*ಆಲಿಂಗಳ ನೇತೃತ್ವ ಇಲ್ಲದಿರುತ್ತಿದ್ದರೆ ನಮ್ಮ ಸ್ಥಿತಿ ಮೃಗ ಸಮಾನವಾಗುತ್ತಿತ್ತು*
*----------------------*
ಅದ್ಯಾವನೋ ಒಬ್ಬ ಸುನ್ನೀ ಟುಡೇ ಎಂಬ ಹೆಸರಿನವ ಸುನ್ನೀ ಹೆಸರಿನಲ್ಲಿ ತನ್ನ ಹೃದಯದ ಒಳಗೆ ಅವಿತಿಟ್ಟಿರುವ ವಹ್ಹಾಬಿಸಂನ್ನು ವಾಂತಿ ಮಾಡಿದ್ದಾನೆ. ಸಂಘಟನೆ -ಸಮಸ್ತವನ್ನು ಬದಿಗಿಟ್ಟು ಇಸ್ಲಾಮಿನ ಪ್ರಚಾರ ಮಾಡಬೇಕಂತೆ!
ಅಂದರೆ ಇವನ ದೃಷ್ಟಿಯಲ್ಲಿ ಸಮಸ್ತ- ಸಂಘಟನೆಗಳೆಲ್ಲಾ ಅನಿಸ್ಲಾಮಿಕ ಕಾರ್ಯಗಳನ್ನು ಪ್ರಚಾರ ಮಾಡುವ ಸಂಘಟನೆಗಳಾಗಿವೆ!!
ಆದ್ರೆ ಸಮಸ್ತ- ಸಂಘಟನೆಗಳು ಇಲ್ಲಿ ಮದರಸಗಳನ್ನು ಶಿಷ್ಟಮೆಟಿಕಾಗಿ ತರೆದುದರಿಂದಲೇ ಇಲ್ಲಿನ ಸಾಮಾನ್ಯರಲ್ಲಿ ಸಾಮನ್ಯರು ಕೂಡಾ ತಪ್ಪಿಲ್ಲದೆ ಫಾತಿಹಾ ಓದುತ್ತಿದ್ದಾರೆಂಬ ಸತ್ಯ ಸಂಗತಿ ಈ ಬಡಪಾಯಿಗೆ ಗೊತ್ತಿಲ್ಲ.
ನಮಗೆ ಸಮಸ್ತ - ಸಂಘಟನೆಗಳು ನೀಡಿದ ಅನುಗ್ರಹ ಏನೆಂದು ತಿಳಿಯಬೇಕಾದರೆ ಸ್ವಲ್ಪ ಕರಾವಳಿ ಬಿಟ್ಟು ಗಟ್ಟ ಹತ್ತಬೇಕು.
ಕಡ್ಡಾಯವಾಗಿ ಕಲಿಯಬೇಕಾದ ಫಾತಿಹಾ ಹೋಗಿ ಅಲ್ಲಾಹು ಯಾರು? ಪ್ರವಾದಿ ಯಾರು? ಅಂತ ತಿಳಿಯದ ಜನರನ್ನು ಸುನ್ನೀ ಟುಡೆಗೆ ದರ್ಶಿಸಲು ಸಾದ್ಯವಾಗ ಬಹುದು.
ಮನೆಯಲ್ಲಿ ವಿಗ್ರಹಗಳನಿಟ್ಟು ಪೂಜಿಸುವ ಮುಸ್ಲಿಮರನ್ನು ಕಾಣಬಹುದು.ವರ್ಷದಲ್ಲಿ ಮಹರ್ರಂ ಬಂದರೆ ಮಾತ್ರ ನಮಾಜು ಮಾಡುವ ಮುಸ್ಲಿಮರನ್ನು ಕೂಡಾ ಕಾಣಲು ಸಾದ್ಯ.
ಪ್ರವಾದಿ ಮುಹಮ್ಮದ್ ನೆಬಿಯವರ ಕುರಿತು ಸವಿಸ್ತಾರವಾಗಿ ಹೇಳಿಕೊಟ್ಟಾಗ "ಆ ಪ್ರವಾದಿ ನಿಮ್ಮ ಮಂಗಳೂರಿನಲ್ಲಿದ್ದಾರಾ?" ಅಂತ ಪೆದ್ದು ಪೆದ್ದಾಗಿ ಪ್ರಶ್ನೆ ಕೇಳುವ ಮುಸ್ಲಿಂ ನಾಗರಿಕನ್ನು ಕಾಣಬಹುದು.
