*ಮಣ್ಣಾರ್ಕ್ಕಾಡ್ ಮತ್ತೊಂದು 'ಉಹ್ದ್'ನ ಪುನರಾವರ್ತನೆಯೇ❓*
-----------------------------------------
ಮಣ್ಣಾರ್ಕ್ಕಾಡ್ MLA ಒಬ್ಬ ರಕ್ತದಾಹಿಯೆಂದು ಪಕ್ಷ ಸಂಘಟನೆ ಭೇಧವಿಲ್ಲದೆ ಎಲ್ಲರಿಗೂ ತಿಳಿದಿರುವ ವಿಚಾರ.
ಎರಡು ಸಹೋದರರನ್ನು ಅತ್ಯಂತ ಭೀಭತ್ಸವಾಗಿ,
(ಎಕ್ಸ್ ಪ್ಲೈನ್ ಮಾಡಲು ಪದವಿಲ್ಲ)
ಅಂದರೆ ಮೂಗು ಕತ್ತರಿಸಿ, ಕಣ್ಣು ಸೀಳಿ,ಪ್ರಾಣಸಂಕಟದಿಂದ ನೀರು ಕೇಳಿದಾಗ ಪೇಂಟ್ ನ ಜಿಪ್ಪ್ ತೆಗೆದು ಮೂತ್ರ ಕುಡಿಸಿದ ಅತ್ಯಂತ ಹೇಯ ಕೊಲೆ ಮಾಡಿದ ಕೊಲೆಗಾರರು ಈ MLA ಯ
ಬೆಂಬಲಿಗರಾದ ಮುಸ್ಲಿಮರು ಎಂದು ಹೇಳುವಾಗ ಮಾನವೀಯತೆ ಕ್ಷೀಣಿಸದ ಯಾವನೇ ಒಬ್ಬನ ಹೆಣೆಯಲ್ಲಿ ನೆರಿಗೆ ಬಂದರೆ ಅದು ಅವನ ತಪ್ಪಾ❓
ಇಂತಹ ಕರುಣೆ ಇಲ್ಲದ ಕಟುಕರಿಗೆ ಕೇವಲ ಎರಡೇ ಎರಡು ದಿನಗಳಲ್ಲಿ ಜಾಮೀನು ದೊರಕಿಸಿ ಕೊಟ್ಟು ಮೃತ ಕುಟುಂಬದವರಿಗೆ ಬೆದರಿಕೆ ಕೊಡುತ್ತಾ ವೀರಾಜಮಾನವಾಗಿ ತಿರುಗಾಡಲು ಅವಕಾಶ ಮಾಡಿಕೊಟ್ಟ MLA ಯ ವಿರುದ್ದ ಮತ ಚಲಾಯಿಸಬೇಕೆಂದು ಉಸ್ತಾದ್ ತನ್ನ ಶಿಷ್ಯಂದಿರಲ್ಲಿ ಹೇಳಿದ್ದು ತಪ್ಪಾ❓
ಅನೀತಿ ಅಕ್ರಮ ಅನ್ಯಾಯಕ್ಕೆ ಒತ್ತುಕೊಡುವ ಒಬ್ಬ MLA ಗೆ ನೀವು ಬೆಂಬಲ ಕೊಡಬಾರದೆಂದು ಒಬ್ಬ ತಂದೆ ಪುತ್ರನಿಗೆ ಉಪದೇಶಿಸುವಂತೆ ಉಸ್ತಾದ್ ತನ್ನ ಶಿಷ್ಯಂದಿರಿಗೆ ಉಪದೇಶಿಸಿದ್ದು ತಪ್ಪಾ❓
ಅಕ್ರಮದ ವಿರುದ್ದ ಹೋರಾಡುವಂತೆ ತನ್ನ ಶಿಷ್ಯಂದಿರಿಗೆ ಕರೆಕೊಡಬೇಕಾದ ಭಾದ್ಯತೆ ಒಬ್ಬ ಉಸ್ತಾದಿಗೆ ಇಲ್ಲವೇ❓
