*ಅವರು ಗುಳೆ ಹೊರಟಿದ್ದಾರೆ ನನ್ನ ಈಮಾನ್ ಗಟ್ಟಿಯಾಗುತ್ತಿದೆ*
ನಿಜವಾಗಿಯೂ ನನ್ನ ಈಮಾನ್ ಗಟ್ಟಿಯಾಗುತ್ತಿದೆ.
ಅಚ್ಚರಿಯ ವಿಷಯವೇನೆಂದರೆ, ನನ್ನಲ್ಲಿ ಈ ಒಳ್ಳೆಯ ಬೆಳವಣಿಗೆ ಉಂಟಾಗುತ್ತಿರುವುದು, ನಾನು ಸತ್ಯವೆಂದು ನಂಬಿ ತಬ್ಬಿಕೊಂಡ ಸತ್ಯ ಪ್ರಸ್ಥಾನದಿಂದ ಕೆಲವು ಬಿರುದುಧಾರಿಗಳು ಹೊರಟು ಹೋಗುತ್ತಿರುವಾಗ!!
ಹೌದು...
ತಮ್ಮ ಹೆಸರಿನ ಜೊತೆ ಸಖಾಫಿ/ಅಹ್ಸನಿ/ಸ'ಅದಿ ಪಟ್ಟ ಕಟ್ಟಿಕೊಂಡವ್ರು ಪ್ರಸ್ಥಾನ ಬಿಟ್ಟು ದರದರನೆ ಹೊರಟು ಹೋಗುವುದು ಕಾಣುವಾಗ, ನನ್ನ ಈಮಾನ್ ಗಟ್ಟಿಯಾಗುತ್ತಿದೆ.
ಉಲಮಾಗಳೆನಿಸಿಕೊಂಡವ್ರೆ ಎಪಿ ಪ್ರಸ್ಥಾನಕ್ಕೆ ಗುಡ್ ಬೈ ಹೇಳಿ ಹೊರಟು ಹೋಗುವಾಗ ನನ್ನ ಈಮಾನ್ ಇನ್ನಷ್ಟು ಸ್ಟ್ರಾಂಗ್ ಆಗುತ್ತಿದೆಯೆಂದು ಹೇಳುವಾಗ ನಿಮ್ಗೂ ಅಚ್ಚರಿಯಾಗಿರಬೇಕಲ್ಲ?
ಹೌದು,
ಅದರ ರೀಝನ್ ಹೇಳ್ತೀನಿ, ಕೇಳಿ...
ಸದ್ಯ ನೌಶಾದ್ ಅಹ್ಸನಿ ಎಂಬ ವ್ಯಕ್ತಿ ಎಪಿ ಪ್ರಸ್ಥಾನ ಬಿಡುವುದಕ್ಕಿಂತ ಮುಂಚೆಯೇ ಕೆಲವೊಂದು ಸಖಾಫಿ ಗಳು ಮತ್ತು ಸ'ಅದಿಗಳನ್ನು ಕೆಲವರು ನಮ್ಮೂರಿಗೆ ಆಮದು ಮಾಡಿ ಅವರಿಂದ 'ಪುಣ್ಯ ಸಮಸ್ತಕ್ಕೆ' ಎಂಬ ಲೇಬಲಿನಲ್ಲಿ ಭಾಷಣ ಬಿಗಿಸುತ್ತಿದ್ದರು.
ನಮಗ್ಯಾರಿಗೂ ಆ ಸಖಾಫಿಗಳ ಪರಿಚಯವೇ ಇರಲಿಲ್ಲ. ಪುಣ್ಯ ಸಮಸ್ತವೇ ಅವ್ರನ್ನು ನಮಗೆ ಪರಿಚಯಿಸಿ ಕೊಟ್ಟದ್ದು!
