Saturday, October 14, 2017

ಶೈಖುನಾ ಉಸ್ತಾದರ ತಿರುಪಾದವನ್ನು ರಾಜೇಶನಿಗೆ ತೊಳಯಬೇಕಂತೆ!........
ಸತೀಶನಿಗೆ ಆ ತಿರುಹಸ್ತ ಚುಂಬಿಸಬೇಕಂತೆ!...
————————————
'ಅಲಿಫ್' ಡೈರಕ್ಟರ್ ಅಮೀನ್ ಮುಹಮ್ಮದ್ ಹಸನ್ ಸಖಾಫಿ ಬರೆಯುತ್ತಾರೆ 🖊🖊🖊

2016 ಫೆಬ್ರುವರಿ 24 ಬುಧವಾರ ರಾತ್ರಿ ದೆಹಲಿಯಿಂದ ಬೆಂಗಳೂರು ಮಾರ್ಗವಾಗಿ ಕೊಚ್ಚಿಗೆ ಶೈಖುನಾ ಕಾಂತಪುರಂ ಉಸ್ತಾದರ ಜೊತೆ ಒಂದು ಯಾತ್ರೆ..
ರಾತ್ರಿ 11 ಗಂಟೆಗೆ ನ್ಯೂಡೆಲ್ಲಿಯಿಂದ ಹೊರಟ indigo ವಿಮಾನ ಬೆಳಗಿನ ಜಾವ 1:30ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು.
ಕೊಚ್ಚಿಗೆ ಹೋಗುವ airways ಮುಂಜಾನೆ ಸಮಯ 5:50 ಕ್ಕೆ.
ಯಾತ್ರೆಯಲ್ಲಿ ನಮ್ಮ ಜೊತೆಗಿದ್ದ ಮಾಜಿ ಕೇಂದ್ರ ಸಚಿವ CM IBRAHIM ಉಸ್ತಾದರವರೊಂದಿಗೆ ಹೇಳಿದರು..
Airport ನ ಹೊರಗೆ ಹೋಟೆಲ್ ನಲ್ಲಿ ವಿಶ್ರಾಂತಿ ಪಡೆಯಬಹುದೆಂದು....

"ಬೇಡ ನಾಲ್ಕು ತಾಸುಗಳು ತಾನೇ?"
ಸುಮ್ಮನೆ ಯಾಕೆ ಹಣ ಖರ್ಚು ಮಾಡುವುದೆಂಬ ರೀತಿಯಲ್ಲಿ ನಾನಿಲ್ಲೇ ಕುಳಿತು ಕೊಳ್ಳುವೆನು ಎಂದು ಉಸ್ತಾದ್ ಹೇಳಿದರು..

ಇದು ಕೇಳಿದ cm ಇಬ್ರಾಹಿಮ್ ಸಾಹೇಬರು ನನ್ನತ್ತಿರ ಹೇಳಿದರು
 " ಮೂರು ದಿನಗಳಾಯಿತು ದೆಹಲಿಯಲ್ಲಿ ಸರಿಯಾಗಿ ನಿದ್ರೆ ಮತ್ತು ವಿಶ್ರಾಂತಿ ಇಲ್ಲದೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಓಡಾಡುತ್ತಾ ಇದ್ದಾರೆ ತುಂಬಾ tired ಆಗಿದ್ದಾರೆ.ಇಲ್ಲಿಯೂ ವಿಶ್ರಾಂತಿ ಇಲ್ಲದೆ ಹೀಗೆ ಕೂರುವುದಾ? ವಯಸ್ಸು 78 ಕಳೆದಿದೆ. ಕಾಲೆರಡೂ ನೀರುಬಂದು ಬಾತಿದೆ! ಬಲಕೈ ಕೂಡಾ ಬಾತು ನೋವಿನಿಂದ ಅಲುಗಾಡಿಸಲು ಸಾದ್ಯವಾಗುದಿಲ್ಲ.ಏನು ಮಾಡುವುದು?
cmಸಾಹೇಬರು ನನ್ನೊಂದಿಗೆ ಮಾತನಾಡುವ ಮಧ್ಯೆ ಉಸ್ತಾದ್ ಹೇಳಿದರು
" ನೀವು ಹೋಗಿ... ನೀವೇಕೆ ಸುಮ್ಮನೆ ಸಮಯ ಪೋಳುಮಾಡಿ ನಿದ್ರೆ ಹಾಳು ಮಾಡುವುದು? ಹೋಗಿ ಮಲಗಿ"

