ಅದ್ಯಾವನೊಬ್ಬ ಸಳಪಿ ನನಗೆ ಕಾಲ್ ಮಾಡಿ,
ಅರೆ.. ಕುಬೂರಿ ಗೋರಿಯನ್ನು ಎತ್ತರಿಸಿ ಕಟ್ಟ ಬಾರದೆಂದು ಸ್ಪಷ್ಟ ಹದೀಸ್ ಇರುವಾಗ ನಿನ್ನ ಅದೆಂತಹ ವಾದ
ಗೋರಿಯನ್ನು ಎತ್ತರಿಸಿ ಕಟ್ಟ ಬಹುದೆಂದು..
ನಿನಗದೆಲ್ಲಿಯ ಪುರಾವೆ..??
ಅಂತೆಲ್ಲಾ ಕೇಳತೊಡಗಿದ..
ಜೊತೆಗೆ ಎತ್ತರಿಸಿ ಕಟ್ಟಿದ ಗೋರಿಗಳೆನ್ನೆಲ್ಲಾ ಧ್ವಂಸಗೆಯ್ಯ ಬೇಕೆಂಬ ಅರ್ಥ ಬರುವ ಕೆಲವೊಂದು ಹದೀಸ್ ಗಳನ್ನು ಪೋಸ್ಟ್ ಮಾಡಿದ.
ನಾನು ಹೇಳಿದೆ ಅದೆಲ್ಲವೂ ನನ್ನ ಸ್ವಂತ ವಾದವಲ್ಲ ಎಲ್ಲವನ್ನು ಕುರಾನ್ ಹದೀಸ್ ನಮಗಿಂತಲೂ ಡೀಪಾಗಿ ಕಲಿತ ಪ್ರಖ್ಯಾತ ಇಮಾಮ್ ಗಳ ಅಭಿಪ್ರಾಯಗಳನ್ನು ಶಹರ್ ಮಾಡಿದ್ದಷ್ಟೇ.
ಆವಾಗ ಅವನು ಹಾಗಾದರೆ ಎತ್ತರಿಸಲ್ಪಟ್ಟ ಗೋರಿಗಳನ್ನು ಧ್ವಂಸ ಮಾಡಬೇಕೆಂದು ಹದೀಸ್ ಗಳು ಸುಳ್ಳೇ..?
ನಾನು ಸಾವಧಾನದಿಂದ ಅವನಲ್ಲಿ ಹೇಳಿದೆ
ಒಂದು ಹದೀಸ್ ಅಥವಾ ಆಯತ್ ನಲ್ಲಿ ನಿಷೇಧ ಬಂದರೆ ಅದಕ್ಕೆ ಕೆಲವೊಂದು ಸಮಯ ಸಂದರ್ಭ ಗಳು ಇರುತ್ತೆ.
ಅದೆಲ್ಲವನ್ನೂ ಕುರಾನ್ ಹದೀಸ್ ಕಲಿತ ಇಮಾಮ್ ಗಳು ವಿವೇಚಿಸಿ ನಮಗೆ ತಿಳಿಸಿದ್ದಾರೆ.
ನೀವಾದರೂ ಒಂದು ಹದೀಸ್ ಸಿಕ್ಕಿದ ತಕ್ಷಣ ಅದಕ್ಕೆ ಕೈ ಹಾಕಿ ಸುಟ್ಟು ಕೊಂಡಿದ್ದೀರಿ.
ನಾವು ಹಾಗಲ್ಲ.
ಒಂದು ಮಗು ಬೆಂಕಿ ಕಂಡ ತಕ್ಷಣ ಅದಕ್ಕೆ ಕೈ ಹಾಕಿ ತಿನ್ನಲು ನೋಡುತ್ತೆ.