ಯಾಕಾಗಿ ಅವರಿಗೆ ಇಂತಹ ದಯನೀಯ ಸ್ಥಿತಿ ಬಂತು ಎಂಬ ಪ್ರಶ್ನೆ ಗೆ ಉತ್ತರ ಒಂದೇ ಅಲ್ಲಿ ಸುನ್ನೀ ಸಂಘಟನೆಗಳು ಇರಲಿಲ್ಲ -ಸಮಸ್ತವೂ ಇರಲಿಲ್ಲ!
(ಇದೀಗ ಎಸ್ಸೆಸ್ಸೆಫ್ ನ ಅಂಗ ಸಂಘಟನೆಯಾದ 'ಇಹ್ಸಾನ್' ವತಿಯಿಂದ ನಿರಂತರವಾಗಿ ನಡೆಯುವ ದಾವಾ ಚಟುವಟಿಕೆಯಿಂದಾಗಿ ಸ್ವಲ್ಪ ಸುಧಾರಣೆ ಆಗಿದೆ)
ಸುನ್ನೀ ಟುಡೇ ಎಂದು ಹೆಸರಿಟ್ಟ ಮಾತ್ರಕ್ಕೆ ಯಾರೂ ಸುನ್ನಿಯಾಗಲ್ಲ ಅದೇನಿದ್ದರೂ ತೋಳ ಆಡಿನ ಚರ್ಮ ಹೊದ್ದುವುದಕ್ಕೆ ಸಮ.
ಮತ್ತೆ ಅವನ ಅಹವಾಲು ಕುರ್ಆನ್ ಓದುವಾಗ ಅರ್ಥವಾಗುವುದಿಲ್ಲ ಹಾಗಾಗಿ ಕಣ್ಣೀರು ಬರುವುದಿಲ್ಲ.
ಅದಕ್ಕೆ ಯಾರು ಹೊಣೆ?
ಮದರಸದಲ್ಲಿ ಪ್ಲಸ್ ಟೂ ವರೆಗೆ ಹೋದರೆ ಸಾಕು ಅವನಿಗೆ ಕುರಾನ್ ಅರ್ಥ ತಿಳಿಯುತ್ತದೆ.ಅದರ ಎಲ್ಲಾ ವ್ಯವಸ್ಥೆಗಳನ್ನು ನಮ್ಮ ಉಲಮಾಗಳು ತಯ್ಯಾರು ಮಾಡಿದ್ದಾರೆ.ಇದೀಗ ಇಂಗ್ಲೀಷ್ ಮೀಡಿಯಂ ಕಲಿಸುವ ಭರದಲ್ಲಿ ಮದರಸ ಕಲಿಕೆಯನ್ನು ನೆಗ್ಲೆಟ್ ಮಾಡುವವರೇ ಅಧಿಕ ಹಾಗಾಗಿ ಜನರು ಐದನೇ ತರಗತಿ ಜಾಸ್ತಿಯಾದರೆ ಏಳನೇ ತರಗತಿ ವರೆಗೆ ಕಲಿತು ಮತ್ತೆ ಬುಕ್ ಕೈಯಲ್ಲಿ ಹಿಡಿದು ಕಾಲೇಜು ಮೆಟ್ಟಿಲು ಹತ್ತಿದರೆ, ಮದರಸದ ಕಡೆ ತಲೆ ಎತ್ತಿಯೂ ಕೂಡಾ ನೋಡಲ್ಲ ಹಾಗಾಗಿ ಮದರಸದ ಹತ್ತನೇ ತರಗತಿ ಸಹಿತ ಅದರಾಚೆಗಿನ ಎಲ್ಲ ತರಗತಿಗಳು ವಿದ್ಯಾರ್ಥಿಗಳಿಲ್ಲದೆ ಬೀಕೋ ಎನ್ನುತ್ತದೆ.
