Tuesday, September 24, 2019

ಝಿಯಾರತ್ತ್ ಕೇಂದ್ರ 78/02 ಬಿಮಾಪಳ್ಳಿ ಮಖಾಂ ಶರೀಫ್

*ಝಿಯಾರತ್ತ್ ಕೇಂದ್ರ​​​*
👉🏻👉🏻 7⃣8⃣
ಭಾಗ=== 02
➖➖➖➖➖➖➖
*#ಬಿಮಾಪಳ್ಳಿ #ಮಖಾಂ #ಶರೀಫ್, #ಪೂಂತ್ತುರ #ತಿರುವನಂತಪುರಂ*
*********************
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪

✍ ಗಫೂರ್ ಬಾಯಾರ್
**********************
*ಮುಂದುವರಿದ ಭಾಗ*

ಪತಿ ಅಬ್ದುಲ್ ಗಫಾರಿ (ರ‌)ರವರ ಮರಣಾನಂತರ ಬಿಮಾ ಬೀವಿ(ರ) ರವರು ಪುತ್ರ ಸಯ್ಯಿದ್ ಮಾಹಿನ್‌ ಅಬೂಬಕರ್ (ರ‌) ರೊಂದಿಗೆ ತಮಿಳುನಾಡಿನಿಂದ ಕೇರಳಕ್ಕೆ ವಲಸೆ ಹೋಗಿ ದೀನೀ ದ‌ಅ್‌ವಾ ನಡೆಸಲಾರಂಭಿಸಿದರು.

ಅಸ್ಪ್ರಶ್ಯತೆಯಂತಹ ಅನಾಚಾರಗಳಿಂದ ಕಂಗೆಟಿದ್ದ ಜನತೆಗೆ ಈ ಮಹಾತ್ಮರ ಪ್ರಬೋಧನೆ ಮತ್ತು ಪ್ರತಿಫಲಾಪೇಕ್ಷೆಯಿಲ್ಲದ ನಿಸ್ವಾರ್ಥ ಸೇವೆಯಿಂದ ಸಾಂತ್ವಾನ ಲಭಿಸಲಾರಂಭಿಸಿದ್ದಷ್ಟೇ ಅಲ್ಲದೆ ಇಸ್ಲಾಮ್ ಎಂಬುದು ಸೃಷ್ಟಿಕರ್ತನಾದ ಅಲ್ಲಾಹನ ದೀನ್ ಎಂಬುದು ಸ್ಪಷ್ಪವಾಗಿ ಮನವರಿಕೆಯಾಯಿತು  ಹಾಗಾಗಿ ಹಲವರು ಇಸ್ಲಾಂ ಸ್ವೀಕರಿಸಿದರು.

ಅನಂತರ ದಿನದಿಂದ ದಿನಕ್ಕೆ ಇಸ್ಲಾಮ್ ಸ್ವೀಕರಿಸುವವರ ಸಂಖ್ಯೆ ಹೆಚ್ಚಿದಾಗ ಹಲವರಿಗೆ ಇದು ಪತ್ಯವಾಗಲಿಲ್ಲ. ಅಂಥವರು ಅಸೂಯೆಯಿಂದ ಒಳಗೊಳಗೆ ಕುದಿಯುತ್ತಿದ್ದರು.

ಕಾಲಕ್ರಮೇಣ ಆ ಅಸೂಯೆಯು ದ್ವೇಷವಾಗಿ ಬದಲಾಯಿತಲ್ಲದೆ ಬೀವಿ ಮತ್ತು ಅವರ ಮಗನನ್ನು ಅರೇಬಿಕ್ ಗೂಢಚರ್ಯರೆಂದು ಆರೋಪಿಸುವುದರ ಜೊತೆಗೆ ರಾಜನಿಧಿಗೆ ಕಪ್ಪ (ತೆರಿಗೆ) ನೀಡುತ್ತಿಲ್ಲವೆಂದು ಆಳರಸನಾದ ಮಾರ್ತಾಂಡ ವರ್ಮನಲ್ಲಿ ಆರೋಪಿಸಿದರು.

