Saturday, October 14, 2017

ನಮ್ಮ ನಾಯಕರು ಸಮುದಾಯ ಧ್ವನಿಯಾಗಿ ಅಂತರಾಷ್ಡ್ರೀಯ ಮಟ್ಟದಲ್ಲಿ ಮಿಂಚಬೇಕೆಂದು ನಿರೀಕ್ಷಿಸುವುದು ತಪ್ಪಾ❓
''''''''''''''''''''''''''''''''''''''''''''''''''''''''''''

ಹಳ್ಳಿಯ ಅನೇಕ ಜಾನುವಾರುಗಳನ್ನು ಆ ಆನೆ ಕಾಲಿನಿಂದ ತದಕಿ ಕೊಂದು ಹಾಕಿದೆ! ತೋಟದಲ್ಲಿರುವ ಕಂಗು ತೆಂಗುಗಳನ್ನು ಸೊಂಡಿಲಿನಿಂದ ಹೊಡೆದುರುಳಿಸಿ ಅಪಾರ ನಾಶ ನಷ್ಟ ಮಾಡಿದೆ.ರಸ್ತೆ ಬದಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ಅಮಾಯಕರನ್ನು ಎತ್ತಿ ಎಸೆದು ಹತ್ಯೆ ಗೈದಿದೆ.ಆದರೂ ಅವನ 'ಮದ' ಇಳಿದಿಲ್ಲ.
ಇದೀಗ ಆನೆ ಮೇಲೆ ಏರಿದ ಮೂವರು ಈಗಲೂ ಪ್ರಾಣಭಯದಿಂದ ಅಳುತ್ತಾ ಇದ್ದಾರೆ.ತಮ್ಮನ್ನು ರಕ್ಷಿಸಿ ರಕ್ಷಿಸಿ ಅಂತ ಗೋಗೆರೆಯುತ್ತಿದ್ದಾರೆ.ಆದರೆ ಜನರೆಲ್ಲಾ ಭಯಭೀತರಾಗಿ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಆವಾಗ ಒಂದಿಬ್ಬರು ಧೈರ್ಯಮಾಡಿ ಓಡದೆ ಅಲ್ಲೇ ತಂಗುತ್ತಾ ಆನೆ ಮೇಲೆ ಇರುವವರನ್ನು ರಕ್ಷಿಸುವ ದಾರಿ ಹುಡುಕುತ್ತಾರೆ. ತಂತ್ರಪರವಾಗಿ ಹಲವಾರು ಪ್ರಯೋಗ ಉಪಯೋಗಿಸಿ ಕೊನೆಗೆ ಹೇಗಾದರೂ ಮಾಡಿ ಆ ಮೂವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗುತ್ತಾರೆ.
ಅಪಾಯದಲ್ಲಿರುವವರನ್ನು ರಕ್ಷಿಸಬೇಕೆಂಬ ತಮ್ನ ಹೊಣೆಗಾರಿಕೆಯಿಂದ ನುಣುಚಿ ಕೊಳ್ಳದೆ ಅಕ್ರಮಣಕಾರಿಯಾದ ಆನೆಯ ಕೈಯಿಂದ ತಮ್ನ ಹಕ್ಕನ್ನು ತಂತ್ರಪರವಾಗಿ ಗಿಟ್ಟಿಸಿಕೊಳ್ಳುತ್ತಾರೆ.
ಇದೊಂದು ಉದಾಹರಣೆ ಮಾತ್ರ.

