Tuesday, September 24, 2019

ಝಿಯಾರತ್ತ್ ಕೇಂದ್ರ 70/02. ವಲಿಯುಲ್ಲಾಹಿ ವಡಕ್ಕರ ಮುಹಮ್ಮದ್ ಹಾಜಿ (ಖ:ಸಿ)

*ಝಿಯಾರತ್ತ್ ಕೇಂದ್ರ​​​*
          7⃣0⃣
➖➖➖➖➖➖➖➖
*ವಲಿಯ್ಯುಲ್ಲಾಹಿ ವಡಗರ ಮುಹಮ್ಮದ್ ಹಾಜಿ ತಂಙಳ್ (ಖ.ಸಿ.) ಚೆರುವಣ್ಣೂರ್*

👉👉 *ಭಾಗ - 02*
*********************
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
***********************

ಒಮ್ಮೆ ಹರುಕು ಮುರುಕಾಗಿದ್ದ ವಸ್ತ್ರ ಧರಿಸಿ ಯಾತ್ರಾ ನಿಮಿತ್ತ ರೈಲು ಹತ್ತಿದ್ದ ಮಹಾನರನ್ನು ರೈಲಿನ ಟಿಕೆಟ್ ಪರಿಶೇೂಧಕ ತಡೆದು ದಾರಿ ಮಧ್ಯೆ (ಮುಂದಿನ ಸ್ಟೇಷನ್'ನಲ್ಲಿ) ರೈಲಿನಿಂದ ಕೆಳಗಿಳಿಸಿದಾಗ ಮರುಮಾತನಾಡದ ಮಹಾನರು ಅನತಿ ದೂರದಲ್ಲಿದ್ದ ಮರವೊಂದರ ನೆರಳಿನಲ್ಲಿ ಕುಳಿತರು.

ಆದರೆ ಮಹಾನರನ್ನು ಕೆಳಗಿಳಿಸಿದ ನಂತರ ರೈಲು ಮುಂದೆ ಚಲಿಸದೆ ಗರಬಡಿದಂತೆ ನಿಂತುಬಿಟ್ಟಿತು. ಆ ಸ್ಟೇಷನ್ನಿನ ತಾಂತ್ರಿಕ ತಂತ್ರಜ್ಞರು ರೈಲಿನ ಇಂಜಿನನ್ನು ಪರೀಕ್ಷಿಸಿದಾಗ ರೈಲಿನ ಇಂಜಿನ್'ನಲ್ಲಿ ಯಾವ ತಕರಾರೂ ಕಾಣದಾದಾಗ ಆ ಟಿಕೆಟ್ ಪರಿಶೇೂಧಕನು ಮರದ ಬುಡದಲ್ಲಿ ಕುಳಿತಿರುವ ಶೈಖುನಾರ ಬಳಿ ತೆರಳಿ ಕ್ಷಮೆ ಯಾಚಿಸಿ ರೈಲಿನಲ್ಲಿ ಯಾತ್ರೆ ಮುಂದುವರಿಸುವಂತೆ ವಿನಂತಿಸಿದನು. ಟಿಕೆಟ್ ಪರಿಶೇೂಧಕನ ವಿನಂತಿಯ ಮೇರೆಗೆ ಮಹಾನರು ರೈಲು ಹತ್ತಿದ ನಂತರ ಅದ್ಭುತವೆಂಬಂತೆ ರೈಲು ಮುಂದೆ ಚಲಿಸಿತು. ಈ ಘಟನೆ ಕಾಡ್ಗಿಚ್ಚಿನಂತೆ ನಾಡಿನೆಲ್ಲೆಡೆ ಹರಡಿದ ಕಾರಣ ಶೈಖುನಾರ ಪ್ರಸಿದ್ಧಿಯೂ ಹೆಚ್ಚಿತು.

