*ತ್ವಾಖಾ ಅಹ್ಮದ್ ಮುಸ್ಲಿಯಾರ್ ಗೋಲ್ಡನ್ ಛಾನ್ಸ್ ಒಂದನ್ನು ಮಿಸ್ಸ್ ಮಾಡಿದರೇ?*
*--------------------------*
ಪೋಲಿಸ್ ಇಲಾಖೆಯಾಗಲೀ, ಮಂತ್ರಿ ಮಾಗದರಾಲೀ,ಬಿಜೆಪಿ,VHP, RSS ನಂತಹ ಇಸ್ಲಾಮಿನ ನಾಶಕ್ಕಾಗಿ ಹಾತೊರೆಯುವ ಸಂಘಟನೆಯಾಗಾಲೀ ಅವರಿಗೆ ತಂತ್ರಪರವಾಗಿ ಇಸ್ಲಾಮಿನ ಕುರಿತು ತಿಳುವಳಿಕೆ ನೀಡಬೇಕೆಂದಾಗಿದೆ ಇಸ್ಲಾಮಿನ ಆದೇಶ.ಕಾರಣ ಆ ಸತ್ಯ ಎಲ್ಲರಿಗೂ,ಎಲ್ಲಾ ಕಡೆಯೂ ತಲುಪಬೇಕು.
ವಿಶೇಷವಾಗಿ ಇಸ್ಲಾಮಿನ ಕುರಿತು ತಪ್ಪುಧಾರಣೆ ಹೊಂದಿರುವ ಜನರಿಗೆ ಇಸ್ಲಾಮಿನ ಸಂದೇಶ ಮುಟ್ಟಿಸುವ ಕಾರ್ಯ ನಡೆಯಬೇಕು.
ಕುರಾನ್ ಕೂಡಾ
*ತಂತ್ರದಿಂದ ಮತ್ತು ಉಪದೇಶಗಳ ಮೂಲಕ* ಇಸ್ಲಾಮಿನ ದಾವತ್ ನೀಡಲು ನಮ್ಮಲ್ಲಿ ಪ್ರೇರಿಪಿಸಿದೆ.
ತೀವ್ರ ಜ್ವರದಿಂದ ಬಳಲುವ ಮಗುವಿಗೆ ಎಷ್ಟೇ ಸ್ವಾದಿಷ್ಠ ಫುಡ್ ಕೊಟ್ಟರೂ ಅದು ಕಹಿಯಾಗಿರುತ್ತದೆ.
ಅದು ಆ ಫುಡ್ ನ ಕೊರತೆ ಅಲ್ಲ. ಬದಲಾಗಿ ಅದು ಅವನಲ್ಲಿರುವ ರೋಗದ ಕೊರತೆ ಎಂಬ ಸತ್ಯವನ್ನು ತಿಳಿದ ನಾವು ಡಾಕ್ಟರ್ ಕೊಟ್ಟ ಕಹಿಯಾದ ಮದ್ದನ್ನು ಅತ್ಯಂತ ನಾಜೂಕಿನಿಂದ ಆಕಾಶದಲ್ಲಿರುವ ಚಂದ್ರನನ್ನು ತೋರಿಸಿ ಅದಕ್ಕೆ 'ತಂಬ' ಎಂಬ ಹೊಸ ಹೆಸರಿಟ್ಟು ಕರೆದು ಹೇಗಾದರೂ ಮಾಡಿ ಅವನಿಗೆ ಕಹಿಯಾಗಿರುವ ಆ ಮದ್ದನ್ನು ಕುಡಿಸಿ ಅವನ ರೋಗವನ್ನು ಶಮನಗೊಳಿಸುತ್ತೇವೆ.
ಅದೇ ರೀತಿ ಇಸ್ಲಾಮನ್ನು ತಪ್ಪಾಗಿ ಅರ್ಥೈಸಿದವರಿಗೆ ಅದು ಕಹಿಯಾಗಿರುತ್ತೆ ನಿಜ. ಅಂತಹ ಜನರ ಬಳಿ ನಾವು ಹೋಗಿ ನಾವು ದಾವತ್ ಮಾಡಬೇಕು.ಅದಕ್ಕೆ ಹಲವಾರು ದಾರಿಗಳಿವೆಯಾದರೂ ಅದರಲ್ಲೊಂದು ದಾರಿಯಾಗಿದೆ ಅವರನ್ನು ನಮ್ಮ ಸಭೆಗೆ ಕರೆದು ಸಂವಹನ ರೂಪದಲ್ಲೋ,ಸೌಹಾರ್ದ ರೂಪದಲ್ಲೋ ಇಸ್ಲಾಮಿನ ಕುರಿತು ಸವಿಸ್ತಾರವಾಗಿ ಹೇಳುವಾಗ ಅವರಿಗೆ ಇಸ್ಲಾಮಿನ ಕುರಿತು ಸಣ್ಣ ರೂಪದಲ್ಲಿ ಮನದಟ್ಟಾಗುತ್ತದೆ.