ಆವಾಗ ತಾಯಿ ಮಗುವನ್ನು ತಡೆದು ಅದರ ಮೇಲೆ ಪಾತ್ರೆ ಇಟ್ಟು ಪಾತ್ರೆಯ ಒಳಗೆ ಅಕ್ಕಿ ಹಾಕಿ ಬೇಯಿಸಿ ಬಿಸಿ ಬಿಸಿ ಯಾದ ಗಂಜಿ ತಯ್ಯಾರಿಸಿ ನಂತರ ಅದರ ಬಿಸಿ ಆರಿದ ಮೇಲೆ ಒಂದೊಂದು ಚಮಚದಲ್ಲಿ ಕೊಟ್ಟಾಗ ಮಗುವಿನ ಹೊಟ್ಟೆ ತುಂಬುತ್ತದೆ.
ಅದೇ ಸಮಯ ಆ ಮಗು ಡೈರಕ್ಟ್ ಬೆಂಕಿಗೆ ಕೈ ಹಾಕಿದ್ದಲ್ಲಿ ಮಗು ಅಗಾಧವಾದ ತೊಂದರೆಗೆ ಸಿಲುಕಿ ಜೀವನಷ್ಟ ಹೊಂದುವ ಸಾಧ್ಯತೆ ಇದೆ.
ಆದ್ದರಿಂದಲೇ ಕುರಾನ್ ಹದೀಸ್ ಗಳ ನಿಯಮ ಗಳ ವಿಷಯದಲ್ಲಿ ನಾವು ಮಗುವಿಗಿಂತಲೂ ಕಡಿಮೆ ಜ್ಞಾನದವರು.
ಹಾಗಾಗಿ ಇಮಾಮ್ ಗಳು ಏನು ಹೇಳುತ್ತಾರೋ ಅದನ್ನು ನಾವು ಮಾದರಿ ಮಾಡಿದರೆ ನಾವು ಬಚಾವ್.
ಅದಲ್ಲದೆ ನಾವು ಸ್ವಂತವಾಗಿ ವ್ಯಾಖ್ಯಾನಿಸಿದರೆ ನಾಶ ಕಟ್ಟಿಟ್ಟ ಬುತ್ತಿ...!!
ಅದೆಲ್ಲವೂ ಅವನಿಗೆ ಅರ್ಥವಾಗಿದೆಯೋ ಏನೋ ನನಗೊತ್ತಿಲ್ಲ.
ಆದರೆ ಮರುಮಾತನಾಡದೆ ಸುಮ್ಮನಿದ್ದುದನ್ನು ಕಂಡು ಅವನಲ್ಲಿ ನಾನು ಹೇಳಿದೆ ,
ಎತ್ತರಿಸಲ್ಪಟ್ಟ ಗೋರಿಗಳನ್ನು ಧ್ವಂಸ ಗೆಯ್ಯಬೇಕು ಎಂಬ ಹದೀಸ್ ಗಳ ತಾತ್ಪರ್ಯವನ್ನು ಮೂರಾಗಿ ವಿಂಗಡಿಸಲಾಗಿದೆ.
👉 ಒಂದನೇಯಾದಾಗಿ ವ್ಯಕ್ತಿಯ ಸ್ವಂತ ಅಧೀನದಲ್ಲಿರುವ ಭೂಮಿಯಾದರೆ ಅಲ್ಲಿ ಗೋರಿ ಎತ್ತರಿಸಿ ಕಟ್ಟುವುದು ಕರಾಹತ್. ಹರಾಂ ಇಲ್ಲ.
👉ಎರಡನೆಯದಾಗಿ ಸಾರ್ವಜನಿಕ ದಫನ್ ಭೂಮಿ ಅಥವಾ ವಕಫ್ ಗೆಯ್ಯಲ್ಪಟ್ಟ ಭೂಮಿಯಾಗಿದ್ದಲ್ಲಿ ಗೋರಿಗಳನ್ನು ಎತ್ತರಿಸಿ ಕಟ್ಟುವುದು ಹರಾಂ ನಿಷಿದ್ಧ ವಾಗಿರುತ್ತೆ.