ಇನ್ನು ವಿಷಯಕ್ಕೆ ಬರುತ್ತೇನೆ

ಹೌದು ಮುಖ್ಯಮಂತ್ರಿಯಾಗಿದ್ದಾಗ ಸಮುದಾಯಕ್ಕೆ ಅಪಾರ ನಾಶ ನಷ್ಟವನ್ನುಂಟು ಮಾಡಿದವರು ದೇಶದ ಚುಕ್ಕಾಣಿ ಹಿಡಿದಿದ್ದಾರೆ. ಬೀದಿ ಬೀದಿಗಳಲ್ಲಿ ಅಟ್ಟಾಡಿಸಿ ಹೊಡೆಯುವ ಬಡಿಯುವ ದೃಶ್ಯ ಸೋಷಿಯಲ್ ಮೀಡಿಯದಲ್ಲಿ ಕೋಮನ್ ಆಗಿದೆ. ದನವೊಂದಿದ್ದರೆ ಸುಗಮವಾದ ಸಂಸಾರ ನಡಸಲು ಸಾದ್ಯವಾಗುತ್ತಿದ್ದ ದೇಶದಲ್ಲಿ ಸಂಸಾರದ ಸರ್ವ ನಾಶಕ್ಕೆ ದನವೊಂದೇ ಸಾಕು ಎಂಬ ಪರಿಸ್ಥಿತಿ ಸಂಜಾತವಾಗಿದೆ.ಮನುಷ್ಯನಿಗಾಗಿ ಪ್ರಾಣಿಗಳನ್ನು ಕಸಾಯಿ ಮಾಡಬೇಕಾದವರು, ಪ್ರಾಣಿಗಳಿಗಾಗಿ ಮನುಷ್ಯನನ್ನು ಕಸಾಯಿ ಮಾಡುತ್ತಾರೆ. ಅಂದರೆ ಆನೆಯ 'ಮದ' ಇಳಿದಿಲ್ಲ ಎಂದರ್ಥ.
ಇಂತಹ ಸಂದಿಗ್ಧ ಘಟ್ಟದಲ್ಲಿ ನಾವೆಲ್ಲಾ ಆನೆಗೆ ಹೆದರಿ ದಿಕ್ಕುಪಾಲಾಗಿ ಓಡಿದರೆ ಗತಿ ಏನಾದೀತು?
'ಮದ' ವೇರಿದ ಆನೆಯ ಮುಂದೆ ನಮ್ಮಲ್ಲಿ ಯಾರಾದರೊಬ್ಬರ ಮಗು ಇದ್ದು ಅದು ಪ್ರಾಣ ಭೀತಿಯಿಂದ ಬೊಬ್ಬಿಡುವಾಗ ಅದನ್ನು ಬಿಟ್ಟು ಹೋಗಲು ನಾವು ತಯ್ಯಾರಾಗುತ್ತೇವೆಯಾ? ಇಲ್ಲ ಏನೆಲ್ಲಾ ತಂತ್ರ ಉಪಯೋಗಿಸಿಯಾದರೂ ನಮ್ಮ ಮಗುವನ್ನು ಆ ಭೀಕರ ಜೀವಿಯ ಕೈಯಿಂದ ರಕ್ಷಿಸಲು ನಾವು ಹೆಣಗಾಡುವುದು ಖಂಡಿತಾ!
ಇದೀಗ ದೇಶ ಫ್ಯಾಸಿಶ್ಟ್ ಗಳ ಕೈಗೊಂಬೆಯಂತಿದೆ.ಜವಾಬ್ದಾರಿಯುತ ಸ್ಥಾನದಲ್ಲಿದ್ದು ಮಾತನಾಡಬೇಕಾದವರು ಮುಸ್ಲಿಮರ ನಿರ್ಮೂಲನೆಯ ಮಾತನ್ನಾಡುತ್ತಿದ್ದಾರೆ.
'ಸ್ವಾಮಿ' ಎಂಬ ಗೌರವ ನಾಮವಿಟ್ಟುಕೊಂಡೇ ಮುಸ್ಲಿಮರು ಪಾಕಿಸ್ಥಾನಕ್ಕೆ ಹೋಗಬೇಕೆಂದು ಅರಚುತ್ತಾರೆ.ದನ ವ್ಯಾಪಾರದ ಹೆಸರಲ್ಲಿ ಮುಗ್ಧ ಬಾಲನನ್ನು ಕೊಂದು ತೂಗು ಹಾಕುತ್ತಾರೆ. ಅಡಿಗೆ ಮನೆಯ 'ಪ್ರಿಜ್'ನಲ್ಲಿರುವ ಮಾಂಸದ ಹೆಸರಲ್ಲಿ ಬಡಿದು ಕೊಲ್ಲುತ್ತಾರೆ!
ಟೋಟಲೀ ಭೀತಿಜನಕ ವಾತವರಣ.

ಈ ಸಂದರ್ಭದಲ್ಲಿ ಸಮುದಾಯದ ಹಕ್ಕನ್ನು ತಂತ್ರಪರವಾಗಿ ಪಡಕೊಳ್ಳುವ ದಾರಿ ಹುಡುಕಬೇಕೇ ಹೊರತು ಹೆದರಿ ಓಡಿಹೋಗುವಂತಿಲ್ಲ.

