*ಉಸ್ತಾದ್ ಮತ್ತು ಕೇಸ್*
*-----------------*
ಆ ಮುಸ್ಲಿಯಾರ್ ಕಂಬಿ ಎಣಿಸುವ ಕ್ಷಣಕ್ಕಾಗಿ ಅವರು ಜಾತಕ ಪಕ್ಷಿಯಂತೆ ಕಾಯುತ್ತಿದ್ದರು!
CBI ಛೇಂಬರ್ ನಿಂದ ಹೊರಬರುವಾಗ ಮುಸ್ಲಿಯಾರರ ಕೈಗಳಿಗೆ ಕೋಳಜಡಿಯಲ್ಪಟ್ಟ ಫೋಟೋದ ಶೂಟ್ ಗಾಗಿ ಅವರು ಹಾತೊರೆಯುತ್ತಿದ್ದರು!
ಮ್ಲಾನವದನ ಮುಖದ ಫೋಟೋವನ್ನು ಕ್ಲಿಕ್ಕಿಸಿ ಮರುದಿನ ಪತ್ರಿಕೆಯ ಮುಖಪುಟದಲ್ಲಿ ಅಚ್ಚುಹಾಕಲು ತುದಿಗಾಲಲ್ಲಿ ನಿಂತಿದ್ದರು!
ಆದರೆ ಆ ಮುಸ್ಲಿಯಾರ್ CBI ಅಧಿಕಾರಿಗಳ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿ ಛೇಂಬರ್ನಿಂದ ಹಸನ್ಮುಖಿಯಾಗಿ ಹೊರಬರುವುದನ್ನು ಕಂಡಾಗ ವಿರೋಧಿಗಳು ಒಂದು ಕ್ಷಣ ದಂಗಾದರು!
ತಮ್ಮ ಕೈಗಳಲ್ಲಿರುವ ಐಕೋನ್ ಕ್ಯಾಮರಗಳು ತನ್ನಿಂತಾನೆ ಕೆಳಗಾದವು!
ಪತ್ರಕರ್ತರು ಸುತ್ತುವರಿದು ಏನಾಯಿತೆಂದು ಪ್ರಶ್ನಿಸಿದರು.
"CBI ಏನು ಪ್ರಶ್ನೆ ಕೇಳಿತೋ ಅದಕ್ಕೆಲ್ಲಾ ಸಮರ್ಪಕ ಉತ್ತರ ನೀಡಿದ್ದೇನೆ." ಎಂದು ಮುಗುಳ್ನಗುತ್ತಾ, ಹೇಳಿ,ಮುಸ್ಲಿಯಾರ್ ವಾಹನ ಹತ್ತಿ ತನ್ನ ಆಸ್ಥಾನದ ಕಡೆ ಸಂಚರಿಸಿದರು.!
ಆ ಮುಸ್ಲಿಯಾರ್
*ಎಪಿ ಉಸ್ತಾದರಾಗಿದ್ದರು!*
ಕೇಸ್
*ಚೇಗನ್ನೂರು ಕೊಲೆಯಾಗಿತ್ತು!*
ಇದು ಸುಮಾರು ಇಪ್ಪತ್ತೈದು ಮೂವತ್ತು ವರ್ಷಗಳ ಮುಂಚಿನ ಕಥೆ!
ಆವಾಗಲೇ
*ಕಾಂತಪುರಂ ಮೇಲೆ ಕೇಸ್!*
*ಕಾಂತಪುರಂ ಬಂಧನ ಸಾದ್ಯತೆ!* ಅಂತ ವಿರೋಧಿಗಳು ಹಗಲುಕನಸು ಕಾಣುತ್ತಾ ಇದ್ದಾರೆ.
ಇದೆಲ್ಲಾ ಈಗಿನ MSF ನ ಶಿಶುಗಳಿಗೆ ಗೊತ್ತಿರಲಿಕ್ಕಿಲ್ಲ.
ಪಾಪ ಮುದಿ ನಾಯಕರು ತಮ್ಮ ಮುಪ್ಪುವಿನ ಈ ಸಮಯದಲ್ಲಾದರೂ ಕಾಂತಪುರಂ ಕಂಬಿ ಎಣಿಸುವ ಚಿತ್ರ ಕಂಡು ಬಹು ಕಾಲದ ಆಶೆ ಈಡೇರಿದ ಸಮಾದಾನದಿಂದ ಕಣ್ಣು ಮುಚ್ಚಬಹುದೆಂಬ ಆಗ್ರಹದಿಂದ ಮೊಮ್ಮಕ್ಕಳ ಮಕ್ಕಳನ್ನು ಸಹ ಮರ್ಕಝ್ ನ ಗೇಟ್ ಬಳಿ ಕಳುಹಿಸಿದ್ದಾರೆ!