ಉಸ್ತಾದರ ಉಪದೇಶವನ್ನು ಅಪ್ಪಟವಾಗಿ ಕಾರ್ಯಗತಗೊಳಿಸುವ ನಿಮಿತ್ತ ಶಿಷ್ಯಂದಿರು ಕೊಲೆಗೆಡುಕರ ವಿರುದ್ದ *ಮತ* ಎಂಬ ಆಯುಧದೊಂದಿಗೆ ಹೋರಾಟಕ್ಕೆ ದುಮುಕಿದ್ದು ಅವರು ಮಾಡಿದ ತಪ್ಪಾ❓
ಆ ಹೋರಾಟದಲ್ಲಿ ಅವರು ಸಂಪೂರ್ಣವಾಗಿ ವಿಜಯ ಸಾಧಿಸುತ್ತೇವೆಂದು ಮನಗಂಡ ಅಕ್ರಮ ರಾಜಕೀಯದವರು ವಕ್ರದಾರಿ ಹಿಡಿದಾಗ ನೀತಿನ್ಯಾಯದ ಪರವಾಗಿ ಹೋರಾಡಿದ ಶಿಷ್ಯಂದಿರಿಗೆ ಸ್ವಲ್ಪ ಹಿನ್ನಡೆ ಸಂಭವಿಸಿದ್ದನ್ನು ಪುಣ್ಯ ರಸೂಲ್ ಸಲ್ಲಲ್ಲಾಹು ಅಲೈಹಿವಸಲ್ಲಮರ ಆದೇಶದ ಮೇರೆಗೆ ಉಹ್ದ್ ಯುದ್ದದಲ್ಲಿ ಹೋರಾಡಿದ ಶಿಷ್ಯಂದಿರನ್ನು ಪರಾಜಿತಗೊಳಿಸಲು ಸಾದ್ಯವಿಲ್ಲ ಎಂದು ಮನಗಂಡ ಶತ್ರುಗಳು ವಕ್ರದಾರಿ ಹಿಡಿದಿದುರ ಪುನರಾವರ್ತನೆಯಾಗಿಯೇ ವ್ಯಾಖ್ಯಾನಿಸಿದರೆ ಅದು ತಪ್ಪೆಂದು ನನಗೆ ಅನಿಸುತ್ತಿಲ್ಲ.
ಉಸ್ತಾದರಾದ ಪುಣ್ಯ ರಸೂಲರ ಉಪದೇಶದ ಮೇರೆಗೆ ಹೋರಾಟ ಮಾಡುತ್ತಿದ್ದ ಹಝ್ರತ್ ಹಂಝ (ರ) ರವರನ್ನು ಯಾವುದೇ ರೀತಿಯಲ್ಲಿ ಮಣಿಸಲು ಅಸಾಧ್ಯವೆಂದು ಮನಗಂಡ ಶತ್ರುಗಳು *ವಹ್ಶಿ*ಎಂಬ ದಾಸನ ಮೂಲಕ ಹಿಂಬದಿಯಿಂದ ಬಾಣ ಎಸೆದು ಕೊಂದ ವಕ್ರದಾರಿ ಚರಿತ್ರೆಯ ಪುನರಾವರ್ತನೆ ಮಣ್ಣಾರ್ಕ್ಕಾಡ್ ನಲ್ಲಿ ಮತ್ತೊಮ್ಮೆ ಸಂಭವಿಸಿದೆ.
ಆದರೆ ಬೇಸರ ಅದಲ್ಲ ಇದೆಲ್ಲವೂ ತಿಳಿದ ನಂತರವೂ ಕೆಲವರು ಕೇಳುತ್ತಾರೆ ಉಸ್ತಾದರಿಗೆ ಇದು ಬೇಕಿತ್ತಾ?