ಆದರೆ ವಿಪರ್ಯಾಸ ನೋಡಿ ಯಾರಾದರೂ ಸಮುದಾಯದ ಹಕ್ಕನ್ನು ಕೇಳುತ್ತಾ ಆಡಳಿತ ವರ್ಗದ ಮುಂದೆ  ಹೋದರೆ ಹೋದವರನ್ನು ಫ್ಯಾಸಿಸ್ಟ್ ಗಳು, RSS ನ ಬೆಂಬಲಿಗರೆಂದು ಚಿತ್ರೀಕರಿಸಲಾಗುತ್ತದೆ.
ಟೋಟಲಾಗಿ ಸಮುದಾಯದ ಜನರಲ್ಲಿ ತಪ್ಪುಭಾವನೆ ಮೂಡಿಸಲಾಗುತ್ತದೆ.
ಅಂದರೆ ಇವರ ಲೆಕ್ಕದಲ್ಲಿ ಈ ಐದು ವರ್ಷಗಳ ಕಾಲ ನಾವು ದೂರವೇ ನಿಂತಿರಬೇಕು.ನಮ್ಮ ಹಕ್ಕನ್ನು ಪಡಯಬಾರದೆಂದಾಗಿದೆ.
ನಿಜವಾಗಿಯೂ ಇದು ಸಮುದಾಯವನ್ನು ನಾಶದ ಅಂಚಿಗೆ ತಳ್ಳಲು ಮಾತ್ರ ಸಹಾಯಕವಾಗುತ್ತದೆಯೆ ವಿನಹ ಸಮುದಾಯ ಸಬಲೀಕರಣ ಸಾಧ್ಯವಿಲ್ಲ.

ದೆಹಲಿಯಲ್ಲಿ ಸೂಫಿಗಳ ಕಾನ್ಫರೆನ್ಸೊಂದು ನಡೆಯಿತು. ಅದರ ಉದ್ಘಾಟನೆಗೆ ದೇಶದ ಪ್ರಧಾನಿಯನ್ನೇ ಕರೆತಂದು ಮುಸ್ಲಿಮರ ಮೇಲಾಗುವ ದಬ್ಬಾಳಿಕೆಯ ಕುರಿತು ಆತಂಕ ವ್ಯಕ್ತಪಡಿಸಲಾಯಿತು.
ಹುಚ್ಚು ಹಿಡಿದ ಬೀದಿ ನಾಯಿಗಳನ್ನು ಅಟ್ಟಾಡಿಸಿ ಕೊಲ್ಲುವಂತೆ ಕೊಲ್ಲುತ್ತಿದ್ದ ದುಷ್ಟ ಸಂಘಕ್ಕೆ ಪ್ರಧಾನಿಯ ಮೂಲಕವೇ ಇಸ್ಲಾಂ ಶಾಂತಿ ಸಮಾಧಾನ ಮತ್ತು ಸೌಹಾರ್ದತೆಯ ಧರ್ಮವೆಂಬ ಪಾಠ ಹೇಳಿಕೊಡಲಾಯಿತು.
ಪ್ರಧಾನಿಯ ಆ ಮಾತು ಮುಸ್ಲಿಮರ ನಿರ್ಮೂಲನಕ್ಕೆ ಆಹ್ವಾನ ಕೊಟ್ಟ MPಯ ಕಪಾಳಕ್ಕೆ ಬಾರಿಸಿದ ಏಟಾಗಿತ್ತು!
ಅಖ್ಲಾಕ್ ಮತ್ತು ಅವನ ತಂದೆಯನ್ನು ಬಡಿದು ಕೊಂದ ದುಷ್ಟರಿಗೆ ಕೊಟ್ಟ ಛಾಟಿಯೇಟಾಗಿತ್ತು!
ಪಾಕಿಸ್ತಾನಕ್ಕೆ ಹೋಗುವಂತೆ ಕರೆಕೊಟ್ಟ ಸ್ವಾಮಿಗೆ ನೀಡಿದ ಕಪಾಳಮೋಕ್ಷವಾಗಿತ್ತು!