"ಎಪಿ ಉಸ್ತಾದರು ಶರಾಬು ಕುಡಿಯುವವರೆಂದೂ ನಾನೇ ಹಲವು ಬಾರಿ ಸುರಿದು ಕೊಟ್ಟಿರುವೆನೆಂದೂ ಆರೋಪಿಸುವಾಗಲೂ
ಕುಡಿಯುವವರಷ್ಟೇ ಶಿಕ್ಷೆ ಸುರಿದು ಕೊಡುವವನಿಗೂ ಇದೆಯೆಂಬ ಪರಿಜ್ಞಾನವೂ ಇಲ್ಲದೆ ಆ ಸಖಾಫಿ ಬಡಾ ಬಡಾಯಿ ಸಭಿಕರಿಗೆ ಬಡಿಸುತ್ತಿದ್ದರು.
ಸದರಿ ಸಖಾಫಿಯ ಕುರಿತು ವಿಚಾರಿಸಿದಾಗ ಅವ್ರು ಸಖಾಫಿ ಹೌದೆಂದೂ, ಕಳ್ಳ ತರೀಖತ್ ನಂಟಿನೊಂದಿಗೆ ಸಂಘಟನೆಯ ಹಣವನ್ನು ಗುಳುಂ ಮಾಡಿದ್ದಕ್ಕೆ ಅವ್ರನ್ನು ಹೊರದಬ್ಬಿದ್ದರಿಂದ ಪುಣ್ಯ ಸಮಸ್ತದಲ್ಲಿ ಅಭಯ ಹುಡುಕಿ ನಮ್ಮೊಂದಿಗೆ ಹಗೆ ತೀರಿಸುತ್ತಿದ್ದಾರೆಂದೂ ಉತ್ತರ ಬಂತು.
ನನ್ನ ನೇತೃತ್ವ ಸುಳ್ಳು ಹೇಳಲ್ಲ ಎಂಬ ವಿಶ್ವಾಸದಿಂದ ಅದನ್ನು ನಾನು ನಂಬಿದ್ದೆ. ನನ್ನ ನಂಬಿಕೆ ಸುಳ್ಳಾಗಲಿಲ್ಲ.
ಅಂತಹ ಕಪಟಮುಖದ ಒಬ್ಬರು ಎಪಿ ಪ್ರಸ್ಥಾನ ಬಿಡುವಾಗ ನನ್ನ ಈಮಾನ್ ಗಟ್ಟಿಯಾಗದೆ ಇರುತ್ತದಾ?
ನಾನು ಅತಿಯಾಗಿ ಪ್ರೀತಿಸಿದ್ದ ನೌಶಾದ್ ಅಹ್ಸನಿ ಕಳ್ಳ ತರೀಖತ್ ನ ಸುಳಿಯಲ್ಲಿದ್ದಾರೆಂದು ತಿಳಿದು ಅವರನ್ನು ಸಂಘಟನೆಯಿಂದ ಹೊರದಬ್ಬಿದಾಗ ಮರಳಿ ಸಂಘಟನೆಗೆ ಎಂಟ್ರಿ ಕೊಡಲಿಕ್ಕಾಗಿ ನೌಶಾದ್ ಮಾಡಿದ ಕಸರತ್ತು ಅಷ್ಟಿಷ್ಟಲ್ಲ. ತಾನೇ ಮಾಡಿದ ಭಾಷಣಕ್ಕೆ ತಾನೇ ಉತ್ತರ ಹೇಳಿ ಖಂಡಿಸಿದ್ದು ಸಹಿತ ತನ್ನ ಬಳಿ ಇರುವ ಎಲ್ಲಾ ಕಸರತ್ತುಗಳನ್ನು ಹೊರತೆಗೆದು ಕೂಡಾ ಫಲ ಸಿಗಲ್ಲ ಎಂದು ಗ್ಯಾರಂಟಿಯಾದಾಗ ತನ್ನ ಮೈಕ್, ಟೇಬಲ್, ಬಾಕ್ಸ್ ಸಹಿತ ಎಲ್ಲವನ್ನು ತನಗೆ ಅನ್ನ ನೀಡಿ ವಿದ್ಯೆ ಕಲಿಸಿದ ಎಪಿ ವಿಭಾಗದತ್ತ ತಿರುಗಿಸಿದ.