👉ಮೂರನೇಯದಾಗಿ ಮೃತವ್ಯಕ್ತಿ ಪುಣ್ಯ ಪುರುಷನಾಗಿದ್ದರೆ ಅವರ ಕಬರ್ ಎತ್ತರಿಸಿ ಕಟ್ಟುವುದು, ಅದರ ಮೇಲೆ ಬಿಲ್ಡಿಂಗ್,ಖುಬ್ಬಾ ಮುಂತಾದುವುಗಳನ್ನು ನಿರ್ಮಿಸುವುದು, ಅನುವದನೀಯ.
ಬೇಕಾದರೆ ಅದಕ್ಕಿರುವ ಪುರಾವೆ ಇಲ್ಲಿದೆ.
ಎತ್ತರಿಸಲ್ಪಟ್ಟ ಗೋರಿಗಳನ್ನು ಧ್ಬಂಸ ಗೆಯ್ಯಬೇಕೆಂದು ಸಾರುವ ಹದೀಸ್ ಗಳನ್ನು ಕಾಣದವರಲ್ಲ ಇಮಾಮ್ ನವವಿ (ರ).
ಶರಹ್ ಮುಸ್ಲಿಮ್ ಗೆ ವ್ಯಾಖ್ಯಾನ ಬರೆದ ಅಗಾಧ ಆಲಿಂ ಆಗಿದ್ದಾರೆ.
ಅಂತಹ ಇಮಾಮ್ ನವವಿ (ರ) ಬರೆಯುತ್ತಾರೆ.✒👇👇
🔘👈 يجوز المسلم والذمي الوصية لعمارة المسجد الاقصي وغيره من المساجد ولعمارة قبور الانبياء والعلماء والصالحين لما فيها من احياء الزيارة والتبرك بها (روضة الطالبية 6/98)
👉"ಮಸ್ಜಿದುಲ್ ಅಖ್ಸಾ ಮುಂತಾದ ಮಸೀದಿಗಳ ಪರಿಪಾಲನೆ ಗೆ ಬೇಕಾಗಿ ವಿನಿಯೋಗಿಸಲು, ಮುಸ್ಲಿಮ್ ಮತ್ತು ದ್ಸಿಮ್ಮಿ ಕಾಫಿರ್ ತನ್ನ ಸೊತ್ತನ್ನು ವಸಿಯ್ಯತ್ ಮಾಡುವುದು ಅನುವದನೀಯ.
ಅದೇ ರೀತಿ ಝಿಯಾರತ್ ಸಕ್ರಿಯ ಗೊಳಿಸಲು ಮತ್ತು ಬರಕತ್ ಪಡೆಯಲಿಕ್ಕೆ ಬೇಕಾಗಿ ಅಂಬಿಯಾ,ಔಲಿಯಾ,ಆಲಿಂಗಳಂತಹ ಪುಣ್ಯ ಪುರುಷರ ಖಬರ್ ಪರಿಪಾಲನೆ (ಎತ್ತರಿಸಿ ಕಟ್ಟುವುದು,ಕುಬ್ಬ ನಿರ್ಮಿಸುವುದು, ವಸ್ತ್ರ ಹಾಸುವುದು..)ಗೆ ಬೇಕಾಗಿ ಯ್ಯುಝ್ ಮಾಡಲಿಕ್ಕೆ ಸೊತ್ತನ್ನು ನೀಡುವಂತೆ ವಸಿಯ್ಯತ್ ಮಾಡುವುದು ಅನುವದನೀಯ.
(ರೌಲತು ತ್ತಾಲಿಬೀನ್ 6/98)
ಅಂದರೆ ಪುಣ್ಯ ಪುರುಷರ ಖಬರನ್ನು ಅಲಂಕರಿಸುವುದು ಎತ್ತರಿಸಿ ಕಟ್ಟುವುದು ಖುಬ್ಬ ನಿರ್ಮಿಸುವುದೆಲ್ಲಾ ಹರಾಂ ಆಗಿದ್ದರೆ ಅದಕ್ಕಾಗಿ ತನ್ನ ಸ್ವತ್ತನ್ನು ವಿನಿಯೋಗಿಸುವಂತೆ ವಸಿಯ್ಯತ್ ಮಾಡುವುದು ಕೂಡಾ ಹರಂ ತಾನೇ..??