ಜೊತೆಗೆ ಅವರಿಂದಲೇ ಕೇಸ್ ಕೊಡಿಸಿದ್ದಾರೆ!
ಜಾತ್ಯಾತೀತ ಭಾರತದಲ್ಲಿ ಯಾವ ಅಂಡಲೆಯುವ ಬಿಕರಿ ಕೇಸ್ ಕೊಟ್ಟರೂ ಅದನ್ನು ಫೈಲ್ ಮಾಡಿ ತನಿಖೆಗೆ ಆದೇಶಿಸುವುದು ಪೋಲಿಸ್ ಡ್ಯೂಟಿ.
ನಂತರ ಕೋರ್ಟ್ ನಲ್ಲಿ ಸತ್ಯ ಮಿಥ್ಯ ಬೇರ್ಪಡುತ್ತದೆ.
ಆದರೆ ಮರಿಗಳಿಗೆ ಅಷ್ಟೊಂದು ಕ್ಷಮೆ ಇಲ್ಲ.
ಅವರು ಈಗಲೇ ಕಾಂತಪುರಂ ಬಂಧನ ಎಂದು ಅರಚುತ್ತಾ ಸಂಭ್ರಮಿಸುತ್ತಿದ್ದಾರೆ!
ಲೋ ಕಾಲೇಜ್ ನಡೆಸುತ್ತಿರುವ ಕಾಂತಪುರಂ ಉಸ್ತಾದರ ವಿರುದ್ದ ಸಿಲ್ಲಿ ಪೆಟಿಶೇನ್ ಫೈಲ್ ಹಿಡ್ಕೊಂಡು ಓಡಾಡುತ್ತಿದ್ದಾರೆ ಪುಟಾಣಿಗಳು!
"ಅವರು ನಿಮ್ಮಲ್ಲಿ ಸುನ್ನಿಯಾ ಎಂದು ಕೇಳಲ್ಲ,
ಸಳಪಿಯಾ ಎಂದು ಕೇಳಲ್ಲ,
ಎಪಿ/ಈಕೆ ಎಂದು ಪ್ರಶ್ನಿಸಲ್ಲ,
ಅವರಿಗೆ ಬೇಕಾದದ್ದು ಮುಸ್ಲಿಮರ ರಕ್ತವಾಗಿದೆಯೆಂದು, ಫ್ಯಾಶಿಸಂ ವಿರುದ್ದ ಈಮಾನ್ ಬಿಸಿಯಾಗಿ fb ವಾಟ್ಸಪ್ ನಲ್ಲಿ ಕಮಂಟ್ಸಿದವರು ಕೂಡಾ ಕಾಂತಪುರಂ ಬಂಧನಕ್ಕೆ ಆಗ್ರಹಿಸಿ ಮುಷ್ಠಿ ಹಿಡಿದು, ಸಂಘಿ ಚಡ್ಡಿಗಳಿಗೆ ಮುಸ್ಲಿಮ್ ಸಂಸ್ಥೆಗಳಿಗೆ ಸುಲಭದಲ್ಲಿ ದಾಳಿ ಮಾಡಲು ಏಣಿ ಹಾಕಿ ಕೊಟ್ಟಿದ್ದಾರೆ!
ಚಡ್ಡಿ ಸಂಘಿಗಳನ್ನು ಪಕ್ಕದಲ್ಲಿ ಕುಳ್ಳಿರಿಸಿ ದರಣಿಯಲ್ಲಿ ಇವರು ಐಕ್ಯ ಪ್ರದರ್ಶಿಸಿದ್ದಾರೆ!
ಮುಖವಾಡ ಕಳಚಿದೆ ಎಂದು ತಪ್ಪಿಯೂ ಭಾವಿಸಬೇಡಿ,ಇಲ್ಲ,ಕಳಚಿಲ್ಲ!
ಧರಣಿ ಮುಗಿದು ಲಿಂಬೆ ಶರಬತ್ತಿನಿಂದ ಸಂಘಿಯೊಂದಿಗೆ ಇಪ್ತಾರ್ ಮುಗಿಸಿ ಪುನಃ ಮೋದಿ ಜತೆಗಿರುವ ಎಪಿ ಉಸ್ತಾದರ ನಾಲ್ಕು ಫೋಟೋಗಳನ್ನು ಅಲ್ಲಿಂದ ಇಲ್ಲಿಂದ ಹೆಕ್ಕಿ ತಂದು ಅಚ್ಚು ಹಾಕಿ
*ಕಾವಿ ಮೌಲಾನಗಳು* ಅಂತ ಹೆಡ್ಡಿಂಗ್ ಹಾಕಿದರೆ ಸಾಕು.