ಈ ಮಧ್ಯೆ ಪುಣ್ಯ ಸಮಸ್ತಕ್ಕೆಂಬ ನಾಟಕವೂ ನಡೆಯಿತು.
ಏನೋ ಅದು ಹಿಟ್ ಆಗದೆ ಫ್ಲಾಪ್ ಆಯಿತು.
ಅಂತಹ ಕಪಟತೆಯ ಒಬ್ಬರು ಎಪಿ ಪ್ರಸ್ಥಾನ ಬಿಡುವಾಗ ನಮ್ಮ ಈಮಾನ್ ಗಟ್ಟಿಯಾಗದೆ ಇರುತ್ತದಾ?
ಅವ್ರು ಎಪಿ ವಿಭಾಗದ ವಿರುದ್ಧ ಮಾತನಾಡುವಾಗ ನನ್ನ ಈಮಾನ್ ದುಪ್ಪಟ್ಟಾಗದೆ ಇರುತ್ತದಾ?
ಇದೀಗ ಉಳ್ಳಾಲ ಕಡೆಯಿಂದ ಕೆಲವರು ಪುಣ್ಯ ಸಮಸ್ತಕ್ಕೆಂದು ಹೇಳಿ ಹೊರಟಿದ್ದಾರೆ. ಅವರು ಯಾಕೆ ಅಲ್ಲಿಗೆ ಹೋಗುತ್ತಿದ್ದಾರೆಂಬುದು ನಮಗಿಂತಲೂ ಪುಣ್ಯ ಸಮಸ್ತದ ನಾಯಕರಿಗೆ ಚೆನ್ನಾಗಿ ಗೊತ್ತು.
ಅವರು ಅಪ್ಪಿಕೊಂಡ ಒಬ್ಬ ಶೈಖರನ್ನು ನಮ್ಮ ವಿದ್ವಾಂಸ ನಾಯಕರಾದ ಇ. ಸುಲೈಮಾನ್ ಉಸ್ತಾದ್, ಎಪಿ ಉಸ್ತಾದ್, ಪೊನ್ಮಳ ಉಸ್ತಾದ್, ಅಲಿಕುಂಞ್ಞಿ ಉಸ್ತಾದ್ ಸಹಿತ ಯಾರೂ ಕೂಡಾ ಸ್ವೀಕಾರಾರ್ಹರು ಎಂದು ಹೇಳಿಲ್ಲ. ನಮ್ಮ ಉಲಮಾ ನಾಯಕರೊಂದಿಗೆ ಅವರಿಗೆ ಸಂಬಂಧವೋ ನಂಟೋ ಇರಲಿಲ್ಲ. ಈ ಮಧ್ಯೆ ಕೆಲವೊಂದು ಅಪಸ್ವರಗಳು ಬಂದವು.
ಆವಾಗಲೇ ತೀರ್ಮಾನವೊಂದು ಬರುವ ತನಕ ದೂರ ನಿಲ್ಲಬೇಕಾದುದು ಎಸ್ಸೆಸ್ಸೆಫ್ ನ ಸಣ್ಣ ಕಾರ್ಯಕರ್ತರ ಸಹಿತ ಎಲ್ಲರ
ಬಾಧ್ಯತೆಯಾಗಿತ್ತು.
ತರ್ಕೀಬ್ ನ ಗೌಜಿ ಗದ್ದಲ ನಡೆಯಿತು. ಸಾಮಾಜಿಕ ತಾಣಗಳಲ್ಲಿ ಪರಸ್ಪರ ಕೆಸರೆರಚಾಟ ನಡೆಯಿತು. ಅಂತೂ ಇಂತೂ ಪರಿಸ್ಥಿತಿ ಬಿಗಡಾಯಿಸಿತು.