ಆದ್ದರಿಂದಲೇ ಈ ಗೊಂದಲಕ್ಕೆ ಸ್ಪಷ್ಟವಾಗಿ ಉತ್ತರಿಸಿದ್ದಾರೆ ಇಮಾಮ್ ನವವಿ
ಹಾಗೆ ವಸಿಯ್ಯತ್ ಮಾಡುವುದು ಹರಾಂ ಇಲ್ಲವೇ ಇಲ್ಲ ಅದೆಲ್ಲವೂ ಅನುವದನೀಯ..!
ಆಗ ಸಳಪಿ ಪುನಃ ಪ್ರಶ್ನಿಸಿದ ಹಾಗಾದರೆ ಹದೀಸ್ ನಲ್ಲಿ ಎತ್ತರಿಸಲ್ಪಟ್ಟ ಗೋರಿಯನ್ನು
ಪುಡಿಗೆಯ್ಯಬೇಕೆಂದು ಹೇಳಿದ್ದು ಯಾಕೆ.??
ನಾನು ಹೇಳಿದೆ ಅದು ನನ್ನಂತಹ ಸಾಮಾನ್ಯ ವ್ಯಕ್ತಿಗಳ ಗೋರಿಯ ಕುರಿತಾಗಿದೆ.
ಪುಣ್ಯ ಪುರುಷರ ಖಬರ್ ಇದರಿಂದ ಹೊರತಾಗಿದೆ.
ಅದಕ್ಕೆ ನಾನು ಅವನಿಗೆ ಮತ್ತೊಂದು ಪುರಾವೆ ಕೊಟ್ಟೆ.
ನೋಡು ಅಲ್ಲಾಮ ಬುಜೈರಿಮಿ ಬರೆಯುತ್ತಾರೆ.✒✒👇👇
🔘👈 وحرم البناء بمقبرة مسبلة ومحل ذلك ما لم يكن الميت من اهل الصلاح اخ.....
👉 ಸಾರ್ವಜನಿಕ ದಫನ್ ಭೂಮಿಯಲ್ಲಿ ಗೋರಿಗಳ ಮೇಲೆ ಕಟ್ಟಡ ಕಟ್ಟುವುದು ಹರಾಂ ಎಂಬ ನಿಯಮದಿಂದ ಪುಣ್ಯ ಪುರುಷರ ಕಬರ್ ಹೊರತಾಗಿದೆ.
(ಬುಜೈರಿಮಿ 1/496)
ಇಮಾಮ್ ಶರ್ಖಾವಿ ಬರೆಯುತ್ತಾರೆ.✒👇👇
🔘👈 ويستثني قبور نحو الصالحين........ ولو بقبة وافتي به الحلبي. (شرقاوي 1/354)
👉 ಗೋರಿಗಳನ್ನು ಎತ್ತರಿಸಲ್ಪಡುವುದು ಅವುಗಳ ಮೇಲೆ ಕಟ್ಟಡ ನಿರ್ಮಿಸುವುದು ಹರಾಂ ನಿಷಿದ್ಧ ಎಂಬ ನಿಯಮದಿಂದ ಅವುಲಿಯಾ,ಅಂಬಿಯಾ,ಆಲಿಂ ,ಶಹೀದ್ ಮುಂತಾದ ಪುಣ್ಯ ಪುರುಷರ ಕಬರ್ ಗಳನ್ನು ಹೊರತು ಪಡಿಸಲಾಗಿದೆ.