ಇಷ್ಟೆಲ್ಲಾ ರಾದ್ದಾಂತಗಳು ದೇಶದಲ್ಲಿ ನಡೆಯುತ್ತಿದ್ದರೂ ಅದ್ಯಾವುದರ ಬಗ್ಗೆ ತುಟಿಕ್ ಪಿಟಿಕ್ ಎನ್ನದೆ ಬಾಯಿ ಮುಚ್ಚಿ ಕುಳಿತಿದ್ದ ಪ್ರಧಾನಮಂತ್ರಿಯ ಬಾಯಿ ತೆರೆಸಿ 'ಮುತ್ತಿನ ಮಾತುಗಳ'ನ್ನು ಹೊರತರಲು ಸಾಧ್ಯವಾದದ್ದು ಸೂಫಿಗಳ ಪ್ರಭಾವವೆಂದು ಹೇಳದೆ ನಿರ್ವಾಹವಿಲ್ಲ.
ಸೂಫಿಗಳ ಆತಂಕ ಅದು ಕೇವಲ ಪ್ರಕಟನೆ ಪತ್ರಿಕೆಗೆ ಮಾತ್ರ ಸೀಮಿತವಾಗಿರದೆ ಪ್ರಧಾನಿಯ ಮೇಲೆ ಹೈ ಪ್ರೆಶರ್ ಹಾಕಿತ್ತು ಎಂದು ಮನಗಾಣಬಹುದು.
ಸಮುದಾಯದ ಕುರಿತು ಸರಕಾರದ ಕಣ್ಣು ತೆರೆಸುವಲ್ಲಿ ಸೂಫಿಗಳಿಗೆ ಇಷ್ಟಾದರೂ ಮಾಡಲಿಕ್ಕೆ ಸಾದ್ಯವಾಯಿತೆಂಬು ಪ್ರಚಲಿತ ಸನ್ನೀವೇಶದ ಪ್ಲಸ್ ಪೋಯಿಂಟ್.!
ಅದಕ್ಕಾಗಿ ಸೂಫಿಗಳಿಗೆ ನನ್ನದೊಂದು ಬಿಗ್ ಸೆಲ್ಯೂಟ್ ಇದ್ದೇ ಇದೆ.

ಎರಡನೆಯದಾಗಿ ದೆಹಲಿಯಲ್ಲಿ ನಡೆದ ಸೂಫೀ ಸಮ್ಮೇಳನದಲ್ಲಿ ಕೇರಳದಿಂದ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಭಾಗವಹಿಸಿದ್ದರಿಂದಲೇ ಸರಿ ಸುಮಾರು ಎಲ್ಲಾ ಸಂಘಟನೆಯವರು ಶೋಷಿಯಲ್ ಮೀಡಿಯಾ ಮತ್ತು ತಮ್ಮ ಅಧಿಕೃತ ಪತ್ರಿಕೆಗಳಲ್ಲಿ ನಾನಾ ತರದ ವಿರೋಧ ಮತ್ತು ಆರೋಪ ವ್ಯಕ್ತಪಡಿಸಿದ್ದನ್ನು ನಾನು ನೋಡಿದೆ.

ನನ್ನ ಅಭಿಪ್ರಾಯದಂತೆ ಅವರ ಈ ವಿಮರ್ಶನೆಗಳಿಗೆ ಯಾರೂ ತಲೆಕೆಡಿಸಿ ಕೊಳ್ಳುವ ಅಗತ್ಯ ಇಲ್ಲ.
ಅವರೊಂದಿಗೆ ನಾವು ಅನುಕಂಪ ತೋರಿಸಬೇಕೇ ವಿನಹ ವಿರೋಧ ವ್ಯಕ್ತಪಡಿಸಬಾರದು.
ಕಾರಣ ಪ್ರತಿಯೊಂದು ಸಂಘಟನೆಯವರಿಗೂ ಅವರವರ ನಾಯಕರು ಪ್ರಭುದ್ದರಾಗಿರಬೇಕು
ಸಮುದಾಯ ಪರವಾಗಿ ಪಕ್ವವಾದ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯವಿರುವವರಾಗಿಬೇಕು, ಅಂತರಾಷ್ಟ್ರೀಯ ಮಟ್ಟದಲ್ಲಿ ಅಲ್ಲದಿದ್ದರೂ ದೇಶೀಯ ಮಟ್ಟದಲ್ಲಾದರೂ ಮಿಂಚುವವರಾಗಿಬೇಕೆಂದು ಆಶೆ ಇರುತ್ತದೆ.
ಅವರ ಆಸೆಗನುಸಾರವಾಗಿ ನಾಯಕರು ಮಿಂಚದೆ ಇರುವಾಗ ಮನಸ್ಸಲ್ಲಿ ತಳಮಳ ಆರಂಭವಾಗುತ್ತದೆ.ಆ ತಳಮಳ ಅಸೂಯೆಯಾಗಿ ಮಾರ್ಪಡುತ್ತದೆ. ಅಸೂಯೆ ಕೊನೆಗೆ ವಿಧ್ವೇಷವಾಗಿ ಬದಲಾಗುತ್ತದೆ. ವಿಧ್ವೇಷ ಕೊನೆಗೆ ಶೋಷಿಯಲ್ ಮೀಡಿಯಗಳಲ್ಲಿ ಕಮಂಟ್ಸ್ ಗಳಾಗಿ, ಎಡಿಟಿಂಗ್ ಪೋಸ್ಟ್ ಗಳಾಗಿ,ಪತ್ರಿಕೆಯಲ್ಲಿ ಅಂಕಣವಾಗಿ ಮೂಡಿಬರುತ್ತದೆ.