ಇದು ಕೇಳಿದ cm ರವರು ದುಖತಪ್ತರಾಗಿ ಅಳುತ್ತಾ ಉಸ್ತಾದರ ಕೈ ಮೆಲ್ಲನೆ ಹಿಡಿದು ಹೇಳಿದರು
"ನಾನೇಕೆ ಮಲಗಬೇಕು ನಾನಿಲ್ಲಿಯೇ ಕೂರುತ್ತೇನೆ ಉಸ್ತಾದರ ಸಾನಿಧ್ಯ ನನಗೆ ಸಾಕು. ಎಷ್ಟು ಯತೀಂ ಮಕ್ಕಳು ಉಸ್ತಾದರಿಂದಾಗಿ ಸುಖವಾಗಿ ನಿದ್ರಿಸುತ್ತಿದ್ದಾರೆ.ಆದರೆ ಉಸ್ತಾದರಿಗೆ ನಿದ್ರೆಯಿಲ್ಲ!
ಅಲ್ಲಾಹು ಆಯುಷ್ಯ ನೀಟಿಕೊಡುಕ್ಕಟ್ಟ್" ಅಳುವಿನಿಂದಾಗಿ cm ಇಬ್ರಾಹೀಂ ಸಾಹೇಬರಿಗೆ ಮಾತು ಪೂರ್ತಿ ಮಾಡಲು ಸಾಧ್ಯವಾಗಲಿಲ್ಲ.
ಅಲ್ಲಿಯೇ ನಿಂತುಕೊಂಡಿದ್ದ cm ಸಾಹೇಬರೊಂದಿಗೆ ಪುನಃ ಉಸ್ತಾದ್ ಹೇಳಿದರು
 " ತಾವು ಹೋಗಿರಿ ಅಮೀನ್ ಇದ್ದಾನೆ ತಾನೆ ನನ್ನ ಜೊತೆ"