ಮಾತ್ರವಲ್ಲ ಅವರ ಖಬರಿನ ಮೇಲೆ ಖುಬ್ಬಾ ನಿರ್ಮಿಸುವಂತೆ ಇಮಾಂ ಹಲಬಿ (ರ) ರವರು ಫತ್ವಾ ಇದೆ.
(ಶರ್ಖಾವೀ 1/354)
ನಂತರ ಆ ಸಳಪಿ ಮಿತ್ರನಿಗೆ ಅಲ್ಲಾಮಾ ಝೈನುದ್ದೀನ್ ಮಖ್ದೂಮ್ ತಂಙಳ್ ರವರ ಫತ್ಹುಲ್ ಮುಹೀನ್ ಗ್ರಂಥ ದ ಉಧ್ದರಣಿ ಹೇಳಿಕೊಟ್ಟೆ.👇👇👇
🔘👈 (وكره بناء ) اي القبر(او عليه) بصحة النهي عنه بلا حاجة كخوف نبش او حفر سبع او هدم سيل ومحل كراهة البناء اذا كان بملكه اخ...
👉 ವನ್ಯಮೃಗಗಳು ಕಬರನ್ನು ಕೊರೆಯುವ ಭೀತಿ , ನೆರೆ ಮಯ್ಯಿತ್ ನ್ನು ಕೊಚ್ಚಿಕೊಂಡು ಹೋಗುವ ಭಯ ಮುಂತಾದ ತೊಂದರೆ ಇಲ್ಲದಿರುವಾಗ, ಕಬರನ್ನು ಎತ್ತಿರಿಸಕೂಡದು ಎಂಬ ಹದೀಸ್ ನಲ್ಲಿ ವಿರೋಧ ಇರುವುದರಿಂದ ಅನಗತ್ಯವಾಗಿ ಕಬರನ್ನು ಎತ್ತಿರಿಸಿ ಬಿಲ್ಡಿಂಗ್ ಕಟ್ಟುವುದು ಸ್ವಂತ ಭೂಮಿಯಲ್ಲಾದರೆ ಕರಾಹತ್. ಹರಾಂ ಇಲ್ಲ.
ಮುಂದುವರಿದು ಫತುಹುಲ್ ಮುಹೀನ್ ಹೇಳುತ್ತದೆ.👇👇👇
🔘👈 .... وهي مااعتاد اهل البلد الدفن فيها عرف اصلها ومسبلها املا او موقوفة حرم وهدم وجوباً ..... اخ.
👉 ಅದೇ ಸಮಯ ಸಾರ್ವಜನಿಕ ದಫನ್ ಭೂಮಿ ಅಥವಾ ವಕಫ್ ಗೆಯ್ಯಲ್ಪಟ್ಟ ಭೂಮಿಯಾದರೆ ಅಲ್ಲಿ ಗೋರಿಗಳನ್ನು ಎತ್ತರಿಸಿ ಕಟ್ಟುವುದು ನಿಷಿದ್ಧ ಹರಾಂ ಆಗಿರುತ್ತೆ.
ಮಾತ್ರವಲ್ಲ ಅಂತಹ ಎತ್ತರಿಸಲ್ಪಟ್ಟ ಕಬರ್ ಗಳನ್ನು ಪುಡಿಗೆಯ್ಯುವುದು ಕಡ್ಡಾಯವಾಗಿರುತ್ತೆ.
ಕಾರಣ👇👇👇
🔘👈ففيه تضيق علي المسلمين بما لا غرض فيه
👉 ಮಯ್ಯಿತ್ ಮಣ್ಣಲ್ಲಿ ಜೀರ್ಣಿಸಿದ ನಂತರವೂ ಅಲ್ಲಿ ಕಟ್ಟಿದ ಸ್ಮಾರಕಗಳು ಹಾಗೇ ಬಾಕಿಯಾಗಿ ಜನರಿಗೆ ತೊಂದರೆಯಾಗುತ್ತದೆ.