ಕುತಂತ್ರಿಗಳ ಈ ಕುಟಿಲತೆಯನ್ನು ಸತ್ಯವೆಂದು ಭಾವಿಸಿದ ರಾಜ ಮಾರ್ತಾಂಡ ವರ್ಮನು ಸಯ್ಯಿದತ್ ಬಿಮಾ ಬೀವಿ (ರ) ಮತ್ತು ಅವರ ಪುತ್ರನನ್ನು ಬಂಧಿಸಲು ಆಜ್ಞಾಪಿಸಿದನು.

ಮಾರ್ತಾಂಡ ವರ್ಮನ ಸೈನಿಕರು ಬೀವಿಯವರ ಮನೆಗೆ ತೆರಳಿ ವಿಷಯ ತಿಳಿಸಿದಾಗ ಮಹದಿಯವರು, ತಮ್ಮ ಪುತ್ರ ಹಜ್ ನಿರ್ವಹಿಸಲು ಮಕ್ಕಾಕ್ಕೆ ತೆರಳಿರುವುದರಿಂದ ಅವರು ಹಿಂದಿರುಗುವ ತನಕ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದ ಕಾರಣ ಸೈನಿಕರು ಹಿಂದಿರುಗಿದರು.

ಇತ್ತ ಹಜ್ ಯಾತ್ರೆಗೆ ತೆರಳಿದ್ದ ಸಯ್ಯಿದ್ ಮಾಹಿನ್ ಅಬೂಬಕರ್ (ರ) ರವರು ಮೊದಲಿಗೆ ಹಜ್ಜ್ ನಿರ್ವಹಿಸಿ ತಮ್ಮ ಪಿತಾಮಹರಾದ ಸಯ್ಯದುನಾ ಮುತ್ತು ಮುಹಮ್ಮದ್ ಮುಸ್ತಫಾ   ﷺِ ಮರ ರೌಳ ಸಂದರ್ಶನಕ್ಕಾಗಿ ಮದೀನಾಕ್ಕೆ ತೆರಳಿ ಝಿಯಾರತ್‌ನ ನಂತರ ಅಂದು ರಾತ್ರಿ ಮಸ್ಜಿದುನ್ನಬವಿಯಲ್ಲೇ ಮಲಗಿದ್ದರು.

*ಮದೀನಾದ ಮಸ್ಜಿದುನ್ನಬವಿಯಲ್ಲಿ ಮಲಗಿದ್ದ ಸಯ್ಯಿದ್ ಮಾಹಿನ್ ಅಬೂಬಕರ್ (ರ)ರವರನ್ನು ಅಂದು ರಾತ್ರಿ ಕನಸಿನಲ್ಲಿ ಸಂದರ್ಶಿಸಿದ ಮುತ್ತು ಮುಹಮ್ಮದ್ ಮುಸ್ತಫಾ ﷺِ ಆದಷ್ಟು ಬೇಗನೆ ಹಜ್ಜ್ ನಿರ್ವಹಿಸಿ ಕೇರಳಕ್ಕೆ ಹಿಂದಿರುಗಬೇಕೆಂದೂ ಅಲ್ಲಿ ಶಹಾದತ್ ಎಂಬ ಪದವಿಯು ತಮಗಾಗಿ ನಿರೀಕ್ಷಿಸುತ್ತಿದೆ ಎಂಬ ಸಂದೇಶ ನೀಡಿದರು.*

ಮುತ್ತು ನಬಿ ﷺِ ಯವರು ನೀಡಿದ ಸಂದೇಶದಿಂದ ಆನಂದತುಂದಿಲರಾದ ಸಯ್ಯಿದ್ ಮಾಹಿನ್ ಅಬೂಬಕರ್ (ರ) ಮರುದಿನವೇ ಹಜ್ಜ್ ನಿರ್ವಹಿಸಿ ಕೇರಳಕ್ಕೆ ಹಿಂದಿರುಗಿದರು.

ಸಯ್ಯಿದ್‌ ಮಾಹಿನ್ ಅಬೂಬಕರ್ (ರ) ರವರು ಮಕ್ಕಾದಿಂದ ಹಿಂದಿರುಗಿದ ವಿಷಯ ತಿಳಿದೊಡನೆ ಶತ್ರುಗಳು ಮಹಾನರ ಮೇಲೆ ಮುಗಿಬಿದ್ದರು.