ಇಸ್ಲಾಮನ್ನು ಕಲಿಯಲು ಅವರಿಗೆ ಅದು ಉತ್ತೇಜನವಾಗುತ್ತದೆ.
ಎಲ್ಲರಲ್ಲೂ ಬದಲಾವಣೆ ತರಲು ಸಾದ್ಯವಿಲ್ಲದಿದ್ದರೂ ಅವರ ಬಿಗು ನಿಲುವಿನಲ್ಲಿ ಸ್ವಲ್ಪವಾದರೂ ಸಡಿಲಿಕೆ ಬಂದರೆ ಅದು ಕೂಡಾ ನಮಗೆ ಪ್ಲಸ್ ಆಗಿರುತ್ತದೆ.
ನಮ್ಮ ಮದರಸದ ಕುರಿತು ತಪ್ಪಗ್ರಹಿಕೆ ಉಂಟಾಗಿ ಅದನ್ನು ಕಟ್ಟಾ ವಿರೋಧಿಸುವ ಸೂಲಿಬೆಲೆಯನ್ನೇ ನಮ್ಮ ವೇದಿಕೆಗೆ ಕರೆದು ಅವನೊಂದಿಗೆ ನಮ್ಮ ನಾಯಕರು ಮದರಸದ ಕುರಿತು ವಿವರಣೆ ನೀಡಿದಾಗ ಅವನಿಗೆ ಮನದಟ್ಟಾಗಿ ನೀವು ಹೇಳುವಂತಹ ಮದರಸದ ಬಗ್ಗೆ ನಮಗೆ ಯಾವುದೇ ಸಂಶಯವಿಲ್ಲ ಎಂದು ಅವನಲ್ಲಿ ಹೇಳಿಸಲಿಕ್ಕೆ ಸಾದ್ಯವಾದುದು, ಮಾತ್ರವಲ್ಲ ಮದರಸದ ಕುರಿತು ಉದ್ದುದ್ದ ಬರಹ ಬರೆಯುತ್ತಿದ್ದ ಸೂಲಿಬೆಲೆಯ ಬಿಗಿ ನಿಲುವಿನಲ್ಲಿ ಸಡಿಲಿಕೆ ಉಂಟಾದುದನ್ನು ನಾವು ಗಮನಿಸಿದ್ದೇವೆ.
ಅದು ನಮ್ಮ ಎಸ್ಸೆಸ್ಸೆಫ್ ನಾಯಕರ ಧೀರ್ಘ ದೃಷ್ಟಿ ಎಂಬುದರಲ್ಲಿ ಸಂಶಯವಿಲ್ಲ.
ಸೂಫಿ ಸಮ್ಮೇಳನ ಮಾಡುವ ಮೂಲಕ ಪ್ರದಾನಿಯವರ ಮೂಲಕವೇ ಅಸ್ಮಾಉಲ್ ಹುಸ್ನಾ ದಲ್ಲಿರುವ ಅಲ್ಲಾಹನ ಹೆಸರಲ್ಲಿ ಶಾಂತಿ ಮಾತ್ರ ಇರುವುದೆಂದು ಇಸ್ಲಾಮ್ ಭಯೋತ್ಪಾದನೆಯನ್ನು ಯಾವತ್ತೂ ಸಹಿಸಲ್ಲ ಎಂದು ಹೇಳಿಕೆ ಕೊಡಿಸಲಿಕ್ಕೆ ಸಾದ್ಯವಾಯಿತು.
ಒಬ್ಬ ದೇಶದ ಪ್ರಧಾನಿ, ಅದೂ ಕೂಡಾ ಆರ್ ಎಸ್ ಎಸ್ ಬಿಜೆಪಿಯ ಪ್ರತಿನಿಧಿಯ ಬಾಯಿಯಿಂದ ಇಸ್ಲಾಮಿನ ಕುರಿತು ಅಂತಹ ಮೆಸ್ಸೇಜ್ ಬರುವಾಗ ಅದು ಕೇವಲ ಪ್ರಧಾನಿಯನ್ನು ಮಾತ್ರ ಸೀಮಿತಗೊಳಿಸದೆ ಭಾರತದ ಪ್ರತಿಯೊಬ್ಬನ ಕಿವಿಗಳಿಗೂ ಅತ್ಯಂತ ಸುಲಭದಲ್ಲಿ ಇಸ್ಲಾಮಿನ ಕುರಿತು ಶಾಂತಿಯ ಸಂದೇಶ ನೀಡಲು ಸಾದ್ಯವಾಗುತ್ತದೆಯೆಂಬ ಅತ್ಯಂತ ಧೀರ್ಘ ದೃಷ್ಟಿ ಇರುವುದರಿಂದಲೇ ಸುಲ್ತಾನುಲ್ ಉಲಮಾ ಎಪಿ ಉಸ್ತಾದರಂತಹ ಮಹಾನುಭಾವರು ದೆಹಲಿಯ ಸೂಫಿ ಸಮ್ಮೇಳನದಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿ ನಮಗೆ ಮಾದರಿ ತೋರಿಸಿದರು.