ಸುಮ್ಮನೆ ಕೂರಬಹುದಿತ್ತಲ್ಲ? ಯಾಕೆ ರಾಜಕೀಯದಲ್ಲಿ ತಲೆತೂರಿಸುವುದು?
ವಿದ್ವಾಂಸರು ಅವರ ಕೆಲಸ ಮಾಡಿದರೆ ಸಾಕಲ್ಲವೇ?
ಅವರಂತೆಯೇ ಇರುವ ಮತ್ತೊಂದು ಸಂಘಟನೆಯ ಉಸ್ತಾದರು ಇಂತಹ ಅನ್ಯಾಯದ ವಿರುದ್ದ ಮತ ಚಲಾಯಿಸಬೇಕೆಂದು ಹೇಳದೆ ಮೌನ ಪಾಲಿಸಿದ್ದರಿಂದಲೇ ಅವರ ಬಗ್ಗೆ ಯಾರಿಗೂ ತಕರಾರು ಇಲ್ಲ.ಅವಹೇಳನ ಇಲ್ಲ.ಪರಿಹಾಸ್ಯ ಇಲ್ಲ.ಯಾಕಾಗಿ ಇಂತಹ ಅನಗತ್ಯ ಉಸಾಬರಿ ಎಂದು ಕೇಳುತ್ತಾರೆ.
ನಿಜವಾಗಿಯೂ ಅವರು ಆತ್ಮವಿಮರ್ಶೆ ನಡೆಸಬೇಕು.
ಅನ್ಯಾಯ ಅಕ್ರಮದ ವಿರುದ್ದ ಮತ ಚಲಾಯಿಸಬೇಕೆಂದು ಹೇಳಬೇಕಾದದ್ದು ಒಬ್ಬ ವಿಧ್ವಾಂಸನ ಕರ್ತವ್ಯ ತಾನೇ❓
ಅವರೇ ಮೌನ ಪಾಲಿಸಿ ಬೆಂಬಲ ಸೂಚಿಸಿದರೆ ಅವರ ಪಾಂಡಿತ್ಯಕ್ಕೆ ಬೆಲೆ ಎಲ್ಲಿದೆ❓
ಅವರು ವಿವರವಿಲ್ಲದ ಜನರ ಅಪಹಾಸ್ಯಕ್ಕೆ ಗುರಿಯಾಗದೆ ಸೇಫ್ ಆಗಬಹುದಾದರೂ ಅಲ್ಲಾಹನ ಮುಂದೆ ಸೇಫ್ ಆಗುವರೇ❓
ಗತಕಾಲದ ವಿದ್ವಾಂಸರ ಚರಿತ್ರೆ ನೋಡುವುದಾದರೆ ಸತ್ಯ ಮತ್ತು ನ್ಯಾಯದ ಪರ ಧ್ವನಿ ಎತ್ತಿದ ಇಮಾಂ ಶಾಫಿ( ರ) ರವರನ್ನು ತಲೆಗೆ ಬಡಿದು ಕೊಲ್ಲಲಾಯಿತು.!
ಇಮಾಮ್ ಹಂಬಲ್ (ರ) ವರಿಗೆ ಚಾಟಿಯೇಟು ನೀಡಲಾಯಿತು!!
ಇಮಾಂ ಮಾಲಿಕ್ (ರ) ರವರನ್ನು ಕತ್ತೆಯ ಮೇಲೆ ಕುಳ್ಳಿರಿಸಿ ಮೆರವಣಿಗೆ ಮಾಡಿ ಅಪಹಾಸ್ಯ ಮಾಡಲಾಯಿತು!!!
ಇಮಾಂ ಅವರನ್ನು ಕತ್ತೆಯ ಮೇಲೆ ಕುಳ್ಳಿರಿಸಿ ಶತ್ರುಗಳು ಕೇಕೆ ಹಾಕಿ ಕುಣಿದು ಕುಪ್ಪಳಿಸುವಾಗ ಮಾಲಿಕ್ ಇಮಾಂ ರವರು ದಾರಿಯುದ್ದಕ್ಕೂ ನೋಡುತ್ತಲಿದ್ದ ಜನರೊಂದಿಗೆ ಈ ರೀತಿ ಹೇಳುತ್ತಿದ್ದರು.