ಅಲ್ಲದಿದ್ದರೂ ಜಮಾತೇ ಇಸ್ಲಾಮೀ ಹಿಂದ್(ಇಂಡಿಯಾ) ಎಂದು ಹೆಸರು ಹಾಕಿ ಕೂಡಾ ದೇಶೀಯ ಮಟ್ಟದಲ್ಲಿ ಮಿಂಚಲಾಗದೆ ಚಡಪಡಿಸುತ್ತಿರುವಾಗ ಕಾಂತಪುರಂ ಅಬೂಬಕರ್ ಮುಸ್ಲಿಯಾರ್
'ಶೈಖ್ ಸಾಬ್' ಎಂಬ ನಾಮದಲ್ಲಿ ದೇಶದ ಉದ್ದಗಲಕ್ಕೂ ಮಿಂಚುತ್ತಿರುವು ಹೇಗೆ ತಾನೇ ಸಹಿಸಲು ಸಾಧ್ಯ?
ಅದಕ್ಕಾಗಿಯೇ ಅವರ 'ಮಾಧ್ಯಮ' ಎಂಬ ಮಲಯಾಳ ಪತ್ರಿಕೆಯಲ್ಲಿ ಸೂಫಿಸಂ ಏನೆಂದು ಆಧ್ಯಯನ ಮಾಡುತ್ತಿರುವ ಹಿಂದು ಮುಸ್ಲಿಂ ಜಂಟಿ ಮಹಿಳೆಯರ ಪತ್ರಿಕಾ ಗೋಷ್ಠಿಯನ್ನು ಅವರ ಹೇಳಿಕೆ ಎಂಬಂತೆ ತಿರುಚಿ ವಾರ್ತೆ ಕೊಟ್ಟು ಸಮಾಧಾನ ಪಟ್ಟದ್ದು ನಾವು ನೋಡಿದ್ದೇವೆ ತಾನೇ?
ಅದೆಲ್ಲವೂ ಅವರ ಅಸಹಿಷ್ಣತೆಯ ಕೆಲವೊಂದು ಸ್ಯಾಂಪಲ್ ಮಾತ್ರ.

'ಸೂಫಿಸಂ' ಎಂಬ ಹೆಸರಲ್ಲಿ ಕೆಲವೊಂದು ಕಲೆಬೆರಕೆ ಇದ್ದೇ ಇದೆ. ಅದಕ್ಕಾಗಿಯೇ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ತನ್ನ ಹೃಸ್ವ ಹಿಂದಿ ಪ್ರಭಾಷಣದಲ್ಲಿ 'ಸೂಫಿಸಂ' ನಲ್ಲಿ ಶರೀಅತ್ ಗೆ ವಿರುದ್ಧವಾದ ಅಂಶ ಇರಬಾರದೆಂಬ ವಿಷಯಕ್ಕೆ ಒತ್ತು ನೀಡುತ್ತಾ, ಫೋಟೋ ದ ವಿಚಾರವಾಗಿರುವ ಶಾಖಾ ತರ್ಕದ ವಿಷಯಗಳು ಇದ್ದರೂ ಅದ್ಯಾವುದೂ ಸೂಫೀಗಳ ಒಗ್ಗಟ್ಟಿಗೆ ಮಾರಕವಾಗಬಾರದೆಂದು ಎಲ್ಲಾ ಸೂಫಿಗಳಿಗೂ ತಾಕೀತು ನೀಡುತ್ತಾ ತನ್ನ ಪ್ರಭಾಷಣ ಕೊನೆಗೊಳಿಸಿದರು.
ಮೊದಲಿನ ಹಂತವೆಂಬಂತೆ ಸೂಪಿಸಂ ನಲ್ಲಿರುವ ಕಲೆಬೆರಕೆ ಮತ್ತು ಅನೈಕತೆಯನ್ನು ಹೋಗಲಾಡಿಸುವುದರ ಕುರಿತಾದ  ಅವರ ಪಕ್ವತೆಯ ನಡೆ.

