾಗಬೇಕು.

🌴 *SSF ನ ನಾಯಕತ್ವ..!*

👉 SSF ಗೆ ನಾಯಕತ್ವ ಕೊಡುವವರು, ಅವುಲಿಯಾಗಲು, ತಂಙಳ್ ಗಳು, ಸಾದಾತುಗಲು, ಪ್ರಗಲ್ಭ ಆಲಿಂಗಳು..ಮುಂತಾದ ಸಜ್ಜನರು ನೇತ್ರತ್ವಕೊಡುವ ಅದ್ವಿತೀಯ ಸಂಘಟನೆಯಾಗಿದೆ SSF. ಸಜ್ಜನರು ನೇತ್ರತ್ವ ಕೊಡುವ SSF ನಂತಹಃ ಸಂಘಟನೆಯಲ್ಲಿ ಮೆಂಬರ್ ಆಗಲು ಸಿಗುವುದೇ ನಮ್ಮ ಸೌಭಾಗ್ಯ.
'ಯಾರು ಯಾರನ್ನು ಪ್ರೀತಿಸುತ್ತಾರೋ, ಅವರು ಅವರೊಂದಿಗೆ ಸ್ವರ್ಗದಲ್ಲಿರುತ್ತಾರೆ' ಎಂದಾಗಿದೆ ಪ್ರವಾದಿ (ಸ-ಅ) ರು ಹೇಳಿರುವುದು....ಮಹಷರಾದಲ್ಲಿ ಪ್ರವಾದಿಗಳ ನಂತರ ಶಫಾಹತ್ ನ ಅಧಿಕಾರವಿರುವುದು ಆಲಿಂಗಳಿಗಾಗಿದೆ...ನಾಳೆ ಮಹ್'ಶರಾದಲ್ಲಿ ಆಲಿಂಗಳಿಗೆ ತಮಗಿಷ್ಟಬಂದವರನ್ನು ಶಫಾಹತ್ ಮಾಡುವ ಅಧಿಕಾರವನ್ನು ಅಲ್ಲಾಹು ಕೊಟ್ಟಿರುತ್ತಾನೆ. ಅಂದು ಆಲಿಂಗಳು ನಮ್ಮ ಕೈ ಹಿಡಿಯಬೇಕಾದರೆ ನಾವು ಅವರನ್ನು ಪ್ರೀತಿಸಬೇಕು.ಅವರು ನಮ್ಮನ್ನೂ ಪ್ರೀತಿಸುವಂತಾಗಬೇಕು.ಅದಕ್ಕೆಲ್ಲಾ ಒಂದು ಉತ್ತಮ ಅವಕಾಶವೆಂದರೆ, ಅವರು ಕಟ್ಟಿ ಬೆಳೆಸಿದ ಸಂಘ-ಸಂಸ್ಥೆಗಳಲ್ಲಿ ಮೆಂಬರ್ ಆಗಿ ಕಾರ್ಯಾಚರಿಸಬೇಕು.

🌴 *SSF ನಿಂದ ನಮಗಾಗುವ ಬಹುದೊಡ್ಡ ಲಾಭ..!*

👉 ಎಲ್ಲರಿಗೂ ಮರಣವೆಂಬುವುದು ಇದೆತಾನೆ.. ಆ ಮರಣಾ ನಂತರದ ನಮ್ಮ ಖಬರ್ ಜೀವನ ಹೇಗಿದೆಯೆಂದು ಅರಿತವರು ಯಾರಾದರೂ ಇದ್ದಾರೆಯೇ? ಖಂಡಿತವಾಗಿಯೂ ಇಲ್ಲ. ನಾವು ಒಂಟಿಯಾಗಿ ಮಲಗಲಿರುವ ಆ ಭಯಾನಕ ಖಬರ್ ನಲ್ಲಿ ನಮ್ಮ ರಕ್ಷಣೆಗೆ ಬರುವ ಒಂದು ಉತ್ತಮ ಸಮೂಹವು ನಮಗೆ ಬೇಡವೇ?

