Tuesday, September 24, 2019

ಝಿಯಾರತ್ತ್ ಕೇಂದ್ರ 80 ಕೈಪ್ಪಮಂಗಲಂ ಕರೀಂ ಹಾಜಿ (ಖ:ಸಿ)

*ಝಿಯಾರತ್ತ್ ಕೇಂದ್ರ​​​*
👉🏻👉🏻 8⃣0⃣
🕌🕌🕌🕌🕌🕌🕌
* #ವಲಿಯುಲ್ಲಾಹಿ_ಅಬ್ದುಲ್ #ಕರೀಂ_ಹಾಜಿ (ಖ:ಸಿ), #ಕೈಪ್ಪಮಂಗಲಂ, #ಕೊಡುಂಗಲ್ಲೂರ್, #ತ್ರಿಶೂರ್.*
〰〰〰〰〰〰〰
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪

✍ ಗಫೂರ್ ಬಾಯಾರ್
**********************
ಸ್ವಹಾಬಾಗಳ ಮೂಲಕ ಭಾರತದಲ್ಲಿ ನೆಲೆಯೂರಿದ ಇಸ್ಲಾಮಿನ ಆಧ್ಯಾತ್ಮಿಕ ಪರಂಪರೆಯನ್ನು ಯಥಾಪ್ರಕಾರ ಉಳಿಸಿ ಬೆಳೆಸುವ ಸಲುವಾಗಿ ತಮ್ಮದೇ ಆದ ಕೊಡುಗೆಗಳನ್ನು ನೀಡಿ ಚಿರಸ್ಮರಣೀಯರಾದ ಮಹಾತ್ಮರು ಅನೇಕ.

ಅಂತಹ ಅಸಂಖ್ಯ ಮಹಾತ್ಮರ ಪೈಕಿ ಕೇರಳದ ಇಲ್ಲತ್‌ ಮನೆತನದ ಕೈಪಮಂಗಲಂ ಕರೀಂ ಹಾಜಿ (ಖ.ಸಿ) ಸಹ ಒಬ್ಬರು.

ಅಬ್ದುಲ್ ರಹ್ಮಾನ್ ಮುಸ್ಲಿಯಾರ್ (ಖ.ಸಿ) ಎಂಬ ವಿದ್ವಾಂಸರ ಪುತ್ರರಾದ ಕೈಪಮಂಗಲಂ ಕರೀಂ ಹಾಜಿ (ಖ.ಸಿ) ರವರು 1933ರಲ್ಲಿ ಕೊಡುಂಗಲೂರ್‌ ಸಮೀಪದ ಕೈಪಮಂಗಲಂನಲ್ಲಿ ಜನಿಸಿದರು.

ತಂದೆ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ (ಖ.ಸಿ)ರಿಂದ ಪ್ರಾಥಮಿಕ ಶಿಕ್ಷಣ ಪಡೆದು ತಮ್ಮ ಒಂಬತ್ತನೇ ವಯಸ್ಸಿನಲ್ಲಿ ಉಪರಿ ಪತನತ್ತಿನಾಯಿಯ ಪಳ್ಳಿ ದರ್ಸಿಗೆ ಸೇರಿದರು. ಅಲ್ಲಿನ ವ್ಯಾಸಂಗ ಮುಗಿದ ನಂತರ ಮುಹಮ್ಮದಲಿ ಮುಸ್ಲಿಯಾರ್ (ಖ:ಸಿ), ಏರಮಗಲಂ ಇಬ್ರಾಹಿಂ ಮುಸ್ಲಿಯಾರ್ (ಖ:ಸಿ), ಕಡಪ್ಪುರಂ ಮುಹಮ್ಮದಾಲಿ ಮುಸ್ಲಿಯಾರ್ (ಖ:ಸಿ) ಮುಂತಾದ
ಹಲವಾರು ಸೂಫಿವರ್ಯರಿಂದ ಜ್ಞಾನಾರ್ಜನೆ ಮಾಡಿದರಲ್ಲದೆ ಪೊನ್ನಾನಿಯ‌ ಹಿರಿಯ ಜಮಾಅತ್‌ ಮಸೀದಿಯಲ್ಲಿ ವಾಸ್ತವ್ಯ ಹೂಡಿ ಶೈಖ್ ವಲ್ಲಪ್ಪುಯ ಖಾಲಿದ್ ಮುಸ್ಲಿಯಾರ್ (ಖ.ಸಿ)ರಿಂದ ಉನ್ನತ ಗ್ರಂಥಗಳನ್ನು ಅಭ್ಯಸಿಸಿದರು.