ನಂತರ ಕಾಲೇಜು ಮುಗಿದು ಮದುವೆ ಆಗಿ ಮಕ್ಕಳಾದ ನಂತರ ಪುನಃ ಕುರಾನ್ ಕಲಿಯಬೇಕೆಂಬ ಹಂಬಲ ಬರುತ್ತದೆ. ಆವಾಗ ಸಮಯ ಮೀರಿರುತ್ತದೆ.ಬದುಕನ್ನು ಹೊಂದಿಸುವ ಭರದಲ್ಲಿ ಸಮಯವೂ ಇರುವುದಿಲ್ಲ.ಇದಕ್ಕೆ ನೇರ ಹೊಣೆ ಯಾರು?
ಉಲಮಾಗಳಾ?
ಖಂಡಿತಾ ಅಲ್ಲ,
ಅವರು ತಮ್ಮ ಪ್ರಭಾಷಣಗಳಲ್ಲಿ ಆಗಾಗ ಎಚ್ಚರಿಸುತ್ತಾ ಇರುತ್ತಾರೆ.ಅದೆಲ್ಲಾ ಕೋಣದ ಮುಂದೆ ಕಿನ್ನಾರಿ ಬಾರಿಸಿದಂತೆ ಮಾಡಿದ ಇವನು ಈಗ ಉಲಮಾಗಳನ್ನು ಮತ್ತು ಸಂಘಟನೆ- ಸಮಸ್ತವನ್ನು ಟೀಕಿಸುವುದರಲ್ಲಿ ಅರ್ಥವೇನಿದೆ?
ಅದು ಅವನ ಜಹಾಲತ್ ಅಲ್ಲದೆ ಬೇರೇನು ಅಲ್ಲ.
ಉಲಮಾಗಳು ಅವರ ಭಾದ್ಯತೆ ನೇರವೇರಿಸಿದ್ದಾರೆ.ಮದರಸಗಳನ್ನು ಮತ್ತು ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿದ್ದಾರೆ. ನಂತರ ಕುರಾನಿನ ಕುರಿತು ಆಳವಾಗಿ ಕಲಿಯಲು ದರ್ಸ್ ಸಂಪ್ರದಾಯವನ್ನು, ಅದಕ್ಕಾಗಿ ನೂರಾರು ಧಾರ್ಮಿಕ ಕಾಲೇಜುಗಳನ್ನು ಅವರ ಸ್ವಂತ ಅಧ್ವಾನದಿಂದ ಎಲ್ಲರಿಂದ ಕಾಡಿಬೇಡಿ ನಮಗಾಗಿ ತೆರೆದಿದ್ದಾರೆ. ಆದರೆ ನಾವು ಮಾತ್ರ ಅಲ್ಲಿಗೆ ಹೋಗಲು ತಯ್ಯಾರಿಲ್ಲ.
ನಮಗೆ ಮದರಸದ ಐದನೇ ತರಗತಿಯಲ್ಲೇ ಕುರಾನ್ ನ ಅರ್ಥ ಕಲಿಸಿಕೊಡಬೇಕು!
ಅದೇಗೆ ಸಾದ್ಯ?
ಸಣ್ಣ ಮಗುವಿಗೆ ಹುಟ್ಟಿದ ಕೂಡಲೇ ಬಿರಿಯಾಣಿ ಕೊಟ್ಟರೆ ಹೇಗೆ? ಮೆಲ್ಲ ಮೆಲ್ಲನೆ ಎಲ್ಲವೂ ಸರಿಯಾಗುತ್ತದೆಯೇ ಹೊರತು ಒಮ್ಮಿಂದಮ್ಮಲೇ ಎಲ್ಲವೂ ಸರಿಯಾಗಬೇಕೆಂದು ಹಠಹಿಡಿಯುವುದು ಮೌಢ್ಯ.
ಮತ್ತೆ ಸುನ್ನೀ ಟುಡೆಯ ಬೇಜಾರು ನಾವು ನಮ್ಮ ಆಲಿಂಗಳಿಗೆ ತಕ್ಬೀರ್ ಹೇಳುವುದು ಮತ್ತು ಸಮ್ಮೇಳನ ನಡೆಸುವುದು.
ನಮಗೆ ದೀನ್ ಹೇಳಿಕೊಟ್ಟವರು ನಮ್ಮ ಉಲಮಾಗಳಾಗಿದ್ದಾರೆ ತಾಜುಲ್ ಉಲಮಾ ಕೇರಳದಿಂದ ಬಂದು ಅಂದಿನ ಕುಗ್ರಾಮವಾಗಿದ್ದ ಉಳ್ಳಾಲಕ್ಕೆ ಕಾಲಿಟ್ಟು ದೀನಿನ ಪ್ರಭೆ ಸುರಿಸದೆ ಇರುತ್ತಿದ್ದಲ್ಲಿ ನಾವು ಕೂಡಾ ಗಟ್ಟದವರಂತೆ ಮನೆಯಲ್ಲಿ ದೇವತೆಗಳ ಪೋಟೋ ತೂಗು ಹಾಕಿ ನಮಿಸುತ್ತಿದ್ದೆವು!