ಆದರೆ ನಾವು ಪರಸ್ಪರ ಕೆಸರೆರಚಾಟದಲ್ಲೇ ತಲ್ಲೀನರಾಗಿ ಸೊಬಗರಂತೆ ನಟಿಸುತ್ತಾ ಉಸ್ತಾದರ ಬಿಳಿ ವಸ್ತ್ರಕ್ಕೆ ಕೇಸರಿ ಪೈಂಟ್ ಹಚ್ಚುವುದರಲ್ಲೇ ಪುಳಕಿತಗೊಂಡೆವು.
ನಿನ್ನೆ ಕೂಡಾ ಮಂಗಳೂರು ಖಾಝಿ ಆ ಕಾರ್ಯಕ್ರಮಕ್ಕೆ ಹೋದದ್ದು ನನ್ನ ಪ್ರಕಾರ ತಪ್ಪಲ್ಲ.
ಅದು ಯಾವ ಪ್ರೋಗ್ರಾಂ ಎಂದು ಅವರಿಗೆ ಗೊತ್ತಿರಲಿಲ್ಲ,ಪೋಲಿಸರು ಕರೆದು ಆಹ್ವಾನ ನೀಡಿದ್ದರಿಂದ ಹೋದದ್ದು, ಬಿಜೆಪಿಯ ಮುಖ್ಯ ನೇತಾರರು ಕರೆದುದರಿಂದ ಹೋಗದೆ ನಿರ್ವಾಹವಿರಲಿಲ್ಲ! ಮುಂತಾದ ಸುಳ್ಳು ಸಮಾಜಾಯಿಷಿಕೆಯ ಅಗತ್ಯವೂ ಇಲ್ಲ.
ನನ್ನ ಪ್ರಕಾರ ತ್ವಾಖಾ ಉಸ್ತಾದ್ ಹೋದದ್ದು ಯಾವುದೇ ತಪ್ಪಿಲ್ಲ. ಆದರೆ ಅಲ್ಲಿ ಅವರ ಚಟುವಟಿಕೆ ಪ್ರಭಾಷಣ ಎಲ್ಲವೂ ಹಳಿ ತಪ್ಪಿದೆ ಎಂದು ಹೇಳದೆ ನಿರ್ವಾಹವಿಲ್ಲ.
ಬೆಳಕು ಉರಿಸಲು ನಿರ್ಬಂದಿಸಲಾಗಿದೆ ಎಂದು ಅವರ ಕೈ ಯ ಫೋಟೋದ ತುಂಡು ಮಾತ್ರ ತೆಗೆದು ಶೂಟ್ ಮಾಡಿದಾಗ ಅನಿಸುತ್ತದೆಯಾದರೂ, ಅವರ ಇಡೀ ಫೋಟೋ ಕಾಣುವಾಗ ಅವರ ಬೋಡೀಲ್ಯಾಂಗಜ್ ದೀಪ ಉರಿಸಲಿಕ್ಕೆ ಅವರು ಸನ್ನದ್ದರಾಗಿದ್ದರು ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ.
ಅದೇನೇ ಇರಲಿ.
ಅವರಿಗೆ ಅದನ್ನು ನಯವಾಗಿ ತಿರಸ್ಕರಿಸಿ ತನ್ನ ಪ್ರಭಾಷಣದ ಸಮಯ ಬಂದಾಗ ಇಸ್ಲಾಮಿನ ಸೌಹಾರ್ದತೆ ಏನೆಂದು, ಬೆಳಕನ್ನು ಯಾಕಾಗಿ ನಾವು ಹಚ್ಚದೆ ನಿರಾಕರಿಸುತ್ತೇವೆ ಎಂಬುದರ ರೀಝನ್ ಸೌಮ್ಯವಾಗಿ ಹೇಳಬಹುದಿತ್ತು.
ಜೊತೆಗೆ ಇಸ್ಲಾಮಿನ ಶಾಂತಿಯ ಸಂದೇಶ ಕೂಡಾ ಹೇಳಬಹುದಿತ್ತು.