ತಮ್ಮ 17ನೇ ವಯಸ್ಸಿನಲ್ಲಿ ತಿರುನಲ್ಲೂರಿನ ಶೈಖ್ ಸ‌ಈದ್‌ ಸಿರಾಜುದ್ದೀನ್ ರವರೊಂದಿಗೆ ಆತ್ಮೀಯತೆ ಬೆಳೆಸಿಕೊಂಡ ನಂತರ ಮಹಾನರ ಬದುಕು ಆಧ್ಯಾತ್ಮಿಕ ರಂಗದತ್ತ‌ ತಿರುಗಿ ಆಧ್ಯಾತ್ಮಿಕ ರಂಗದಲ್ಲಿ ಉನ್ನತ‌ ದರ್ಜೆಗೇರಿದ ಹಲವು ವಿದ್ವಾಂಸರಿಂದ ಅನುಗ್ರಹಗಳೊಂದಿಗೆ ತ್ವರಿಖತ್ತಿನ ಅನುಮತಿಯನ್ನೂ ಪಡೆದರು.

ಈ ನಡುವೆ ಪ್ರಮುಖ ಸೂಫಿವರ್ಯರಾದ ಕಣಿಯಾಪುರಂ ಅಬ್ದುರ್ರಝಾಕ್ ಮಸ್ತಾನ್ (ಖ.ಸಿ) ರನ್ನು ಭೇಟಿಯಾಗಿ ಅವರ ಉಪದೇಶ ಪಡೆದರು.

 ಅಬ್ದುರ್ರಝಾಕ್ ಮಸ್ತಾನ್ (ಖ.ಸಿ)ರವರಿಂದ ಉಪದೇಶ ಪಡೆದ ನಂತರ ಮಹಾನರ ಊರಿನ ಬದರ್ ಮಸೀದಿಯಲ್ಲಿ ಮೂವತ್ತಾರು ವರ್ಷಗಳ ಕಾಲ ನಯಾ ಪೈಸೆ ಸಂಬಳ ಪಡೆಯದೆ ಸೇವೆ ಸಲ್ಲಿಸಿದರು.

ತಮ್ಮ ತಾಯಿಯವರ ಸಲಹೆಯಂತೆ ಖುರ್ಆನ್ ಓದಲು ಕಲಿತಂದಿನಿಂದಲೂ  ಮುತ್ತು ನಬಿ ಸ್ವಲಾತ್ ರವರ ಹೆಸರಿನಲ್ಲೇ ಖುರ್ಆನ್ ಪಾರಾಯಣ ಮಾಡುತ್ತಿದ್ದರು.

ವಾಡಾನಪಳ್ಳಿಯ ಪಣಕವೀಟ್ಟಿಲ್ ಅಬ್ದುಲ್ಲತೀಫ್ ಮೊಲ್ಲ ಎಂಬುವವರ ಪುತ್ರಿಯಾದ ಖದೀಜರನ್ನು ವಿವಾಹವಾದರು.

ಮಹಾನರು ಅಲ್ಲಾಹನು ದಯಪಾಲಿಸಿದ ಅನುಗ್ರಹಗಳನ್ನು ನೆನೆದು ಸದಾ ಕಂಬನಿ ಮಿಡಿಯುತ್ತಿದ್ದರು.

ಖುರ್ಆನ್ ಪಾರಾಯಣ ಮಾಡುವಾಗ ಅತೀವ ಸಂತಸಭರಿತರಾಗುತ್ತಿದ್ದ ಮಹಾನರು ರಮಳಾನ್‌ನಲ್ಲಿ ಪ್ರತಿ ಮೂರು ದಿನಕ್ಕೊಮ್ಮೆ ಒಂದೊಂದು ಖತಂ ಓದಿ ಮುಗಿಸುತ್ತಿದ್ದರು.

ಇಲಾಹಿ ಸ್ಮರಣೆಯಲ್ಲಿ ತಲ್ಲೀನರಾಗಿರುತ್ತಿದ್ದ ಕರೀಂ ಹಾಜಿ (ಖ.ಸಿ)ರವರು ವಿಲಾಯತಿನ ಪದವಿಯಲ್ಲಿ ಜದ್‌ಬ್‌ನ ದರ್ಜೆಗೆ ತಲುಪಿದ್ದರು.

ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಕಾಣಬಹುದಾದ ಸ್ಥಿತಿಗೆ ಜದ್‌ಬ್‌ನ ದರ್ಜೆಗೆ ಎಂದು ಹೆಸರು. ಹಾಗೆ ಕೈಪಮಂಗಲಂ ಕರೀಂ ಹಾಜಿ (ಖ.ಸಿ)ರವರು ಸಹ ಒಂದೇ ಸಮಯದಲ್ಲಿ ಹಲವರಿಗೆ ಹಲವೆಡೆ ಕಾಣಸಿಕ್ಕಿರುವ ಉದಾಹರಣೆಗಳು ಧಾರಾಳವಿದೆ.