ಶ್ರೀ ನರೇಂದ್ರ ಮೋದಿಯ ಸರಕಾರದಲ್ಲಿ ಅಲ್ಪಸಂಖ್ಯಾತರು ಮತ್ತು ವಿಶೇಷವಾಗಿ ಮುಸ್ಲಿಮರು ಅನುಭವಿಸುತ್ತಿರುವ ಸಂಕಷ್ಟಗಳನ್ನು ನೋಡುವಾಗ ಸಮುದಾಯವನ್ನು ಪ್ರಿತೀಸುವ ಪ್ರತಿಯೊಬ್ಬರ ಮನಸ್ಸೂ ನೋಯುತ್ತದೆ.
ಅದರಲ್ಲಿ ಸುನ್ನೀ,ಸಳಪಿ,ಜಮಾತ್ ಎಂಬ ವ್ಯತ್ಯಾಸ ಇಲ್ಲ.ಎಲ್ಲರ ಮನಸ್ಸಿಗೂ ನೋವಿದೆ.
ಮುಸ್ಲಿಮರನ್ನು ಬೇಟೆಯಾಡುವ ಫ್ಯಾಸಿಸ್ಟ್ ಗಳೊಂದಿಗೆ ಸಮುದಾಯದ ಎಲ್ಲಾ ವರ್ಗದ ಜನರಿಗೂ ರೋಷ ಇದ್ದೇ ಇದೆ. ಮುಸ್ಲಿಂ ವಿರುದ್ಧ ಅಕ್ರಮಣಗಳೊಂದಿಗೆ ಸಂಘಪರಿವಾರ ಸಮುದಾಯವನ್ನು ಬೇಟೆಯಾಡುತ್ತಿರುವಾಗ ಅದರ ವಿರುದ್ಧ ಸೆಟೆದೆದ್ದು ನಿಂತು ನಮ್ಮ ನಾಯಕರು ಧ್ವನಿಯೆತ್ತಬೇಕೆಂದು ನಿರೀಕ್ಷಿಸುವುದ ತಪ್ಪಾ?
ಫ್ಯಾಸಿಸ್ಟ್ ಸಂತತಿ ತೋಗಾಡಿಯ ಪಾಕಿಸ್ತಾನಕ್ಕೆ ಹೋಗುವಂತೆ ಬೊಗಳುವಾಗ ಅವನ ವಿರುದ್ಧ ಧ್ವನಿ ಎತ್ತ ಬೇಕೆಂದು ಆಶೆ ಪಡುವುದು ತಪ್ಪಾ?
ಅದನ್ನೇ ತಾನೇ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಮಾಡಿದ್ದು.

ಸೂಫಿ ಸಮ್ಮೇಳನ ಪ್ರಧಾನ ಮಂತ್ರಿಗೆ ಸಮರ್ಪಿಸಿದ ಪ್ರಕಟನೆ ಪತ್ರಿಕೆಯಲ್ಲಿಯೂ
'ಮೋದಿ ಸರಕಾರದ ಮುಸ್ಲಿಂ ವಿರುದ್ದ ನಿಲುವು ಆತಂಕ' ಎಂದು ಧ್ವನಿ ಎತ್ತಿದೆ ತಾನೇ?