"ನನ್ನ ಪರಿಚಯ ಇರುವವರಿಗೆ ಇದೆ. ಇಲ್ಲದವರಿಗೆ ಹೇಳುತ್ತೇನೆ ನಾನು ಮಾಲಿಕು ಬಿನ್ ಅನಸ್ ಆಗಿದ್ದೇನೆ"
ಅಂದರೆ ಅದರ ಅರ್ಥ ಸತ್ಯ ನ್ಯಾಯಕ್ಕಾಗಿ ಧ್ವನಿ ಎತ್ತಿದ ಕಾರಣದಿಂದಾಗಿ ನನ್ನನ್ನು ಇವರು ಅಪಹಾಸ್ಯ ಮಾಡುತ್ತಿದ್ದಾರೆ.
ಅದು ನನಗೆ ಅಭಿಮಾನ!
ಹಾಗಾಗಿ ನನ್ನ ಪರಿಚಯ ನಿಮಗೆ ಹೇಳುತ್ತಿದ್ದೇನೆ!
ವಿಧ್ವಾಂಸರಾದರೇ ಅನ್ಯಾಯ ಅಕ್ರಮದ ವಿರುದ್ದ ಸಮರ ಸಾರುವಂತೆ ಆಹ್ವಾನ ಕೊಡಬೇಕು. ಕಾಯಿಕೊಡುವ ಮರಕ್ಕೆ ಕಲ್ಲು ಬೀಳುತ್ತದೆಯೇ ಹೊರತು ,ಫಲಕೊಡದ ಉಪಕಾರವಿಲ್ಲದ ಒಣಗಿದ ಮರಕ್ಕೆ ಯಾರೂ ಕಲ್ಲೂ ಹೊಡೆಯುವುದಿಲ್ಲ.
ಆದ್ದರಿಂದಲೇ ಇಮಾಂ ಬುಖಾರಿ (ರ) ರವರನ್ನು ಅನ್ಯಾಯದ ವಿರುದ್ದ ಧ್ವನಿ ಎತ್ತಿದ ಕಾರಣದಿಂದಾಗಿ ಊರಿನಿಂದಲೇ ಬಹಿಷ್ಕಾರ ಹಾಕಲಾಗಿತ್ತು!
ಮರಣ ಹೊಂದಿದಾಗ ಖಬರ್ ತೋಡಲು ಶತ್ರುಗಳು ಬಿಡದ ಕಾರಣ ಅರ್ಧರಾತ್ರಿ ಮನೆಯೊಳಗೆ ಖಬರ್ ತೋಡಿ ಧಫನ ಮಾಡಬೇಕಾದ ದಯನೀಯ ಅವಸ್ಥೆ ಎದುರಿಸಿದ ಇಮಾಂಗಳ ಚರಿತ್ರೆ ಇದೆ.
ಅದೇ ಗತ ಕಾಲದ ಚರಿತ್ರೆಯ ಪುನರಾವರ್ತನೆ ಇಂದು ನಾವು ಮಣ್ಣಾರ್ಕ್ಕಾಡ್ ನಲ್ಲಿ ಕಾಣುತ್ತಿದ್ದೇವೆ.
ಕಾರಣ ಆ ಉಸ್ತಾದ್ ಗತಕಾಲ ವಿದ್ವಾಂಸರ ಸರಣಿಯಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ.