ಒಮ್ಮೆ ಶೈಖುನಾರ ಮನೆಯ ಪಕ್ಕದಲ್ಲಿ ಬಾವಿ ತೇೂಡುವ ಕೆಲಸ ನಡೆಯುತ್ತಿತ್ತು. ಬಾವಿಯ ಕೆಳಗೆ ಬಂಡೆಕಲ್ಲಿದ್ದುದರಿಂದ ಸಿಡಿಮದ್ದಿನಿಂದ ಅದನ್ನು ಒಂದೆರಡು ಬಾರಿ ಒಡೆದಿದ್ದರು. ನಂತರ ಕೆಲಸ ಮುಂದುವರಿಸುತ್ತಾ ಬಂಡೆ ಒಡೆಯಲು ಇಟ್ಟಿದ್ದ ಸಿಡಿಮದ್ದು ಸಿಡಿಯಲಿಲ್ಲ. ಎಷ್ಟು ಪ್ರಯತ್ನಿಸಿದರೂ ಸಿಡಿಮದ್ದು ಸಿಡಿಯದಾದಾಗ ಕೆಲಸ ಮಾಡಿಸುತ್ತಿದ್ದ ಇಬ್ರಾಹಿಂ ಎಂಬ ವ್ಯಕ್ತಿ ಶೈಖುನಾರ ಬಳಿ ತೆರಳಿ ವಿಷಯ ತಿಳಿಸಿದಾಗ ಬಂಡೆ ಒಡೆಯಲು ನೀವು ಸಿಡಿಸಿದ ಸಿಡಿಮದ್ದಿನಿಂದಾಗಿ ನನ್ನ ಮನೆ ಮತ್ತು ಮಸೀದಿಯ ಹಂಚಿಗೆ ಹಾನಿಯಾಗಿದೆಯಲ್ಲವೇ ಎಂದರು. ಆಗ ಇಬ್ರಾಹಿಂರವರು ಅದನ್ನು ತಾವು ದುರಸ್ತಿ ಮಾಡಿ ಕೊಡುತ್ತೇನೆಂದಾಗ ಶೈಖುನಾರವರು ಹಾಗಾದರೆ ಆ ಸಿಡಿಮದ್ದು ಸಿಡಿಯಲಿ ಎಂದರು. ನಂತರ ಬಾವಿ ತೇೂಡುವ ಕೆಲಸ ಯಾವ ಅಡೆತಡೆಯೂ ಇಲ್ಲದೆ ಮುಂದುವರಿಯಿತು.

ಒಮ್ಮೆ ಶೈಖುನಾ ಮರ್'ಹೂಂ ಎಂ.ಎ. ಉಸ್ತಾದ್ (ನ.ಮ.) ಚೆರುವಣ್ಣೂರ್'ಗೆ ತೆರಳುತ್ತಿದ್ದಾಗ ದಾರಿಮಧ್ಯೆ ಅವರು ಪ್ರಯಾಣಿಸುತ್ತಿದ್ದ ಕಾರು ಕೆಟ್ಟು ನಿಂತಿತು. ಅದನ್ನು ದುರಸ್ತಿ ಮಾಡಲು ಹತ್ತು ನಿಮಿಷಗಳಷ್ಟು ಶ್ರಮಿಸಿಯೂ ಫಲ ಕಾಣದೆ ಚಾಲಕ ಕೈಕೈ ಹಿಸುಕಿಕೊಳ್ಳುತ್ತಿದ್ದ. ಆಗ ಎಂ.ಎ. ಉಸ್ತಾದರು ವಲಿಯ್ಯುಲ್ಲಾಹಿ ವಡಗರ ಮುಹಮ್ಮದ್ ಹಾಜಿ ತಂಙಳ್ (ಖ.ಸಿ)ರವರ ಹೆಸರಿನಲ್ಲಿ ಫಾತಿಹ ಓದಿ ಹದಿಯಾ ಮಾಡಿ ಮೊದಲಿಗೆ ನೇರವಾಗಿ ಶೈಖುನಾರ ಮಖಾಂಗೆ ಝಿಯಾರತ್'ಗೆ ಹೇೂಗುತ್ತೇನೆಂದು ಸಂಕಲ್ಪಿಸಿ ಚಾಲಕನೊಂದಿಗೆ ಕಾರು ಸ್ಟಾರ್ಟ್ ಮಾಡಲು ಹೇಳಿದರು. ಆಶ್ಚರ್ಯ....! ಬಹಳ ಹೊತ್ತಿನಿಂದ ಶ್ರಮಿಸಿದರೂ ರಿಪೇರಿಯಾಗದ ವಾಹನ ಯಾವ ತೊಂದರೆಯೂ ಇಲ್ಲದೆ ಸ್ಟಾರ್ಟಾಗಿ ಮುಂದೆ ಚಲಿಸಿತು.