ಸಂಘಟನೆಯ ಪ್ರಮುಖ ಸ್ಥಾನದಿಂದ ಅವರು ಔಟಾದರು. ಅವರ ಕಡೆ ಪ್ರತ್ಯೇಕ ನೋಟ ಬೀರುವ ಪರಿಸ್ಥಿತಿ ಸಂಜಾತವಾಯಿತು. ಕೊನೆಗೆ ಅವರು ಮೂಲೆಗುಂಪಾಗುವ ಎಲ್ಲಾ ಸಾಧ್ಯತೆಗಳು ಗೋಚರಿಸಿತು. ಒಂಟಿತನ ಅವರನ್ನು ಬಹಳವಾಗಿ ಕಾಡಲು ಆರಂಭಿಸಿತು. ತಮಗೆ ಇನ್ನು ಎಪಿ ಪ್ರಸ್ಥಾನದಲ್ಲಿ ಉಳಿಗಾಲವಿಲ್ಲವೆಂಬ ಸ್ಪಷ್ಟವಾದ ಸೂಚನೆ ಸಿಕ್ಕಿದಾಗ ಅಭಯದ ದಾರಿಗಾಗಿ ಹುಡುಕಾಟ ಶುರುವಿಟ್ಟರು. ಹಾಗೆ ಸಿಕ್ಕಿದ ಬೇರಾಗಿದೆ ಪುಣ್ಯ ಸಮಸ್ತ!
ಹಾಗೆ ಮಾರ್ಚ್ 15 ರಂದು ಎಸ್ಕೆ ಸಮಸ್ತಕ್ಕೆ ಎಂಟ್ರಿ ಕೊಟ್ಟರು!
ಅಂದು ಅತ್ಯಂತ ಸಂತೋಷಪಟ್ಟದ್ದು ಎಪಿ ವಿಭಾಗವಾಗಿತ್ತು. ಕಾರಣ ಅವರು ಬೂಟಿನೊಳಗಿರುವ ಮುಳ್ಳಾಗಿದ್ದರು. ಇಲ್ಲಿಯೇ ನನ್ನ ಈಮಾನ್ ಮತ್ತಷ್ಟು ಗಟ್ಟಿಯಾಗುವುದು.
ಕಾರಣ, ಅವರು ಪುಣ್ಯ ಸಮಸ್ತ ಪುಣ್ಯವೆಂಬ ನಂಬಿಕೆಯಲ್ಲಿ ಹೋದದ್ದಲ್ಲ. ಎಪಿ ಸಮಸ್ತ ಸುಳ್ಳು ಎಂಬ ವಿಶ್ವಾಸವೂ ಅವರಿಗಿರಲಿಲ್ಲ.ಕೆಲವೊಂದು ವ್ಯಕ್ತಿವೈರಾಗ್ಯ ಹಾಗೂ ದ್ವೇಷ ಇತ್ತು.
ತಮಗೆ ಒಂಟಿತನದ ಅನುಭವವಾಗಿ, ಎಲ್ಲರಿಂದಲೂ ತಿರಸ್ಕರಿಸಲ್ಪಟ್ಟು ಕೊನೆಗೆ ಅಡ್ರೆಸ್ ಇಲ್ಲದೆ ಅಂಡಲೆಯಬೇಕಾಗಿ ಬರಬಹುದೆಂಬ ಭಯದಿಂದ ಅವರು ಇಕೆ ಸಮಸ್ತಕ್ಕೆ ಗುಳೆ ಹೊರಟಿದ್ದಾರೆ ಎಂಬುದು ಸಾಮಾನ್ಯ ಕಾರ್ಯಕರ್ತನಿಗೂ ತಿಳಿದ ವಿಚಾರ.
ಅವರ ಹಿಜ್'ರಾ ದುನಿಯಾಕ್ಕಾಗಿ ಎಂಬುದು ಸ್ಪಷ್ಟ. ಅಂತಹ ನಿಯ್ಯತಿನೊಂದಿಗೆ ಹೊರಟು ಹೋಗುವವರು ಅದೆಷ್ಟೇ ದೊಡ್ಡ ಆಲಿಮ್ ಆದರೂ ಬಿರುದುಧಾರಿಯಾದರೂ ಫಲ ಶೂನ್ಯ ತಾನೇ?