cm ಸಾಹೇಬರು airport ಅಧಿಕಾರಿಗಳೊಂದಿಗೆ ಮಾತನಾಡಿ ನನಗೆ ಮತ್ತು ಉಸ್ತಾದರಿಗೆ VIP lounge ಏರ್ಪಾಡು ಮಾಡಿ ಹೊರಟು ಹೋದರು.
Lounge ಗೆ ಪ್ರವೇಶಿಸಿದ ಉಸ್ತಾದ್ ವುಝೂಅ್ ನಿರ್ವಹಿಸಿ ತಹಜ್ಜುದ್ ನಮಾಝ್ ಮಾಡಿ ಝಿಕ್ರ್ ಅವ್ರಾದ್ ನಲ್ಲಿ ತಲ್ಲೀನರಾದರು.
ಅದಾದ ನಂತರ ಕೊಚ್ಚಿಗೆ ವಿಮಾನ ಹತ್ತಲಿಕ್ಕಾಗಿ ಹೊರಟು counter ಮುಂಭಾಗದಲ್ಲಿ ಕುಳಿತರು.
ಸಮಯ.4: 30 am ಫಜರ್ ನಮಾಝ್ ಗೆ ವುಝೂಅ್ ನಿರ್ವಹಿಸಲಿಕ್ಕಾಗಿ ಉಸ್ತಾದರ ಜೊತೆ ನಾನೂ washroom ಪ್ರವೇಶಿಸಿದಾಗ ಯುವಕನೊಬ್ಬ ಓಡುತ್ತಾ ಬಂದು ಸಹಾಯ ಮಾಡಿದ.
ಉಸ್ತಾದರ ಕಾಲು ತೊಳೆಯಲಿಕ್ಕಾಗಿ ನೀರು ತಂದಿದ್ದ ಆತ!
ಅವನಿಗೆ ಉಸ್ತಾದರ ಪಾದ ತೊಳೆಯಬೇಕಂತೆ!
ಆದರೆ ನಾನು ಬಿಟ್ಟು ಕೊಡಲು ತಯ್ಯಾರಿರಲಿಲ್ಲ.ಅರ್ಧಂಬರ್ಧ ನಿದ್ರೆ ಮತ್ತು ಧೀರ್ಘ ಯಾತ್ರೆ ನಿಮಿತ್ತ ಬಾತು ಹೋಗಿದ್ದ ಆ ತಿರುಪಾದವನ್ನು ಮುಂಜಾನೆಯೇ ತೊಳೆಯಲು ಸಿಕ್ಕಿದ ಭಾಗ್ಯವನ್ನು ಯಾಕೆ ನಾನು ಬಿಟ್ಟುಕೊಡಬೇಕು?
ನಾನು ಆತನಿಂದ ನೀರು ತೆಗೆದುಕೊಂಡು ಆ ಪಾದಗಳೆರಡನ್ನೂ ನಾನೇ ತೊಳೆದು ಕೊಟ್ಟು ಧನ್ಯಗೊಂಡೆ.
ವುಝೂಅ್ ಮುಗಿಸಿ ಹೊರಬಂದಾಗ ಉಸ್ತಾದ್ ನನ್ನಲ್ಲಿ 100 ರೂಪಾಯಿ ಕೇಳಿಪಡಕೊಂಡು ಅದನ್ನು ಆ ಯುವಕನ ಕೈಗಿತ್ತರು.
ನಾನು ಅವನಲ್ಲಿ ಕೇಳಿದೆ ಕ್ಯಾ ನಾಮ್ ಹೇ?
'ರಾಜೇಶ್' ಎಂದ.
ಘರ್ ಕಹಾಂ ಹೇ ?
ಕೇಳಿದೆ 'ದೇವನಹಳ್ಳಿ' ಎಂದುತ್ತರಿಸಿದ.
"ಹಝ್ರತ್ ಕೋ ಕರ್ನಾಟಕ ಯಾತ್ರೆ ಮೆ ದೂರ್ ಸೆ ದೇಕ.... ಅಭಿ ಪೆಹಲೆ ಬಾರ್ ಮಿಲಾ"
(ಕರ್ನಾಟಕ ಯಾತ್ರೆ ಯಲ್ಲಿ ದೂರದಿಂದ ದರ್ಶಿಸಿದ್ದೆ. ಇದೀಗ ಮೊದಲ ಬಾರಿ ಮುಖತ ನೋಡಿದೆ)
ಅವನ ಮುಖದಲ್ಲಿ ಸಂತೋಷವಿತು.

ವಿಮಾನ ಹತ್ತಲು ಹೊರಡುವಾಗ ಮತ್ತೊಬ್ಬರ ಆಗಮನವಾಯಿತು.
ಒಂದು ಕೈಯಲ್ಲಿ ಬ್ಯಾಗ್ ಮತ್ತೊಂದು ಕೈಯಲ್ಲಿ ಉಸ್ತಾದರ ಕೈ ಹಿಡಿದು ಹೋಗುತ್ತಿದ್ದ ನನ್ನಲ್ಲಿ ಅವರು ಹೇಳಿದರು.
" ಉಸ್ತಾದರ ಕೈ ನಾನು ಹಿಡಿಯುತ್ತೇನೆ"
ಬೇಡ ಪರವಾಗಿಲ್ಲ ಎಂದೆ.
 ಆಗ ಆ ವ್ಯಕ್ತಿ ಹೇಳಿದರು
"ನನಗೆ ಉಸ್ತಾದರ ಕೈಗಳನ್ನು ಒಮ್ಮೆ ಚುಂಬಿಸಬೇಕು!"
ನಾನು ಸಮ್ಮತಿಸಿದೆ.
ಅವರು ಆ ತಿರು ಹಸ್ತವನ್ನು ಹಿಡಿದು ಚುಂಬಿಸಿದರು.
ನಾನು ಕೇಳಿದೆ ಏನು ಹೆಸರು ? ಊರು ಯಾವುದು?
ಆ ವ್ಯಕ್ತಿ ಹೇಳಿದರು
 " ನನ್ನ ಹೆಸರು ಸತೀಶ್!
ಕೊಲ್ಲಂ ಜಿಲ್ಲೆಯವನು, ಉಸ್ತಾದರನ್ನು ಪೇಪರ್ ಮತ್ತು TV ಯಲ್ಲಿ ದಾರಾಳ ನೋಡಿದ್ದೇನೆ.ಕೇರಳ ಯಾತ್ರೆ ಕೊಲ್ಲಂ ಗೆ ತಲುಪಿದಾಗ ದೂರದಿಂದ ದರ್ಶಿಸಿದ್ದೇನೆ. ಇದೀಗ ಮೊದಲ ಬಾರಿ ಹತ್ತಿರದಿಂದ ನೋಡುವ ಭಾಗ್ಯ ಸಿಕ್ಕಿದೆ!