ತಮ್ಮ ಮೇಲೆ ಮುಗಿಬಿದ್ದ ಶತ್ರುಗಳೊಂದಿಗೆ ವೀರಾವೇಶದಿಂದ ಹೋರಾಡಿದ ಆ ಮಹಾನರು ಅಲ್ಲಾಹನ ವಿಧಿಲಿಖಿತದಂತೆ ಕೊನೆಗೆ ಹುತಾತ್ಮರಾಗುವುದರೊಂದಿಗೆ ಸೃಷ್ಟಿಕರ್ತನಾದ ಅಲ್ಲಾಹನ ರಹ್ಮತ್ತಿಗೆ ಯಾತ್ರೆಯಾದರು.

ಪುತ್ರ ಶಹೀದಾದನಂತರ ಮಾನಸಿಕವಾಗಿ ಕುಗ್ಗಿ ಹೋದ ಮಾಹಿನ್ ಅಬೂಬಕರ್ (ರ)ರವರ ತಾಯಿ ಮಹದಿ ಸಯ್ಯಿದತ್ ಬಿಮಾ ಬೀವಿ (ರ)ರವರೂ ಸಹ ಅಲ್ಪಕಾಲದಲ್ಲೇ ಇಹಲೋಕಕ್ಕೆ ವಿದಾಯ ಹೇಳಿದರು.

ಮಹದಿ ಸಯ್ಯಿದತ್ ಬಿಮಾ ಬೀವಿ (ರ) ಮತ್ತು ಸಯ್ಯಿದ್ ಮಾಹಿನ್ ಅಬೂಬಕರ್ (ರ) ಅಂತ್ಯವಿಶ್ರಮ ಪಡೆಯುತ್ತಿರುವ ಬಿಮಾಪಳ್ಳಿಯು  ಹಲವಾರು ಕಶ್ಫ್ ಕರಾಮತ್ತುಗಳ ಮೂಲಕ ದಕ್ಷಿಣ ಭಾರತದಲ್ಲೇ ಹೆಸರಾಂತ ಝಿಯಾರತ್ ಕೇಂದ್ರಗಳಲ್ಲಿ ಒಂದಾಗಿದೆ.

*ಸಯ್ಯಿದ್ ಮಾಹಿನ್ ಅಬೂಬಕರ್ (ರ)ರವರು ಶಹೀದಾದ ಸ್ಥಳದಲ್ಲೊಂದು ಬಾವಿ ಇದ್ದು ಆ ಬಾವಿಯ ನೀರನ್ನು ಕುಡಿಯುವುದರಿಂದ ಹಾಗೂ ಅದರಲ್ಲಿ ಸ್ನಾನ ಮಾಡುವುದರಿಂದ ಹಲವು ರೋಗಗಳಿಗೆ ಶಮನ ಲಭಿಸಿದೆ. ಹಾಗಾಗಿ ಈ ಬಾವಿಯು (ಮರುನ್ನು ಕಿಣರ್) "ಔಷಧಿಯ ಬಾವಿ" ಎಂದೇ ಅರಿಯಲ್ಪಡುತ್ತದೆ.*

ಬಿಮಾಪಳ್ಳಿಯಲ್ಲಿ ಪ್ರತಿವರ್ಷ ಜಮಾದಿಲ್ ಆಖಿರ್ ಒಂದರಿಂದ ಹತ್ತಿರ ತನಕ ಉರೂಸ್ ನಡೆಯುತ್ತದೆ.

_ದಾರಿ: ಬಿಮಾಪಳ್ಳಿಯು ಕೇರಳದ ರಾಜಧಾನಿಯಾದ ತಿರುವನಂತಪುರಂ ನಗರದಿಂದ ಎಂಟು ಕಿಲೋಮೀಟರ್ ದೂರದಲ್ಲಿದೆ._

*ಮುಗಿಯಿತು*
♻♻♻♻♻♻♻♻



No comments:

Post a Comment