ಹೋಗುವ ಹಿಜಿರಾ ಮದೀನಾಕ್ಕಾದರೂ ನಿಯ್ಯತ್ ಹೆಣ್ಣಾಗಿದ್ದರೆ ಅವರ ನಿಯ್ಯತಿನ ದೃಷ್ಟಿಕೋನವಾಗಿರುತ್ತದೆ ಮಾಪನ.
ಅಂತಹ ನಿಯ್ಯತ್ ಸರಿ ಇಲ್ಲದವರು ಎಪಿ ಪ್ರಸ್ಥಾನ ಬಿಡುವಾಗ ನನ್ನ ಈಮಾನ್ ಗಟ್ಟಿಯಾಗದೆ ಇರುತ್ತಾ?
ಅವರಿಗೆ ವ್ಯಕ್ತಿ ವೈರಾಗ್ಯ ಇದ್ದಿದ್ದರೂ ಒಬ್ಬ ವ್ಯಕ್ತಿಗಾಗಿ ತಾನು ಸತ್ಯವೆಂದು ನಂಬಿದ ಪ್ರಸ್ಥಾನಕ್ಕೆ ಗುಡ್ ಬೈ ಹೇಳುವ ಅಗತ್ಯ ಏನಿತ್ತು?
ಸುನ್ನತ್ ಜಮಾತ್ ಕಾರ್ಯಚರಣೆ ವ್ಯಕ್ತಿಗಾಗಿ ಆದರೆ ಅದರ ಅರ್ಥ ಇಖ್ಲಾಸ್ ಶೂನ್ಯವಾಗಿದೆ ಎಂದಲ್ಲವೆ?
ಯಾರದೋ ಹಗೆ ತೀರಿಸಲು ಹೊರಟಿರುವ ಇವರಿಗೆ ಪುಣ್ಯ ಸಮಸ್ತ ಸ್ವೀಕಾರ ಸಮಾರಂಭ ಏರ್ಪಡಿಸಬಾರದಿತ್ತು.ವಿಶೇಷವಾಗಿ ಸುನ್ನೀ ಐಕ್ಯದ ಕ್ಷೀಣದ್ವನಿ ಕೇಳಿ ಬಂದಿರುವ ಈ ಸಂಧರ್ಭದಲ್ಲಿ.
ಇಲ್ಲಿಯೇ ಎಪಿ ಪ್ರಸ್ಥಾನ ಡಿಫರೆಂಟ್ ಆಗುವುದು. ಕಾರಣ ಅವರಿಗೆ ಸಮಸ್ತ ಅಂದರೆ ಪುಂಡಾಟಿಕೆ ಅಲ್ಲ.
ಹಗೆ ತೀರಿಸುವ ವೇದಿಕೆ ಅಲ್ಲ.
ಪೈಪೋಟಿಯ ಸಮರ ಅಲ್ಲ.
ರಾಜಕೀಯ ಪಾರ್ಟಿಗಳಂತೆ ಪಕ್ಷಾಂತರ ಮಾಡುವವರಿಗೆ ಇಲ್ಲಿ ಬೆಲೆ ಇಲ್ಲ. ಬಂದವರಿಗೆ ಹೂಮಾಲೆ ಹಾಕುವ ಸಂಪ್ರದಾಯವೂ ಇಲ್ಲ.
ದೀನ್ ದೀನಾಗಿ ಇಲ್ಲಿ ಖಾಯಂ ಆಗಿರಬೇಕು.
ಯಾರು ಬಂದರೂ ಹಿಗ್ಗುವಿಕೆ ಇಲ್ಲ. ಹೋದರೆ ಕುಗ್ಗುವುದೂ ಇಲ್ಲ.
ಇರುವವರು ಭಾಗ್ಯವಂತರು ಅಷ್ಟೇ.
ಎಪಿ ವಿಭಾಗದ ಈ ನಿಲುವಿನಿಂದಾಗಿಯೇ ನಕಲಿಗಳಿಗೆ ಮಣೆ ಸಿಗುವುದೇ ಇಲ್ಲ. ಅದೆಷ್ಟೇ ದೊಡ್ಡವರಾದರೂ ಒಂದಲ್ಲ ಒಂದು ದಿನ ನೇಪಥ್ಯಕ್ಕೆ ಸರಿಯುತ್ತಾರೆ.