ಮತ್ತೊಂದು ವಿಷಯ ನೀವು ಗಮನಿಸಿದ್ದೀರಾ❓
ಅಕ್ರಮ ರಾಜಕೀಯಕ್ಕೆ ಬೆಂಬಲ ನೀಡಿದ MLA ಶಂಸುದ್ದೀನ್ ನ ವಿರುದ್ದ ಮತಚಲಾಯಿಸ ಬೇಕೆಂದು ಉಸ್ತಾದ್ ಕರೆಕೊಟ್ಟಾಗ ಅದರ ವಿರುದ್ದ ಧ್ವನಿ ಎತ್ತಿದ್ದು ಕೇವಲ ಮುಸ್ಲಿಂ ಲೀಗ್ ಪಕ್ಷ ಮಾತ್ರವಲ್ಲ ಬದಲು ಸಳಪಿ ಜಮಾತ್ ಸಹಿತ ಎಲ್ಲರೂ ಜತೆ ಸೇರಿದರು!
ಕಾರಣ ಅವರಿಗೆ ಕೊಲ್ಲಲ್ಪಟ್ಟ ಎರಡು ಸಹೋದರರ ಅನಾಥ ಮಕ್ಕಳ ಬಾಡಿದ ಮುಖಕ್ಕಿಂತ ದೊಡ್ಡದು *ಕಾಂತಪುರಂ ವಿರೋಧವಾಗಿತ್ತು!!*
ಎಲ್ಲರಿಗೂ ಹೇಳಲಿಕ್ಕಿದ್ದ ನ್ಯಾಯ ಒಂದೇ
*ಕಾಂತಪುರಂ ಕರೆ ಕೊಟ್ಟಿದ್ದರಿಂದ ಶಂಸು ಗೆಲ್ಲಬೇಕು!*
*ಕಾಂತಪುರಂ ಉಸ್ತಾದ್ ಯಾಕಾಗಿ ಆ ಕರೆ ಕೊಟ್ಟಿದ್ದಾರೆಂಬ ವಿಷಯ ಅವರಿಗೆ ಬೇಡವಾಗಿತ್ತು!!*
ಅಂದರೆ ಮುಂದೊಮ್ಮೆ ಅಕ್ರಮ ಅತ್ಯಾಚಾರ ದರೋಡೆ ಮಾಡಿದ ನಿಮಿತ್ತ ಜೈಲಲ್ಲಿ ಕೊಳೆಯುತ್ತಿರುವ ಒಬ್ಬ ಚುನಾವಣೆಗೆ ನಿಂತಾಗ ಅವನನ್ನು ಸೋಲಿಸುವಂತೆ ಎಪಿ ಉಸ್ತಾದ್ ಕರೆ ಕೊಟ್ಟರೆ ಅವನನ್ನು ಹೇಗಾದರೂ ಮಾಡಿ ಜಯಗೊಳಿಸಲು ಇವರು ಪಣತೊಡುವರು!!!
ಅದಕ್ಕಾಗಿ ಬಿಜೆಪಿ ಆರ್ ಎಸ್ ಎಸ್ಸ್ ನ್ನು ಜತೆ ಸೇರಿಸಲು ಇವರು ಹೇಸಲ್ಲ.
ಮಂಜೇಶ್ವರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಎಪಿ ಉಸ್ತಾದರಿಗೆ *ಪದ್ಮಶ್ರೀ*ವಾಗ್ದಾನ ನೀಡಲಾಗಿದೆ ಎಂದು ಒಂದು ಹಳದಿ ಪತ್ರ ವರದಿ ಮಾಡಿದಾಗ ಅದಕ್ಕೆ ಪ್ರಚಾರ ನೀಡಿ ಶಹರ್ ಮಾಡುವಲ್ಲಿ ಸಾವಿರಾರು ಮಂದಿ ಪೈಪೋಟಿಯಲ್ಲಿದ್ದರು!
ಆದರೆ ಅದೇ ಪತ್ರ ಆ ವಾರ್ತೆ ವ್ಯಾಜವೆಂದು ಹೇಳಿ ಕ್ಷಮಾಪಣೆ ಮಾಡಿದ ವರದಿಯನ್ನು ಬಿತ್ತರಿಸಿದಾಗ ಅದನ್ನು ಪೋಸ್ಟ್ ಮಾಡುವ ಬಟನ್ ಒತ್ತಲು ಅವರನ್ನು ಕಾಣಲೇ ಇಲ್ಲ!!