ಧರಣಿಯಲ್ಲಿ ಸಂಘಿ ಜೊತೆ ಸೇರಿ ಸುರುಟಿ ಸುಕ್ಕವಾದ ಈಮಾನ್ ಪುನಃ ಟ್ರಾಕ್ಗೆ ಬರಲು ಅದು ದಾರಾಳ ಸಾಕು!
ಆವಾಗಲೇ ಐಕ್ಯ ಪುಟಾಣಿಗಳು ಎಲ್ಲವನ್ನು ಮೆರೆತು fb ಯಲ್ಲಿ " ಅವ್ರು ಸುನ್ನಿ ಸಳಪಿ ನೋಡಲ್ಲ,ಎಪಿ/ಈಕೆ ನೋಡಲ್ಲ ಅಂತ ಕಮಂಟ್ಸಿಸಲು ಶುರುಮಾಡಿರುತ್ತಾರೆ.
ಕಳೆದ ವರ್ಷ ಪೇರೋಡ್ ಉಸ್ತಾದರ ಬಂಧನದ ಕುರಿತು ವಿರೋಧಿಗಳು ಸಂಭ್ರಮಪಟ್ಟಿದ್ದರು!
ಪಾರಕ್ಕಡವ್ ಎಂಬ ಪ್ರದೇಶದಲ್ಲಿ ಉಸ್ತಾದ್ ನಡೆಸುವ ಸಂಸ್ಥೆಯ ವಿರುದ್ದ ಶತ್ರುಗಳು ಐಕ್ಯವಾಗಿದ್ದರು.
ತನಿಖೆ ನಡೆದು ನಿರಪರಾದಿತ್ವ ಬಹಿರಂಗವಾದಾಗ ಉಸ್ತಾದರ ಬಂಧನದ ಕನಸು ಕಾಣುತ್ತಿದ್ದ ಎಲ್ಲಾ ಬಿಕರಿಗಳು ಎಸ್ಕೇಪ್ ಆಗಿದ್ದರು!
ಮರ್ಕಝ್ ನ ಅತೀದೊಡ್ಡ ಸಂಭ್ರಮವಾದ ನೋಲೆಜ್ ಸಿಟಿ ಯ ವಿರುದ್ದ ಇದೇ ಪೋಕ್ರಿಗಳು ಕೇಸು ಕೊಟ್ಟಿದ್ದರು. ಬೆಕ್ಕಿನಂತಹ ಸಾಕುಪ್ರಾಣಿಗಳು ಮಾತ್ರವಿರುವ ಆ ಪ್ರದೇಶದಲ್ಲಿ ಹುಲಿ ಚಿರತೆ ಜಿಂಕೆಗಳಿದ್ದು ಮರ್ಕಝ್ ನೋಲಜ್ ಸಿಟಿ ಆರಂಭಿಸಿದರೆ ಅವುಗಳ ಪ್ರಾಣಕ್ಕೆ ಅಪಾಯವಿದೆಯೆಂಬ ಸುಳ್ಳು ಕೇಸ್ ಹಾಕಿ ಅದೆಷ್ಟೋ ತಿಂಗಳು ಅದರ ಕಾಮಗಾರಿ ನಡೆಯದಂತೆ ಇದೇ ಪೋಕ್ರಿಗಳು ತಡೆದಿದ್ದರು.
ಆದ್ದರಿಂದಲೇ ಲಕ್ಷಗಟ್ಟಲೆ ರೂಪಾಯಿ ಮರ್ಕಝ್ ಗೆ ನಷ್ಟವಾಗಿತ್ತು.ಜೊತೆಗೆ ಕಾಮಗಾರಿಯೂ ವಿಳಂಬವಾಗಿತ್ತು.
ಆವಾಗಲೂ ಸೈಬರ್ ವೀರರು
*ಮರ್ಕಝ್ ನೋಲಜ್ ವಿರುದ್ದ ಕೇಸ್!* ಅಂತ ಪೋಸ್ಟ್ ಹಾಕಿ ಸಂಭ್ರಮಿಸುತ್ತಿದ್ದರು!
ನಂತರ ಕೇಸ್ ಟುಸ್ಸ್ ಆದಾಗ ಅವರವ ಪತ್ತೆಯೇ ಇಲ್ಲ.