ಸುನ್ನಿ ಸಮುದಾಯದ ಏಳಿಗೆಗೆ ಅವಿಶ್ರಾಂತವಾಗಿ ದುಡಿಯುತ್ತಿದ್ದ ಮಹಾನರು ಸಮಸ್ತದ ವಿದ್ವಾಂಸರ ನಡುವೆ ಅಭಿಪ್ರಾಯ ವ್ಯತ್ಯಾಸ ತಲೆದೇೂರಿದಾಗಲೆಲ್ಲ ಸತ್ಯದ ಕಡೆ ನಿಂತು ವಿದ್ವಾಂಸರಿಗೆ ಮತ್ತು ಕಾರ್ಯಕರ್ತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು. 1998ರಲ್ಲಿ ತಿರೂರಂಙಾಡಿಯ ಧರ್ಮಪುರಿಯಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿದ್ದ ಶೈಖುನಾರು ಎಸ್ಸೆಸ್ಸೆಫ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಾ *"ದೀನೀ ಸೇವೆಯಲ್ಲಿ  ತೊಡಗಿಸಿಕೊಳ್ಳುವ ನೀವು ದೀನೀ ಪ್ರಬೋಧನೆ ನಡೆಸಲು ಯಾರಿಗೂ ಭಯಪಡದೆ ಮುನ್ನಡೆಯಿರಿ, ನಿಮಗೆ ಅರ್ಶಿನ ನೆರಳಿದೆ" ಎಂದಿರುವ ಆ ಹಿತವಚನವು ಸುನ್ನೀ ಕಾರ್ಯಕರ್ತರಿಗೆ ಸದಾಕಾಲಕ್ಕೂ ಪ್ರೇೂತ್ಸಾಹ ಮತ್ತು ಪ್ರೇರಣೆಯಾಗಿದೆ.*

ಮಹಾನರೇ ಸಂಘಟಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ತಾಜುಲ್ ಉಲಮಾ ಉಳ್ಳಾಲ ತಂಙಳ್ (ಖ.ಸಿ) ರೊಂದಿಗೆ ಸಭೆಯನ್ನುದ್ದೇಶಿಸಿ ಮಾತನಾಡುವಂತೆ ಸೂಚಿಸಿದರು. ಕೊನೆಗೆ ಉಳ್ಳಾಲ ತಂಙಳ್ (ಖ.ಸಿ) ರವರಿಗೆ ಸ್ವರ್ಗವಿದೆ ಎಂದರು. ಈ ಮಾತು ಕೇಳಿದ ತಾಜುಲ್ ಉಲಮಾ ತಂಙಳರು (ಖ:ಸಿ) ನನ್ನ ಜೊತೆಗಿರುವವರಿಗೂ ಸ್ವರ್ಗ ಲಭಿಸಬೇಕೆಂದಾಗ ಸತ್ಯವಿಶ್ವಾದೊಂದಿಗೆ ತಖ್ವಾದಿಂದ ಬದುಕುತ್ತಾ ತಮ್ಮನ್ನು ಅನುಸರಿಸುವ ತಮ್ಮ ಜೊತೆಗಿರುವವರಿಗೂ  ಸ್ವರ್ಗವಿದೆ ಎಂದರು.