ನಾವೊಂದು ಸಾಧಾರಣ ಒಬ್ಬ ವ್ಯಕ್ತಿಯಾಗಿ ಮರಣ ಹೊಂದಿದರೆ, ನಮಗಾಗಿ ಕುರ್ಆನ್ ಓದಲು, ಝಿಕ್ರ್ ಹೇಳಲು, ದುಆಃ ಮಾಡಲು ಕೇವಲ ನಮ್ಮ ತಂದೆ,ತಾಯಿ,ಮಕ್ಕಳು,ಸಹೋದರರು ಮಾತ್ರ ಇರಬಹುದು ಅಷ್ಟೆ. ಆದರೆ, ಅದೇ ನಾವು SSF ಸಂಘಟನೆಯ ಕಾರ್ಯಕರ್ತರಾಗಿದ್ದರೆ, ಅಥವಾ SSF ಕಾರ್ಯಕರ್ತನ ತಂದೆಯೊ ತಾಯಿಯೊ ಕುಟುಂಬಸ್ಥರೋ ಆಗಿದ್ದರೆ ನಮಗಾಗಿ ಕುರ್ಆನ್ ಓದಲು,ಝಿಕ್ರ್ ಹೇಳಲು, ದುಆಃ ಮಾಡಲು ಲಕ್ಷಾಂತರ ಕಾರ್ಯಕರ್ತರಿರುತ್ತಾರೆ. ಅವರಲ್ಲಿ ಅವುಲಿಯಾಗಲು, ತಂಙಳ್ ಗಳು, ಆಲಿಂ ಗಲು, ಸಜ್ಜನರೂ ಇದ್ದಾರೆಂದರೆ ಅಂತಹ ಭಾಗ್ಯ ನಮಗೆ SSF ನಲ್ಲಲ್ಲದೆ ಇನ್ನೆಲ್ಲಿ ಸಿಗಲು ಸಾಧ್ಯ..ಅಲ್ಲಾಹನ ಇಷ್ಟದಾಸರ ದುಆಃವನ್ನು ಅಲ್ಲಾಹು ಸ್ವೀಕರಿಸದಿರುತ್ತಾನೆಯೇ..
ಖಬರ್ ನಲ್ಲಿ ರಕ್ಷೆಹೊಂದಲು ನಮಗೆ ಸಿಗುವ ಇಂತಹ ಒಂದು ಉತ್ತಮ ಅವಕಾಶ SSF ಸಂಘಟನೆಯ ಸದಸ್ಯನಾಗುವುದರಿಂದಲ್ಲದೆ ಬೇರೆಲ್ಲಿಯೂ ಸಿಗಲು ಸಾಧ್ಯವಿಲ್ಲ.
ಆದುದರಿಂದ ಪ್ರಿಯ ಸಹೋದರರೇ, ನಮ್ಮ ಪರಲೋಕ ವಿಜಯಕ್ಕಾಗಿ ಉಲಮಾಗಳು ನೇತೃತ್ವಕೊಡುವ SSF ಸಂಘಟನೆಯ ಸದಸ್ಯರಾಗೋಣ.
ಪ್ರಿಯ ತಂದೆ-ತಾಯಂದಿರೇ, ತಮಗೆ ಸಜ್ಜನರು ನೇತೃತ್ವಕೊಡುವ SSF ಎಂಬ ಆ ಮಹಾ ಪ್ರಸ್ತಾನದ ಅಂಗವಾಗಲು ಸಾಧ್ಯವಾಗದಿದ್ದರೂ ನಿಮ್ಮ ಮಕ್ಕಳನ್ನಾದರೂ SSF ಸೇರಲು ಪ್ರೋತ್ಸಾಹಿಸಿ. ಆ ಮೂಲಕವಾದರೂ ಅದರ ಲಾಭವನ್ನು ಪಡೆಯಲು ಪ್ರಯತ್ನಿಸಿ.

👉 ಅಹ್ಲುಸ್ಸುನ್ನತಿ ವಲ್-ಜಮಾಹತಿನ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ,  SSF ಮೆಂಬರ್ ಆಗಲು ಬಯಸುವವರಿಗೆ ಸಂಘಟನೆಗೆ ಸ್ವಾಗತ.

🌴 ಸಹೋದರರೇ ಇನ್ನೇಕೆ ತಡ...

ಬನ್ನಿ...
ಅವುಲಿಯಾಗಳು, ತಂಙಳ್ಗಲು, ಆಲಿಂಗಳು, ಸಾಧಾತುಗಳು, ಸಜ್ಜನರು ನೇತ್ರತ್ವ ಕೊಡುವ ಎಸ್ ಎಸ್ ಎಫ್ ಸಂಘಟನೆಯ ಸದಸ್ಯತ್ವವನ್ನು ಪಡೆದು ಇಹ-ಪರ ವಿಜಯಿಗಳಾಗೋಣ,
ಅಲ್ಲಾಹು ಅನುಗ್ರಹಿಸಲಿ, ಆಮೀನ್.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

No comments:

Post a Comment