ಅಂತೆಯೇ ಯಾರಾದರೂ ಎಲ್ಲಿಗಾದರೂ ಆಹ್ವಾನಿಸಿದಾಗ ನೀವು ಹೋಗಿ ನಾನಲ್ಲಿರುತ್ತೇನೆ ಎನ್ನುತ್ತಿದ್ದ ಮಹಾನರು‌ ತಕ್ಕ ಸಮಯದಲ್ಲಿ ನಿಶ್ಚಿತ ಸ್ಥಳದಲ್ಲಿ ಹಾಜರಾಗಿರುತ್ತಿದ್ದರು.

ಸಿ. ಎಂ. ಮಡವೂರು  (ಖ.ಸಿ) ಮತ್ತು ಅಬ್ದುರ್ರಝಾಕ್‌ (ಖ.ಸಿ) ರ ನಡುವೆ ಉಂಟಾಗಿದ್ದ ಸಣ್ಣ ಭಿನ್ನಾಭಿಪ್ರಾಯವನ್ನು ಸರಿಪಡಿಸಲು ಕೈಪಮಂಗಲಂ ಕರೀಂ ಹಾಜಿ  (ಖ.ಸಿ)ರವರು ಮಧ್ಯಸ್ಥಿಕೆ ವಹಿಸಿರುವುದನ್ನು ಗಮನಿಸುವಾಗ ಸೂಫಿವರ್ಯರ ನಡುವೆ ಮಹಾನರ ಒಡನಾಟ ಎಷ್ಟು ಆತ್ಮೀಯತೆಯಿಂದ ಕೂಡಿತ್ತು ಎನ್ನುವುದು ಮನವರಿಕೆಯಾಗುತ್ತದೆ.

ಸಿ.ಎಂ ಮಡವೂರು  (ಖ.ಸಿ)ರವರು ವಫಾತಿನ ಸಮಯ ಸನ್ನಿಹಿತವಾದಾಗ ತಮ್ಮ ಶಿಷ್ಯರೊಬ್ಬರನ್ನು ಕರೀಂ ಹಾಜಿ  (ಖ.ಸಿ)ರವರ ಬಳಿ ಕಳುಹಿಸಿ ನಾನು ತಾಯಿಯ ಬಳಿ ಹೋಗುತ್ತೇನೆ ಪ್ರಾರ್ಥಿಸಬೇಕು ಎಂಬ ಕೋರಿಕೆಯನ್ನು ಮುಂದಿಟ್ಟಿದ್ದರು..!!

*ಒಮ್ಮೆ ಪೊನ್ನಾನಿಯಲ್ಲಿ ಶೈಖ್ ಝೈನುದ್ದೀನ್‌ ಮಖ್ದೂಮ್‌ (ರ) ರವರ ವಾರ್ಷಿಕದಲ್ಲಿ (ಆಂಡ್ ನೇರ್ಚೆ) ಪ್ರಭಾಷಣದಲ್ಲಿ ತಾಜುಲ್ ಉಲಮಾ (ಖ.ಸಿ)ರವರು ಇಷ್ಟು ಲವಲವಿಕೆಯಿಂದ ನಾನು ಎದ್ದು ನಡೆದಾಡಲು ಕರೀಂ ಹಾಜಿ (ಖ.ಸಿ)ರಂತಹ ಔಲಿಯಾಗಳ ದುಆದ ಬರ್ಕತ್‌ ಕಾರಣ ಎಂದಿದ್ದರು.*

ಕೇರಳದ ಬಹುತೇಕ ಕಡೆ ದ್ಸಿಕ್ರ್‌ ಮಜ್ಲಿಸ್‌ಗಳನ್ನು ಸಂಘಟಿಸಿ ಜನಸಾಮಾನ್ಯರಿಗೂ ಸಹ ಇಲಾಹಿ ಸ್ಮರಣೆಯ ದಾರಿ ತೇೂರಿದ ಕರೀಂ ಹಾಜಿ (ಖ.ಸಿ)ರವರು 1998ರ ಶಅಬಾನ್ 20ರಂದು ಇಹಲೇೂಕದಿಂದ ನಿರ್ಗಮಿಸಿದರು.

ಕರೀಂ ಹಾಜಿ (ಖ.ಸಿ)ರವರೇ ನಿರ್ಮಿಸಿದ್ದ ಮಸ್ಜಿದುಲ್ ಇಜಾಬ ಎಂಬ ಮಸೀದಿಯ ಮುಂಬಾಗದಲ್ಲಿ ಮಹಾನರು ಅಂತ್ಯವಿಶ್ರಮ ಪಡೆಯುತ್ತಿದ್ದಾರೆ.
🌐🌐🌐🌐🌐🌐🌐🌐🌐

No comments:

Post a Comment