ಸೌಹಾರ್ದ ಎಂದರೆ ಮುಸ್ಲಿಮರು ಹಿಂದುಗಳ ದೇವಸ್ಥಾನ ಕ್ಕೆ ಹೋಗಿ ಭಜನೆ ಮಾಡುವುದು,ದೀಪ ಉರಿಸುವುದು,ಅದೇ ರೀತಿ ಹಿಂದುಗಳು ಮಸೀದಿಗೆ ಬಂದು ನಮಾಜು ಮಾಡುವುದು,ಇದ್ಯಾವುದೂ ಅಲ್ಲ ಬದಲಾಗಿ ಎಲ್ಲರೂ ಅವರವರ ಧರ್ಮನುಷ್ಠಾನ ಮಾಡುತ್ತಾ ಪರಸ್ಪರ ನಂಬಿಕೆಯಿಂದ ಪ್ರೀತಿಯಿಂದ ಪರಸ್ಪರ ಸಹಾಯ ಮಾಡುತ್ತಾ ಪ್ರೀತಿ ಸಾಹೋದರ್ಯತೆಯಿಂದ ಬದುಕುವುದು, ಪರರಿಗೆ ದ್ರೋಹ ಬಗೆಯಬಾರದೆಂದಲ್ಲ, ಅಂತಹ ನೀಚ ಚಿಂತನೆ ಕೂಡಾ ಮನಸ್ಸಲ್ಲಿ ಹುಟ್ಟಬಾರದೆಂಬುದಾಗಿದೆ ಇಸ್ಲಾಮಿನ ಸೌಹಾರ್ದ. ನಮ್ಮ ಮದರಸದಲ್ಲಿ ನಾವು ನಮ್ಮ ಮಕ್ಕಳಿಗೆ ಕಲಿಸುವುದು ಕೂಡಾ ಅದನ್ನೇ ಎಂಬ ಇಸ್ಲಾಮಿನ ಸುಂದರ ಮೆಸ್ಸೇಜ್ ನ್ನು ರವಾನಿಸುವ ಬಹಳ ಒಳ್ಳೆಯ ವೇದಿಕೆಯೊಂದು ಮಂಗಳೂರು ಖಾಝಿ ಗೆ ಅಲ್ಲಿತ್ತು.
ಆದರೆ ಅವರು ಅದನ್ನು ಮಿಸ್ಸ್ ಮಾಡಿಕೊಂಡರು ಎಂದಾಗಿದೆ ನನ್ನ ಅಭಿಪ್ರಾಯ.
ಇನ್ನು ಕೆಲವರು ಹೆದರಿಸುವಂತೆ MRM ರಾಷ್ಟ್ರೀಯ ಮಂಚ್ ಎಂದೆಲ್ಲಾ ಹೇಳುತ್ತಾ ಕೂರದೆ ಅವರಾಗಿಯೇ ನಮ್ಮನ್ನು ಕರೆಯುವ ಸಭೆಗೆ ಹೋಗುವಾಗ ಪ್ರಿಪೇರಾಗಿ ಇಸ್ಲಾಮಿನ ಸಂದೇಶ ಅವರೊಂದಿಗೆ ಹಂಚುತ್ತಾ ಅವರ ಕುತಂತ್ರಗಳಿಗೆ ತಂತ್ರಪರವಾಗಿ ಸಡ್ಡು ಹೊಡೆದು ನಮ್ಮ ಕಠಿಣ ಶತ್ರುಗಳ ಮುಂದೆಯೂ ಧೈರ್ಯದಿಂದ ಎದೆಯುಬ್ಬಿಸಿ ಇಸ್ಲಾಮನ್ನು ಪ್ರಚಾರ ಮಾಡುವ ಗಡಸುತನ ತೋರಿಸುವ ಬದಲು ನಾವು, ಆಲಿಂಗಳ ಬಿಳಿ ವಸ್ತ್ರ ಗಳಿಗೆ ಕೇಸರಿ ಬಣ್ಣ ಹಾಕಿ ' *ಖಾಕಿ ಮೌಲಾನಾ'* ಎಂದು ಮುದ್ರೆ ಒತ್ತುವುದರಲ್ಲೇ ವಿಗ್ನಸಂತೋಷ ಪಟ್ಟೆವು.
ತಂತ್ರ ಬುದ್ದಿ ಎಲ್ಲವೂ RSS ನ ಮಾತ್ರ ಸೊತ್ತಾ? ನಮಗೂ ಕೂಡಾ ಯಾಕೆ ಯ್ಯೂಝ್ ಮಾಡಬಾರದು?
- ಅಬೂಶಝ
No comments:
Post a Comment