👉ಫತುಹುಲ್ ಮುಹೀನ್ 109-110
ಈ ನಿಯಮಗಳು ಸಾಮಾನ್ಯ ವ್ಯಕ್ತಿಯ ಗೋರಿಗೆ ಮಾತ್ರ ಭಾದಕವಾಗಿರುತ್ತದೆ. ಔಲಿಯ ಅಂಬಿಯಾ,ಆಲಿಂ ಗಳಂತಹ ಪುಣ್ಯ ಪುರುಷರ ಖಬರ್ ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.
ಅದೇ ಫತುಹುಲ್ ಮುಹೀನ್ ನ 228 ನೇ ಪುಟ ನೋಡಿ.
🔘👈.......... صحة الوصية كالوقف لضريح الشيخ الفلان...................
وكعمارة نحو قبة علي نحو عالمٍ اخ....
(فتح المعين 227)
👉 ಪುಣ್ಯ ಪುರುಷರ ಕಬರಿನ ಮೇಲೆ ಖುಬ್ಬ ನಿರ್ಮಾಣ ದಂತಹ ಕಾರ್ಯಗಳಿಗೆ ತನ್ನ ಸ್ವತ್ತನ್ನು ವಿನಿಯೋಗಿಸುವಂತೆ ವಸಿಯ್ಯತ್ ಮಾಡುವುದು ಅಥವಾ ವಕಫ್ ಮಾಡುವುದು ಸರಿಯಾದ ಕ್ರಮವಾಗಿದ್ದು,ಆ ಕರ್ಮ ಸಿಂಧುವಾಗಿರುತ್ತೆ.
👉ಫತುಹುಲ್ ಮಹೀನ್ 227
🔘✒ ಸಂಕ್ಷಿಪ್ತವಾಗಿ ಹೇಳುವುದಾದರೆ ಮುಂಚೆ ವಿವರಿಸಿದ ಹಾಗೆ ಅನಗತ್ಯವಾಗಿ ಸಾಮಾನ್ಯ ವ್ಯಕ್ತಿಯ ಖಬರ್ ಎತ್ತರಿಸಿ ಕಟ್ಟುವುದು ಅದರ ಮೇಲೆ ಬಿಲ್ಡಿಂಗ್, ಖುಬ್ಬಾ ನಿರ್ಮಿಸುವುದು ಮುಂತಾದ ಕಾರ್ಯಗಳು ಸ್ವಂತ ಭೂಮಿಯಲ್ಲಾದರೆ ಹದೀಸ್ ನಲ್ಲಿ ವಿರೋಧ ಬಂದ ಕಾರಣ ಅದು ಕರಾಹತ್.
ಅಂದರೆ ಹರಾಂ ಅಲ್ಲ.
ಸಾರ್ವಜನಿಕ ಅಥವಾ ವಕ್ಫ್ ಗೆಯ್ಯಲ್ಪಟ್ಟ ಭೂಮಿಯಾಗಿದ್ದರೆ ಗೋರಿ ಎತ್ತರಿಸಿ ಕಟ್ಟುವುದು ಹರಾಂ ನಿಷಿಧ್ದವಾಗಿರುತ್ತೆ.
ಜನರಿಗೆ ತೊಂದರೆ ಕೊಡುವ ಇಂಥಹ ಗೋರಿಗಳನ್ನು ಪುಡಿಗೆಯ್ಯವುದು ಕಡ್ಡಾಯ.