ಅಂದರೆ *ಕಾಂತಪುರಂ* ಎಂಬ ಅಕ್ಷರದ ವಿರುದ್ದ ವಿರೋಧಿಗಳೆಲ್ಲಾ ಒಂದಾಗುತ್ತಾರೆ.ಅದು ನಾವು ಈ ವರೆಗೆ ಕಂಡ ಟ್ರೆಂಡ್!
ಅಲ್ಲಿ ನೀತಿ ನ್ಯಾಯಕ್ಕೆ ಬೆಲೆ ಇಲ್ಲ ಕೇವಲ *ಕಾಂತಪುರಂ ವಿರೋಧ ಮಾತ್ರ!!*
ಪಾಲಕ್ಕಾಡ್ ಜಿಲ್ಲೆಯ ಮಣ್ಣಾರ್ಕ್ಕಾಡ್ ಹೊರತು ಪಡಿಸಿ ಬಾಕಿ ಮಂಡಲಗಳಲ್ಲಿ ಬಿಜೆಪಿಗೆ 40 ಸಾವಿರದಷ್ಟು ಮತಗಳು ಲಭ್ಯವಾದಾಗ ಮಣ್ಣಾರ್ಕಾಡ್ ನಲ್ಲಿ ಮಾತ್ರ ಬಿಜೆಪಿ ಗೆ 07ಸಾವಿರದ ಏಳ್ನೂರು ಮತಗಳು ಸಿಕ್ಕಿದೆ ಹಾಗಾದರೆ ಬಾಕಿ ಮತಗಳು ಎಲ್ಲಿ ಹೋಯಿತು ಎಂದು ಬುಧ್ದಿ ಇರುವವರಿಗೆ ತಿಳಿಯುತ್ತದೆ.
ಇದನ್ನೇ ವಕ್ರದಾರಿ ಎಂದು ಹೇಳುವುದು.
ಇಂತಹ ವಕ್ರದಾರಿಯನ್ನೇ ಉಹ್ದ್ ಯುದ್ದದಲ್ಲಿ ಹಂಝ(ರ) ರವರ ವಿರುದ್ದ ಉಪಯೋಗಿಸಲಾಗಿತ್ತು.
ಆದರೆ ಸುನ್ನಿಗಳಿಗೆ ಈ ವಕ್ರದಾರಿ ಸಲ್ಲದು.
ಆದ್ದರಿಂದಲೇ ಮಣ್ಣಾರ್ಕ್ಕಾಡ್ ನಲ್ಲಿ ಶಂಸುವಿನ ಜಯದಿಂದ ರಕ್ತಬೆರೆತ ಪಾಪದ ಕಲೆಯನ್ನು ಇಲ್ಲದಾಗಿಸಲೂ ಸಾದ್ಯವಿಲ್ಲ.
ಆ ವಿಜಯ MLA ಎಂಬ ಅರ್ಹತೆಗೆ ಸಂದ ಗೌರವವೂ ಅಲ್ಲ.
ಪ್ರಜಾಪ್ರಭುತ್ವದಲ್ಲಿ ಬೃಷ್ಟಾಚಾರ ,ಅಕ್ರಮ ,ಅನ್ಯಾಯ ಮಾಡಿದವರು ಆರಿಸಿಬರಬಾರದೆಂದು ನಾವು ಆಗ್ರಹಿಸಿದ ಅದೆಷ್ಟೋ ಮಂದಿ ಈಗಲೂ ಅಧಿಕಾರದ ರುಚಿ ಅನುಭವಿಸುತ್ತಾ ಇದ್ದಾರೆ.
ನಮಗೇನು ಮಾಡಲು ಸಾದ್ಯ?