ಪ್ರತಿಭಾವಂತ ಪಂಡಿತ ಕಕ್ಕಾಡ್ ಫೈಝಿಯಿಂದ ಹಿಡಿದು ಇದೀಗ ಅಂಡಲೆಯುತ್ತಿರುವ ನೌಶಾದ್ ತನಕ ಇನ್ನು ಗುಳೆ ಹೋಗುವವರು ಸಹಿತ ಎಲ್ಲರೂ ಸಮಾನರು.
ಎಪಿ ವಿಭಾಗ ದೀನನ್ನು ದುನ್ಯಾದ ಉಲಮಾಗಳಿಗಾಗಿ ಮಾರುವವರಲ್ಲ ಎಂಬುದು ಪದೇ ಪದೇ ದಿಟವಾಗುತ್ತಾ ಇದೆ.
ಆವಾಗಲೇ ನಮ್ಮ ಈಮಾನ್ ಮತ್ತಷ್ಟು ಗಟ್ಟಿಯಾಗುವುದು.
ಎಪಿ ಉಸ್ತಾದ್ ಸ'ಅದಿಯ್ಯದಲ್ಲಿ ನಡೆಸಿದ ಬುಖಾರಿ ತರಗತಿಯಲ್ಲಿ ಹೇಳಿದ ಹಾಗೆ ಒಬ್ಬ ಮುರ್ತದ್ದ್ ಆದರೆ ಅವನು ಮೊದಲೇ ನೈಜ ಮುಸ್ಲಿಮ್ ಆಗಿರಲಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು. ಅವನು ಮುನಾಫಿಕ್ ಆಗಿದ್ದ.
ಅದರಂತೆಯೇ ನಮ್ಮ ಸಂಸ್ಥೆಯಲ್ಲಿ ಕಲಿತು ನಂತರ ನಮ್ಮನ್ನು ತಿರಸ್ಕರಿಸುವುದಾದರೆ ಅವನಲ್ಲಿ ಮೊದಲೇ ನಿಫಾಕ್(ಕಪಟತನ) ಇತ್ತು ಎಂದು ತಿಳಿಯಬೇಕು.
ಎಪಿ ಉಸ್ತಾದರ ಈ ಮಾತನ್ನು ದುರ್ವ್ಯಾಖ್ಯಾನ ಮಾಡಿ ಕೆಲವರು ಹಾಗಾದರೆ ಕೂಟಂಬಾರ ದಾರಿಮಿ ಮುನಾಫಿಕಾ? ಸಿ. ಫೈಝಿ ಮುನಾಫಿಕಾ? ಅವರೆಲ್ಲರೂ ಶಮ್ಸುಲ್ ಉಲಮಾರ ಶಿಷ್ಯರಲ್ಲವೆ? ಎಂದು ಪೆದ್ದು ಪೆದ್ದಾಗಿ ಪ್ರಶ್ನೆ ಕೇಳುತ್ತಾ ಅಖಾಡಕ್ಕೆ ಇಳಿದಿದ್ದಾರೆ.
ಅವರಲ್ಲಿ ಹೇಳಲಿಕ್ಕಿರುವುದು, ಶಂಸುಲ್ ಉಲಮಾರವರು ತನ್ನ ಕೊನೆಯ ಕಾಲದಲ್ಲಿ ಎಪಿ ವಿಭಾಗದ ಕೈಯಲ್ಲಿ ಸುನ್ನತ್ ಜಮಾಅತ್ ಭದ್ರ ಎಂಬ ದೃಡವಾದ ವಿಶ್ವಾಸ ಹೊಂದಿದವರಾಗಿದ್ದರು.