ಸಮಾಜ ಸೇವೆ ಮತ್ತು ಆಧ್ಯಾತ್ಮಿಕ ಪರಿಶ್ರಮದ ಸಲುವಾಗಿ ಹಲವಾರು ವರ್ಷಗಳ ಕಾಲ ಮನೆಯಿಂದ ದೂರವಿದ್ದ ಮಹಾನರು ಊರಿಗೆ ಹಿಂದಿರುಗಿದ ನಂತರ ತಮ್ಮ ತಾಯಿಯ ಖಬರನ್ನು ಮಕ್ಬರವನ್ನಾಗಿಸಿ ಅಲ್ಲಿ ಮಸೀದಿಯನ್ನೂ ನಿರ್ಮಿಸಿದರು.

ಐತಿಹಾಸಿಕ ಮಹತ್ವದಿಂದ ಕೂಡಿದ *ಮಿಅ್'ರಾಜ್ ನೇರ್ಚೆಗೆ* ಮುನ್ನುಡಿಯಿಡುವುದರೊಂದಿಗೆ *ಶಾದುಲಿ ಮಜ್ಲಿಸನ್ನು* ಅದರ ಮಹತ್ವದೊಂದಿಗೆ ಸಮುದಾಯಕ್ಕೆ ಪರಿಚಯಿಸಿ ತಿರೂರ್ ವಾಣಿಯನ್ನೂರಿನ ಸಮೀಪ ಪ್ರತಿ ಅರಬಿಕ್ ತಿಂಗಳ ಇಪ್ಪತ್ತರಂದು ಶಾದುಲಿ ಮಜ್ಲಿಸ್ ಸಂಘಟಿಸಿ ಕೇರಳದ ಆಧ್ಯಾತ್ಮಿಕ ರಂಗಕ್ಕೆ ಮೆರುಗು ನೀಡಿದ್ದರು. (ಈ ಶಾದುಲಿ ಮಜ್ಲಿಸ್ ಇಂದಿಗೂ ಬಹಳ ಹೆಸರುವಾಸಿಯಾಗಿದ್ದು ಅರಬಿಕ್ ತಿಂಗಳ ಇಪ್ಪತ್ತರಂದು ಈ ಮಜ್ಲಿಸ್ ಮುಅ್'ಮಿನ್'ಗಳಿಂದ ತುಂಬಿ ತುಳುಕುತ್ತಿರುತ್ತದೆ)

ಸುನ್ನತ್ ಜಮಾಅತಿನ ಏಳಿಗೆಗಾಗಿ ಶ್ರಮಿಸುವ ಯುವ ಸಮೂಹಕ್ಕೆ ಸದಾ ಪ್ರೋತ್ಸಾಹ ಮತ್ತು ಪ್ರೇರಣೆ ನೀಡುತ್ತಾ ನೂರು ವರ್ಷಕ್ಕಿಂತಲೂ ಹೆಚ್ಚು ಕಾಲ ಮಾದರೀಯೇೂಗ್ಯವಾದ ಜೀವನ ನಡೆಸಿದ ಶೈಖುನಾ ವಡಗರ ಮುಹಮ್ಮದ್ ಹಾಜಿ ತಂಙಳ್ (ಖ.ಸಿ.)ರವರು 1998 ಜುಲೈ 23 ರಂದು ಅಂದರೆ ಹಿಜರಿ 1419 ರಬೀಉಲ್ ಅವ್ವಲ್ 29 ರಂದು ಬೆಳಿಗ್ಗೆ ಕಲ್ಲಿಕೇೂಟೆಯ ನಡಕ್ಕಾವ್ ರಾಹತ್ತ್ ಮಂಝಿಲ್'ನಲ್ಲಿ ಇಹಲೇೂಕಕ್ಕೆ ವಿದಾಯ ಹೇಳಿದರು. ಶೈಖುನಾರೇ ಸ್ವತಃ ನಿರ್ಮಿಸಿದ್ದ ಚೆರುವಣ್ಣೂರ್ ಮಲಯಿಲ್ ಮಖಾಮಿನಲ್ಲಿ ಈಗ ಅಂತ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ.

*(ಮುಗಿಯಿತು)*
💎💎💎💎💎💎💎

No comments:

Post a Comment