ಉಲಮಾಗಳ ನಿರಂತರವಾದ ಭೋದನೆ ಮತ್ತು ನೇತೃತ್ವದಿಂದ ನಾವಿಂದು ಗಟ್ಟದ ಒಳ ಭಾಗದಲ್ಲಿರುವ ನಾಮಕಾಸ್ಥೆ ಮುಸಲ್ಮಾನರಾಗದೆ ನೈಜ ಮುಸಲ್ಮಾನರಾಗಿ ಬಾಳುತ್ತೇವೆ.ನಮಗೆ ಈ ಅನುಗ್ರಹ ಲಭಿಸಲು ನಿಮಿತ್ತರಾದ ಆಲಿಂಗಳಿಗೆ ತಕ್ಬೀರ್ ಹೇಳದಿದ್ದರೆ ಮತ್ಯಾರಿಗೆ ತಕ್ಬೀರ್ ಹೇಳಬೇಕು?
ವಹ್ಹಾಬಿಸಂ ಮೌದೂದಿಸಂ ಅವಿತಿಟ್ಟ ನೀಚ ಹೃದಯಗಳಿಗೆ ಅದು ಪಥ್ಯವಾಗಲ್ಲ.ಜಿಗುಪ್ಸೆ ಉಂಟಾಗಬಹುದು ಉಲಮಾಗಳನ್ನು ನೋಡುವಾಗ ಕೋಪ ಬರಬಹುದು ಅದರಲ್ಲಿ ಆಶ್ಚರ್ಯವಿಲ್ಲ.
ಕಾರಣ ಆದಂ ನೆಬಿವ(ಅ) ರವರಿಗೆ ಅಲ್ಲಾಹು ಇಲ್ಮ್ ನೀಡಿದ ಅದಾಗಲೇ ಅವರೊಬ್ಬ ಆಲಿಂ ಆದರು ಆ ಆಲಿಂ ನ್ನು ಗೌರವಿಸಲು ಮಲಕುಗಳಲ್ಲಿ ಅಲ್ಲಾಹನು ಆಜ್ಞೆಯಿತ್ತ. ಆದರೆ ಇಬ್ಲೀಸನಿಗೆ ಕೋಪ ಬಂತು.ಜಿಗುಪ್ಸೆ ಹುಟ್ಟಿತು.
ಅದೇ ಕೋಪ ಹಾಗೂ ಜಿಗುಪ್ಸೆ ಅವನ ಇಂದಿನ ತಲೆಮಾರುಗಳಿಗೂ ಉಲಮಾಗಳನ್ನು ಕಾಣುವಾಗ ಉಂಟಾಗುತ್ತದೆ.
ಉಲಮಾಗಳು ಸಮುದಾಯಕ್ಕೆ ಮಾಡಿದ ಸೇವೆಯ ಅಳಿಲು ಸೇವೆಯನ್ನು ಕೂಡಾ ಮಾಡದವನಾಗಿದ್ದಾನೆ ಅವರ ಕುರಿತು ವಿಮರ್ಶೆ ನಡೆಸುವುದು.
ಉಲಮಾಗಳ ಬಗ್ಗೆ ವಿಮರ್ಶೆ ಮಾಡುವ ಮೊದಲು ಅವರು ಸಮುದಾಯಕ್ಕಾಗಿ ಮಾಡಿದ ಸೇವೆಗಳನ್ನು ಗುರುತಿಸಿ ಸಂಪೂರ್ಣ ಬೆಂಬಲ ನೀಡಿ.ಆವಾಗ ನಿಮಗೂ ಕುರಾನ್ ಕಲಿಯ ಬಹುದು ಆದರೆ ಗಡಿಬಿಡಿ ಸಲ್ಲದು ಎಲ್ಲವೂ ಸಾವಾದಾನವೆಂದು ಮಾತ್ರ!
- ಅಬೂಶಝ
No comments:
Post a Comment