ಇದೀಗ ಅವರು ಕಾಂತಪುರಂ ಉಸ್ತಾದ್ ಬಂಧನವೆಂದು ಸಂಭ್ರಮಿಸುತ್ತಿದ್ದಾರೆ.ಇವರ ಸಂಭ್ರಮದ ಆಯುಷ್ಯ ಎಷ್ಟೆಂದು ನೋಡೋಣ.
ಕೊನೆಯದಾಗಿ....
ನೀವು ಐವತ್ತು ವರ್ಷಗಳಿಂದ ಆ ಉಸ್ತಾದರ ಬಂಧನಕ್ಕಾಗಿ,ನಾಶಕ್ಕಾಗಿ ಕಾಯುತ್ತಿದ್ದೀರಿ.ಆದರೆ ಒಂದೇ ಒಂದು ಬಾರಿ ನಿಮ್ಮ ನಾಶಕ್ಕಾಗಿ ಆ ಉಸ್ತಾದರು ಆಗ್ರಹಿಸಲಿಲ್ಲ!
ನಿಮಗೆಲ್ಲರಿಗಾಗಿ ಉಸ್ತಾದ್ ಭಾರತ ಸಹಿತ ವಿಶ್ವದ ಮೂಲೆ ಮೂಲೆ ಸಂಚರಿಸಿ ಧ್ವನಿಯೆತ್ತುತ್ತಿದ್ದಾರೆ.
ಬಹುಮಾನ್ಯ ಯೂಸುಫಲಿ ಸಾಹುಬ್ ಹೇಳುವಂತೆ,
ಉಸ್ತಾದ್, ಅರಬ್ ದೊರೆಗಳ ಬಾಗಿಲು ಬಡಿದು,ಭಾರತದ,ಕೇರಳದ ಸಮುದಾಯದ ಮಕ್ಕಳಿಗಾಗಿ ಬೇಡುತ್ತಿದ್ದಾರೆ.
ಸಮುದಾಯದ ಮಕ್ಕಳು ಉನ್ನತಿಯ ಉತ್ತುಂಗ ಶ್ರೇಯಸ್ಸಿನಲ್ಲಿ ವಿರಾಜಿಸುವುದನ್ನು ಅವರು ಬಯಸುತ್ತಾರೆ.
ಮೂರು ಸಾವಿರದಷ್ಟು ತಂದೆ ಇಲ್ಲದ ಯತೀಮ್ ಮಕ್ಕಳನ್ನು ಕಷ್ಟಪಟ್ಟು ಬೆಳೆಸುತ್ತಾರೆ!
ಉಸ್ತಾದರಿಗೆ ಆ ಕಂದಮ್ಮಗಳ ದುಆ ಸಾಕಲ್ಲವೇ?
ದಯಮಾಡಿ ಉಸ್ತಾದರನ್ನು ಅರಗಿಸಿಕೊಳ್ಳಲು ನಿಮಗೆ ಸಾದ್ಯವಾಗುದಿಲ್ಲವಾದರೂ ಜೊತೆ ಸೇರಲು ಮನಸ್ಸಿಲ್ಲದಿದ್ದರೂ ಉಪದ್ರವ ಕೊಡಬೇಡಿ...
ಉಸ್ತಾದರಿಗೆ ಯಾವುದೇ ನಷ್ಟ ಇಲ್ಲ.
ನೀವು ಉಸ್ತಾದರ ದಾರಿಯಲ್ಲಿ ಕಂಟಕ ನಿರ್ಮಿಸುವಾಗ
ಪ್ರಿಯ ಉಸ್ತಾದರನ್ನು ನಂಬಿ ಅವರನ್ನು ಕಾಯುತ್ತಿರುವ ಸಮುದಾಯದ ಬಡ ಮಕ್ಕಳು,ಯತೀಮ್ ಮಕ್ಕಳು ಸಹಿತ ಹಲವರ ಬದುಕು ದುಸ್ತರವಾಗುತ್ತದೆ.
ಅವರನ್ನು ನೆನೆಸಿಯಾದರೂ ದಾರಿ ಬಿಟ್ಟುಕೊಡಿ...
ಉಸ್ತಾದ್ ಸಂಚರಿಸಲಿ....
ದೀನರ ಬಡವರ ಬವಣೆ ನೀಗಲಿ..
ಜಸ್ಟ್ ಅಷ್ಟಾದರೂ ಉಪಕಾರ ಮಾಡಿನೋಡಿ.
ಅಲ್ಲಾಹು ಅನುಗ್ರಹಿಸಲಿ....
- ಅಬೂಶಝ
No comments:
Post a Comment