ಮೋದಿಯ ಸ್ವಂತ ಊರು ಗುಜರಾತ್ ನಲ್ಲಿ ಬಹಿರಂಗ ಸಭೆಯೊಂದನ್ನು ಏರ್ಪಡಿಸಿ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲು ಆಹ್ವಾನ ವಿತ್ತ ತೋಗಾಡಿಯನ ಮೂಗಿನ ನೇರ,
"ನಾವು ಭಾರತೀಯರು ಭಾರತ ಭಾರತೀಯನದು ಅದು ಹಿಂದು ಮುಸ್ಲಿಂ ಕ್ರಿಶ್ಚನ್ ವಗೈರ ಯಾರದ್ದು ಅಲ್ಲ. ಯಾರೂ ಕೂಡಾ ಪಾಕಿಸ್ತಾನಕ್ಕೆ ಹೋಗುವ ಅಗತ್ಯ ಇಲ್ಲವೆಂದು" ಎದೆ ತಟ್ಟಿ ಹೇಳಿದ್ದು ಕಾಂತಪುರಂ ಮಾತ್ರವಾಗಿದೆ.

ಶ್ರೀ ಮೋದಿಯ ಸರಕಾರ ಬರುವುದಕ್ಕಿಂತ ಮುಂಚೆ ಮತ್ತು ತೀಕ್ಷ್ಣವಾದ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿರುವ ಈ ಕಾಲ ಘಟ್ಟದಲ್ಲೂ ಇಲ್ಲಿ ಹಲವಾರು ಮತ ಸಂಘಟನೆಗಳು ಇದೆ ತಾನೇ?
ಅವರಿಗೂ ನಾಯಕರು ಇದ್ದಾರೆ.ಅವರು ಕೂಡಾ ಜಿಲ್ಲಾ ಸಮ್ಮೇಳನದಿಂದ ಹಿಡಿದು ಸ್ಟೇಟ್ ಸಮ್ಮೇಳನ ನಡೆಸಿದ್ದಾರೆ.
ಅದರಲ್ಲಿ ತೌಹೀದ್ ಸಮ್ಮೇಳನ ಇದೆ.ಮದರಸಗಳ ಸಂಖ್ಯೆ ಹೇಳಿದವು ಇದೆ.
ವೆಲ್'ಫರ್ ಪಾರ್ಟಿಯ ಕುರಿತು ಚರ್ಚೆ ಮಾಡಿದ ಸಮ್ಮೇಳವಿದೆ. ಆದರೆ
ಒಂದೇ ಒಂದು ಸಮ್ಮೇಳನದಲ್ಲಿ ಭಾರತದ ಮುಸ್ಲಿಮರು ಎದುರಿಸುತ್ತಿರುವ ಪ್ರಸ್ತುತ ಸಂಕಷ್ಣಗಳ ಕುರಿತು ಕೇಂದ್ರ ಸರಕಾರಕ್ಕೆ ಮನವಿ ಕೊಟ್ಟದ್ದು ಇದೆಯಾ?
ಪಾಕಿಸ್ತಾನಕ್ಕೆ ಹೋಗಲು ಹೇಳುವ ಫ್ಯಾಶಿಸ್ಟ್ ಗಳ ವಿರುದ್ಧ ಧ್ವನಿ ಎತ್ತಿದ್ದು ಇದೆಯಾ?
ಬೇಸರದ ಸಂಗತಿ ಏನೆಂದರೆ ಕಾಂತಪುರಂ ಉಸ್ತಾದರ ವಿರುದ್ಧ ಪ್ರಕಟನೆ ಪತ್ರಿಕೆ ಹೊರಡಿಸುವಾಗಲೂ ಸಮುದಾಯದ ಪರವಾಗಿ ಒಂದು ಮೆಮೋರಾಂಡ ಮೋದಿ ಸರಕಾರಕ್ಕೆ ನೀಡಲು  ಅದರ ನಾಯಕರಿಗೆ ಸಮಯ ಸಿಕ್ಕಿದೆಯಾ?
ನಮ್ಮ ನಾಯಕರು ಆ ರೀತಿ ದೇಶೀಯ ಮಟ್ಟದಲ್ಲಿ ಬೆಳೆಯಬೇಕೆಂದು ನಾವು ಆಗ್ರಹಿಸಿದರೆ ಅದು ತಪ್ಪಾ?