ಅದೇ ಸಮಯ ಖಬರ್ ಪುಣ್ಯ ಪುರಿಷರದ್ದಾಗಿದ್ದರೆ ಸ್ವಂತ ಭೂಮಿ ಅಥವಾ ಇನ್ನೊಬ್ಬರ ಸಮ್ಮತ ಪ್ರಕಾರ ಅವರ ಭೂಮಿಯಲ್ಲಿ , ಝಿಯಾರತ್ ಸಕ್ರಿಯಗೊಳಿಸುವ,ಬರಕತ್ ಪಡೆಯುವ ಉದ್ದೇಶದಿಂದಾಗಿದ್ದಲ್ಲಿ ಅದನ್ನು ಎತ್ತರಿಸಿ ಕಟ್ಟುವುದು,ಝಿಯಾರತ್ ಗೆ ಬರುವವರ ಸೌಕರ್ಯಕ್ಕಾಗಿ ಕಬರಿನ ಸುತ್ತ ಬಿಲ್ಡಿಂಗ್ ಕಟ್ಟುವುದು, ಖುಬ್ಬಾ ನಿರ್ಮಾಣ ಎಲ್ಲವೂ ಅನುವದನೀಯ.ಮಾತ್ರವಲ್ಲ ಪುಣ್ಯಕರ್ಮವಾಗಿರುತ್ತೆ.
ಇದು ಸಾರ್ವಜನಿಕ ಭೂಮಿಯಲ್ಲಾದರೂ ಕೂಡಾ ಕರಹತ್ ಇಲ್ಲ ಎಂದಾಗಿದೆ ಕೆಲವು ಇಮಾಮ್ ಗಳ ಅಭಿಪ್ರಾಯ.
ಅಂತಿಂತೂ ಪುಣ್ಯ ಪುರುಷರ ಖಬರ್ ಎತ್ತರಿಸಿ ಕಟ್ಟವುದು ಅನುವದನೀಯ ಎಂಬುವುದರಲ್ಲಿ ಪಂಡಿತರ ಮಧ್ಯೆ ಅಭಿಪ್ರಾಯ ವ್ಯತ್ಯಾಸ ಇಲ್ಲವೇ ಇಲ್ಲ..
ಇದೆಲ್ಲವನ್ನು ಆ ಕಡೆಯಿಂದ ಮರುಮಾತಿಲ್ಲದೆ ಕೇಳುತ್ತಿದ್ದ ಸಳಪಿ ಫೋನ್ ಡಿಶಕನಕ್ಟ್ ಮಾಡಿದ.
ನಂತರ ಮೆಸ್ಸೇಜೊಂದನ್ನು ರವಾನಿಸಿದ
ಆ ಮೆಸ್ಸೇಜ್ ಹೀಗಿತ್ತು..
"ಹೇ.... ಕುಬೂರಿ ಕುರಾಫಿ ಅಬೂಶಝ ನೀನು ಈ ಜನ್ಮದಲ್ಲಿ ಸುದುರಾಗೋದು ಕಷ್ಟ" ಎಂದು.
ಇಷ್ಟೆಲ್ಲಾ ಪುರಾವೆಗಳನ್ನು ನೀಡಿದ ನಂತರವೂ ಅವನು ಈ ರೀತಿ ಮೆಸ್ಸೇಜ್ ಕಳುಹಿಸಿದಾಗ ನನಗನಿಸಿತು ಅಬೂಜಹಲ್ ನ ಸಂತತಿಗಳು ಈಗಲೂ ಸಕ್ರಿಯರಾಗಿದ್ದಾರೆ. ಎಷ್ಟು ಪುರಾವೆ ಕೊಟ್ಟರೂ ಅವರು ತಮ್ಮ ಅಪಹಾಸ್ಯ ಮಾಡುವ ಚಾಳಿ ಬಿಡಲ್ಲ ಎಂದು ಮನಸ್ಸಲ್ಲೇ ನಕ್ಕು ಸುಮ್ಮನಾದೆ.
ಇನ್ಶಾ ಅಲ್ಲಾ ಮುಂದಿನ ಬರಹ ಕಬರ್ ನ್ನು ಚುಂಬಿಸುವುದರ ಕುರಿತಾಗಿದೆ.
ಅದುವರೆಗೆ ಕಾಯುವಿರೆಂಬ ನಿರೀಕ್ಷೆಯೊಂದಿಗೆ....
✒ ಅಬೂಶಝ
No comments:
Post a Comment