ಮಾನವತೆಯ ಸುಮಂಗಳ ಸಂದೇಶ ಹರಡುತ್ತಾ ನಡೆಸಿದ ಉಸ್ತಾದರ ಕೇರಳ ಮತ್ತು ಕರ್ನಾಟಕ ಯಾತ್ರೆ ಮನುಷ್ಯ ಮನಸ್ಸುಗಳಲ್ಲಿ ಎಷ್ಟೊಂದು ಪ್ರಭಾವ ಬೀರಿದೆ ಎಂದು ನೆನೆಸಿ ನನ್ನ ಕಣ್ಣಿನಂಚಿನಲ್ಲೂ ನಾನರಿಯದೆ ನೀರು ಬಂತು.

ಸರಿಯಾಗಿ ನಿದ್ರೆ ಮತ್ತು ವಿಶ್ರಾಂತಿ ಇಲ್ಲದೆ ಸಮೂಹ ಮತ್ತು ಸಮುದಾಯದ ಸಬಲೀಕೆಣಕ್ಕಾಗಿ ಬಾತು ನೀರು ತುಂಬಿದ ಕಾಲುಗಳನ್ನು ಎಳೆಯುತ್ತಾ ನೋವಿನಿಂದ ಅಲುಗಾಡಿಸಲಾಗದ ಕೈಗಳನ್ನು ಹೊತ್ತು ನಡೆಯುತ್ತಿರುವಾಗಲೂ, ಕ್ಷೀಣಿಸದ ಅತಿ ವಿಶಾಲವಾದ ಹೃದಯದೊಂದಿಗೆ 78ರ ಈ ಮುದಿ ವಯಸ್ಸಿನಲ್ಲೂ ಓಡಾಡುತ್ತಿರುವ ಈ ಮಹಾ ಉಸ್ತಾದರ ಕುರಿತು ಅವರು ಹೇಳುತ್ತಿರುವುದು 'ಆಡಂಭರ ಜೀವಿ" ಎಂದು!

ಒಂದಂತು ನಿಜ.
ರಾತ್ರಿ ಹಗಲೆನ್ನದೆ ಸಮುದಾಯಕ್ಕಾಗಿ ಅವಿಶ್ರಾಂತ ದುಡಿಯುತ್ತಿರುವ ನನ್ನ ಶೈಖುನಾ ಅದೆಷ್ಟು ಆಡಂಭರ ಉಪಯೋಗಿಸಿದರೂ ಅದು ಕಮ್ಮಿಯೇ.

ಅಲ್ಲಾಹು ಆ ನೆರಳನ್ನು ಧೀರ್ಘಕಾಲ ನೆಲೆನಿಲ್ಲಿಸಲಿ. ಅದು ಅನುಭವಿಸುವ ಭಾಗ್ಯ ನಮಗೆಲ್ಲರಿಗೂ ನೀಡಲಿ ಆಮೀನ್

✒ ಅಬೂಶಝ

No comments:

Post a Comment