ಭಾರತದಲ್ಲಿ ಮೊತ್ತ ಮೊದಲ ಬಾರಿ ಅಂದರೆ ಪ್ರಪಥಮ ಸೂಫೀ ಸಮ್ಮೇಳನ ನಡೆದಿದೆ.
ಅದರಲ್ಲಿ ಏನಾದರೂ ಸೂಫೀ ವಿರುದ್ಧ ಸಂಗತಿಗಳು ನುಸುಳಿದ್ದರೆ ,ಸೂಫಿಸಂ ಅಂದರೆ ಏನು? ಸೂಫಿಗಳು ಯಾರು? ಇಸ್ಲಾಮಿನ ತಸವ್ವುಫ್ ಏನು? ಎಂಬುದರ ಕುರಿತು ಕಾಂತಪುರಂ ಅಬೂಬಕರ್ ಮುಸ್ಲಿಯಾರ್ ಪಾಂಡಿತ್ಯಪೂರ್ಣವಾದ ತನ್ನ ಹೊಣೆ ನಿರ್ವಹಿಸಿದ್ದಾರೆ.
ಸೂಫೀ ಸಮ್ಮೇಳನವೆಂದರೆ ಅದರ ಪೋಸ್ಟರ್ ಅಂಟಿಸದವರಿಂದ ಹಿಡಿದು ಮೈಕ್ ಓಪರೇಟರ್ ಸಹಿತ ಭಾಗವಹಿಸಿದ ಎಲ್ಲರೂ ಸೂಫಿಗಳಾಗಬೇಕೆಂದು ವಾದಿಸುವವರೊಂದಿಗೆ ಮಾತನಾಡಿ ಫಲವಿಲ್ಲ.

ಮೋದಿ ಭಾಗವಹಿಸಿದ್ದೋ,ನೆರೆದವರಲ್ಲಿ ಯಾರೆಲ್ಲಾ ಇದ್ದಾರೆ,ಅದ್ಯಾವುದೂ ಪ್ರಧಾನವಲ್ಲ, ಬದಲಾಗಿ ಆ ಸಮ್ಮೇಳನ ಎತ್ತಿ ಹಿಡಿದ ಆಶಯ ಮತ್ತು ಭಾರತ ಮುಸ್ಲಿಮರು ಎದುರಿಸುತ್ತಿರು ಸಂಕಷ್ಟಗಳ ಕುರಿತು ಆತಂಕ (ಹಿಂದು ಭಯೋತ್ಪಾದನೆ,ಮಕ್ಕಾ ಮಸೀದಿ,ಮಾಲೆಂಗಾವ್,ಅಜ್ಮೀರ್ ಸ್ಫೋಟ,ಜೈಲಲ್ಲಿ ಕೊಳೆಯುತ್ತಿರುವ ಅಮಾಕರ ಬಿಡುಗಡೆ,ಬಾಬರ್ ಮಸೀದಿ,ಮುಝಪ್ಪರ್ ನಗರ ಇತ್ಯಾದಿ  ಇತ್ಯಾದಿ ....) ಇದೆಲ್ಲವೂ ಪ್ರಧಾನ ವಿಷಯವಾಗಿದೆ.
ಅದೇ ರೀತಿ ವಿಶ್ವವ್ಯಾಪಿಯಾಗಿ ಭಯೋತ್ಪಾದನೆಗೆ ನಿಮಿತ್ತವಾದ ಸ್ಮಶಾನ ಕ್ರಾಂತಿಯ ಜನರ ವಿರುದ್ದವೂ ಸೂಫಿ ಸಮ್ಮೇಳನ ಆತಂಕ ವ್ಯಕ್ತಪಡಿಸಿದೆ.

ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಭಾಗವಿಹಿಸಿದರೆಂಬ ಒಂದೇ ಕಾರಣಕ್ಕಾಗಿ ಸೂಫೀ ಸಮ್ಮೇಳನವನ್ನು ವಿರೋಧಿಸುವವರು ಮತ್ತು ಅದನ್ನು bjp&rss ಪ್ತಾಯೋಜಿತವೆಂದು ದುರ್ವ್ಯಾಖಿನಿಸಿ ವಿಘ್ನ ಸಂತೋಷ ಪಡುವಾಗ ಅದರಲ್ಲಿ ಕಾಂತಪುರಂ ಎಂಬ ಒಬ್ಬ ವ್ಯಕ್ತಿಗೆ ಯಾವುದೇ ನಷ್ಟ ಇಲ್ಲ.
ನಷ್ಟವೆಲ್ಲಾ ಸಮುದಾಯಕ್ಕಾಗಿದೆ.ಏನಂತೀರಿ?

✒ ಅಬೂಶಝ

No comments:

Post a Comment