ಒಂದಂತು ನಿಜ ಮಣ್ಣಾರ್ಕ್ಕಾಡ್ ನಲ್ಲಿ ವಕ್ರದಾರಿ ಹಿಡಿದು ವಿಜಯದ ನಗೆ ಬೀರಿದ್ದರೂ ಕೊಲ್ಲಲ್ಪಟ್ಟ ಸಹೋದರರ ಅನಾಥ ಮಕ್ಕಳು ಮತ್ತು ವಿಧವೆಯರಾದ ಎರಡು ಸ್ತ್ರೀ ಗಳ ಕಣ್ಟೀರು ಮತ್ತು ಎಂಬತ್ತು ವಯಸ್ಸು ದಾಟಿದ ಆ ಉಮ್ಮ ರವರ ದುಆ ಇವರನ್ನು ಬೇಟೆಯಾಡುವಾಗ ಇಂದಿನ ಸಿಹಿ ಅನುಭವ ಕಹಿಯಾಗಿ ಬೇಟೆಯಾಡುವುದು ಖಂಡಿತ.
ಅಕ್ರಮ ಅನ್ಯಾಯದ ವಿರುದ್ದ ಕರೆಕೊಟ್ಟ ಒಂದೇ ಕಾರಣಕ್ಕಾಗಿ ಉಸ್ತಾದ್ ಮತ್ತು ಅನುಯಾಯಿಗಳು ಒಬ್ಬಂಟಿಯಾಗಿದ್ದಾರೆ.
ಅಪಹಾಸ್ಯಗಳ ಸುರಿಮಳೆಯನ್ನೇ ಎದುರಿಸುತ್ತಿದ್ದಾರೆ.
ಹೌದು ನಾವು ಒಬ್ಬಂಟಿಯಾಗಿದ್ದೇವೆ.
ನಮ್ಮೆಲ್ಲರ ಮಾರ್ಗದರ್ಶಿ ತಾಜುಲ್ ಉಲಮಾರ ಅಂದಿನ ಮಾತು ಕೂಡಾ ಅದೇ ಆಗಿತ್ತು *ವಲವ್ ಕಾನ ವಹ್ದೀ*
ಒಬ್ಬಂಟಿಯಾದರೂ ಸರಿ ಅಕ್ರಮ ಅನ್ಯಾಯದ ವಿರುದ್ದ ನಮ್ಮ ಹೋರಾಟ ಸಾಗಬೇಕು.
ಅದಕ್ಕಾಗಿ ಅಲ್ಲಾಹನ ಮತ್ತು ರಸೂಲ್ ಸಲ್ಲಲ್ಲಾಹು ಅಲೈಹಿವಸಲ್ಲಮರ ಸಹಾಯ ಮಾತ್ರ ನಮಗೆ ಸಾಕು.
ವಿಶ್ವದ ಎಲ್ಲಾ ಇಸಂ ಗಳು *ಇಸ್ಲಾಂ* ನ್ನು ಒಬ್ಬಂಟಿ ಮಾಡಿದ ಹಾಗೆ ಅದೇ ಇಸ್ಲಾಂ ನ ಪಥದಲ್ಲಿರುವ ನಮ್ಮನ್ನು ಎಲ್ಲರೂ ಒಬ್ಬಂಟಿ ಮಾಡುವಾಗ ಅಭಿಮಾನ ಉಕ್ಕಿ ಉಕ್ಕಿ ಬರುತ್ತದೆ.
ಕತ್ತೆಯ ಮೇಲೆ ಕುಳ್ಳಿರಿಸಿ ಇಮಾಂ ಮಾಲಿಕನ್ನು ಶತ್ರುಗಳು ಮೆರವಣಿಗೆ ಮಾಡಿದಾಗ ಮಹಾನುಭಾವರಿಗೆ ಅಭಿಮಾನ ಉಕ್ಕಿ ಬಂದ ಹಾಗೆ....
✍ ಅಬೂಶಝ
No comments:
Post a Comment