ಈ ನಿಟ್ಟಿನಲ್ಲಿ ಅವರು ಐಕ್ಯತೆಗೆ ಕರೆ ನೀಡಿದ್ದರು. ಆದ್ದರಿಂದಲೇ ಇ.ಕೆ. ಉಸ್ತಾದ್ ಕೂಡಾ ತನ್ನ ಶಿಷ್ಯಂದಿರ ನಿಲುವಿಗೆ ✔ ಎಂಬ ಮೊಹರು ಒತ್ತಿದ್ದಾರೆಂದಾಯಿತು.ಜೊತೆಗೆ ಎಪಿ ಪ್ರಸ್ಥಾನದಲ್ಲಿರುವ ಫೈಝಿ, ದಾರಿಮಿಗಳು, ಮುನಾಫಿಕುಗಳು ಅಲ್ಲ ಎಂದು ದೃಢವಾಯಿತು.
ಆದರೆ ಇದೀಗ ಉಸ್ತಾದರುಗಳನ್ನು ಧಿಕ್ಕರಿಸಿ ಹೊರಟ ಸಖಾಫಿಗಳ ಕುರಿತು ಎಪಿ ಉಸ್ತಾದ್ ಮುನಾಫಿಕುಗಳು ಎಂದು ಮೊಹರು ಒತ್ತಿದ್ದಾರೆ. ಅದೇ ರೀತಿ ಸುಲೈಮಾನ್ ಉಸ್ತಾದರು ಕಪಟ ಅಹ್ಸನಿಗಳನ್ನು 'ಅಹ್ಸನಿ' ಎಂದು ಕರೆಯಬಾರದೆಂದು ಹೇಳಿ ಅವರನ್ನು ರಿಜೆಕ್ಟ್ ಮಾಡಿದ್ದಾರೆ.
ಆದ್ದರಿಂದಲೇ ಅವರೆಷ್ಟು ದೊಡ್ಡವರಾದರೂ ನಮಗೆ ಅವರು ಕಪಟಿಗಳು ಮಾತ್ರ.
ಇನ್ನು ಎರಡು ಸಮಸ್ತ ಐಕ್ಯವಾಗಿ ಒಂದಾದರೂ ಇವರ ನಿಫಾಕಿನ ಕಲೆಯು ಮಾಯುವಂತಿಲ್ಲ.
ಕಾರಣ ಅವರಿಗೆ ಬಿರುದು ಕೊಟ್ಟ ಉಸ್ತಾದರೇ ಅವರಿಗೆ ನಿಫಾಕ್ ಪಟ್ಟ ಕೂಡಾ ಕೊಟ್ಟದ್ದು ಎಂಬುದನ್ನು ಮರೆಯುವಂತಿಲ್ಲ.
ಅಂತಹವರು ಎಲ್ಲಿಗೆ ಹೊರಟುಹೋದರೂ ನಮಗೇನು?
ಅವರನ್ನು ಹೊತ್ತೊಯ್ದು ಅಂಬಾರಿ ಸವಾರಿ ನಡೆಸುವವರು ಇದನ್ನು ತಿಳಿಯುವುದೊಳಿತು.
ಎಪಿ ಪ್ರಸ್ಥಾನ ಕೇವಲ ಆರು ಮಂದಿಯಿಂದ ಆರಂಭವಾದದ್ದು ಅದೀಗ ಅರುವತ್ತು ಲಕ್ಷದ ಗಡಿದಾಟಿ ಎಂತಹವರನ್ನು ಅದ್ಬುತಗೊಳಿಸುವಂತೆ ಹೆಮ್ಮರವಾಗಿ ಬೆಳೆದು ನಿಂತಿದೆ.
ಇದೀಗ ಐಕ್ಯದ ಧ್ವನಿ ರಿಂಗಣಿಸುತ್ತಿದೆ.ಕಾಲದ ಬೇಡಿಕೆಯಾಗಿದೆ.ವ್ಯಕ್ತಿ ವೈರಾಗ್ಯದಿಂದ ಸ್ವಾರ್ಥಿಗಳಾಗಿ ಬರುತ್ತಿರುವವರಿಗೆಲ್ಲಾ ಸನ್ಮಾನ ಮಾಡಿ ಐಕ್ಯತೆಗೆ ನಾವು ಮುಳ್ಳಾಗದಿರೋಣ.
*🖋ಅಬೂಶಝ*
No comments:
Post a Comment